371ನೇ ಕಲಂ ತಿದ್ದುಪಡಿಗೆ ಒತ್ತಾಯಿಸಿ ಇದೇ 24ರಂದು ಹೈದ್ರಾಬಾದ್ ಕರ್ನಾಟಕದ ಬಂದ್ ಗೆ ಕರೆ ನೀಡಲಾಗಿದೆ. ನಿನ್ನೆ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ನಡೆದ ಪೂರ್ವಬಾವಿ ಸಭೆಯಲ್ಲಿ ಬಂದ್ ಕುರಿತು ಚರ್ಚಿಸಲಾಯಿತು. ವೈಜನಾಥ್ ಪಾಟೀಲ್, ಅಬ್ದುಲ್ ರಜಾಕ್ ಉಸ್ತಾದ್, ಹೆಚ್.ಎಸ್.ಪಾಟೀಲ್, ಅಲ್ಲಮಪ್ರಭು ಬೆಟ್ಟದೂರು, ರಾಘವೇಂದ್ರ ಪಾನಘಂಟಿ, ಶ್ರೀನಿವಾಸ ಗುಪ್ತಾ, ಸಂದ್ಯಾ ಮಾದಿನೂರು, ಕೆ.ಎಂ.ಸಯ್ಯದ್ , ಭೂಸನೂರಮಠ, ಬಸವರಾಜ್ ಕೋಟೆ, ಮಹೇಶ, ಕಾಸಿಂ ಅಲಿ ಮುದ್ದಾಬಳ್ಳಿ , ಮುನಿಯಪ್ಪ ಹುಬ್ಬಳ್ಳಿ ಸೇರಿದಂತೆ ವಿವಿಧ ಸಂಘ , ಸಂಸ್ಥೆಗಳವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದ್ ಯಶಸ್ವಿಗೊಳಿಸಲು ಕರೆ ನೀಡಿದರು
0 comments:
Post a Comment