ಶ್ರೀ ಶಾರದಾ ಸಂಗೀತ ಮತ್ತು ಸಂಸ್ಕೃತ ಶಿಕ್ಷಣ ಸಂಸ್ಥೆ (ರಿ) ೧೧ನೇ ವರ್ಷಾಚರಣೆ
ಕೊಪ್ಪಳ : ಇಲ್ಲಿನ ಶ್ರೀ ಶಾರದಾ ಸಂಗೀತ ಮತ್ತು ಸಂಸ್ಕೃತ ಶಿಕ್ಷಣ ಸಂಸ್ಥೆ (ರಿ) ೧೧ನೇ ವರ್ಷದ ಸಂಪೂರ್ಣ ರಾತ್ರಿ ಶಾಸ್ತ್ರೀಯ, ವಾದ್ಯ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ನಗರದ ರಾಘವೇಂದ್ರ ದೇವಸ್ಥಾನದ ಆವರಣದಲ್ಲಿ ದಿ.ಹನುಮಂತರಾವ್ ಬಂಡಿ ವೇದಿಕೆಯಲ್ಲಿ ಇತ್ತೀಚೆಗೆ ಯಶಸ್ವಿಯಾಗಿ ಜರುಗಿತು.


ವಸಂತ ಪೂಜಾರರವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಒಂದು ದಶಕದಿಂದಲೂ ಸಂಸ್ಥೆಯೊಂದಿಗೆ ನನಗೆ ಅತಿ ನಿಕಟ ಸಂಪರ್ಕವಿದ್ದು, ಎಂತಹ ಕಷ್ಟ ಕಾಲದಲ್ಲೂ ದಿ.ಹನುಮಂತರಾವ್ ಬಂಡಿಯವರು ತಮ್ಮ ಸಂಗೀತ ಸೇವೆಯನ್ನು ನಿಲ್ಲಿಸಿದ್ದಿಲ್ಲ. ಅಹೋರಾತ್ರಿ ಸಂಗೀತ ಕಾರ್ಯಕ್ರಮವನ್ನು ಪ್ರಾರಂಭಿಸಿವುದರೊಂದಿಗೆ ಕೊಪ್ಪಳ ಜನತೆಗೆ ಸಂಗೀತದ ಸವಿ ಉಣಬಡಿಸಿದ್ದಾರೆ. ಈ ಸಮಯದಲ್ಲಿ ಅವರನ್ನು ನೆನೆಸಿಕೊಳ್ಳುವುದು ಅತ್ಯಂತ ಅವಶ್ಯಕ. ಅವರು ಕಟ್ಟಿಕೊಂಡಿದ್ದ ಕನಸನ್ನು ಬೆಳೆಸುವುದು ಪ್ರತಿಯೊಬ್ಬ ಸಂಗೀತಾಸಕ್ತರ ಕರ್ತವ್ಯವಾಗಿದ್ದು ಈ ನಿಟ್ಟಿನಲ್ಲಿ ಇಂತಹ ಸಂಗೀತ ಕಾರ್ಯಕ್ರಮಗಳನ್ನು ಎಲ್ಲರೂ ಬೆಳೆಸಿ ಈ ಸಂಗೀತ ಸಂಸ್ಥೆಗೆ ಸಹಕಾರ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ವೇದಿಕೆ ಮೇಲೆ ಮುಖ್ಯ ಅತಿಥಿಗಳಾಗಿ ಜಿಲ್ಲೆಯ ಹಿರಿಯ ಸಂಗೀತ ಕಲಾವಿದರಾದ ಮಾಧವರಾವ ಇನಾಂದಾರ್, ಹನುಮಸಾಗರದ ವಾಜೇಂದ್ರಚಾರ್ಯ ಜೋಶಿ ಸೇರಿದಂತೆ ನಗರಸಭೆ ಸದಸ್ಯರಾದ ಇಂದಿರಾ ಭಾವಿಕಟ್ಟಿ, ವಿಷ್ಣು ತೀರ್ಥಗುಬ್ಬಿ, ವಿರುಪಾಕ್ಷಪ್ಪ ಮೋರನಾಳ, ಹಾಗೂ ನಗರ ಸಭೆಯ ಮಾಜಿ ಸದಸ್ಯರಾದ ಸುರೇಶ ಗಂಗೂರ್ ಹಾಗೂ ನ್ಯಾಯವಾದಿಗಳು ರಾಘವೇಂದ್ರ ಪಾನಘಂಟಿ ಮತ್ತಿತರರು ಉಪಸ್ಥಿತರಿದ್ದರು.

ಇದಕ್ಕೂ ಮುಂಚೆ ಪ್ರಾಧಿಕಾರದ ಅಧ್ಯಕ್ಷ ಅಪ್ಪಣ್ಣ ಪದಕಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶಂಕರ ಬಿನ್ನಾಳ, ಗ್ರಾಮೀಣ ವೃತ್ತದ ಸಿ.ಪಿ.ಐ ವೆಂಕಟಪ್ಪ ನಾಯಕ, ಗುಪ್ತದಳದ ಮಾರುತಿ ಪೂಜಾರ ಮತ್ತಿತರರನ್ನು ಸನ್ಮಾನಿಸಲಾಯಿತು. ಪ್ರಾರಂಭದಲ್ಲಿ ವಾದಿರಾಜ ಪಾಟೀಲ್ ಸ್ವಾಗತಿಸಿದರು, ಭೀಮಸೇನ ಇಂದರಗಿ ಕಾರ್ಯಕ್ರಮ ನಿರೂಪಿಸಿದರೆ ಶ್ರೀನಿವಾಸ ಜೋಶಿ ಕೊನೆಯಲ್ಲಿ ವಂದಿಸಿದರು.
0 comments:
Post a Comment