PLEASE LOGIN TO KANNADANET.COM FOR REGULAR NEWS-UPDATES


ಗಂಗಾವತಿ, ಅ.೦೮ : ಅಖಿಲ ಭಾರತ ಮಟ್ಟದ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ ಸಲ್ಲದು, ಸಮ್ಮೇಳನದ ಯಶಸ್ಸಿಗೆ ಸರ್ವರೂ ಶ್ರಮಿಸೋಣ ಎಂದು ನಗರ ಅಲಂಕಾರ ಮತ್ತು ಮಹಾದ್ವಾರ ಸಮಿತಿಯ ಉಪಾಧ್ಯಕ್ಷ   ಸತ್ಯನಾರಾಯಣ ದೇಶಪಾಂಡೆ ಶ್ರೀರಾಮನಗರ ಹೇಳಿದರು.
ಅವರು ನಗರದ ಎ.ಪಿ.ಎಂ.ಸಿ ಆವರಣದಲ್ಲಿರುವ ಸಮ್ಮೇಳನದ ಸ್ವಾಗತ ಸಮಿತಿ ಕಛೇರಿಯಲ್ಲಿ ನಗರ ಅಲಂಕಾರ ಮತ್ತು ಮಹಾದ್ವಾರ ಸಮಿತಿಯ ಸಭೆಯಲ್ಲಿ ಮಾತನಾಡುತ್ತಾ, ನಮ್ಮ ಭಾಗಕ್ಕೆ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ದೊರೆತಿರುವುದು ನಮ್ಮೆಲ್ಲರ ಸೌಭಾಗ್ಯವೇ ಸರಿ. ಈ ಸಮ್ಮೇಳನದ ಯಶಸ್ಸಿಗೆ ಸರ್ವರೂ ಎಲ್ಲ ರೀತಿಯಿಂದಲೂ ಕಂಕಣಬದ್ಧರಾಗೋಣ. ರಾಜಕೀಯ ಬೆರಸದೆ, ಒಬ್ಬರ ಮೇಲೊಬ್ಬರು ಆಪಾದನೆ ಮಾಡುವುದನ್ನು ಬಿಟ್ಟು, ಹಂತ ಹಂತವಾಗಿ ಸಮ್ಮೇಳನಕ್ಕಾಗಿ ಉಳಿದ ಸ್ವಲ್ಪ ಸಮಯವನ್ನು ಸದುಪಯೋಗ ಪಡಿಸಿಕೊಂಡು ಮಾದರಿ ರೀತಿಯಲ್ಲಿ ಸಮ್ಮೇಳನ ವಿಜ್ರಂಭಿಸುವಂತೆ ಮಾಡುವ ಮಹತ್ವದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ನಗರ ಅಲಂಕಾರ ಮತ್ತು ಮಹಾದ್ವಾರ ಸಮಿತಿಯ ಅಧ್ಯಕ್ಷರಾದ ಶ್ರೀ ಭುವನೇಶ ಹೊಸಕೇರಿ ಮಾತನಾಡಿ, ನಗರ ಅಲಂಕಾರದ ಸಂಪೂರ್ಣ ಜವಬ್ದಾರಿಯನ್ನು ಸಮಿತಿಗೆ ವಹಿಸಿಕೊಡಿ, ನಗರದಲ್ಲಿ ಕನ್ನಡ ತಾಯಿ ಭುವನೇಶ್ವರಿಯ ಜಾತ್ರೆಗೆ ವಿಶಿಷ್ಟವಾದ ರೀತಿಯಲ್ಲಿ ನಗರವನ್ನು ಅಲಂಕರಿಸಲು ಬದ್ಧರಾಗಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸ್ವಾಗತ ಸಮಿತಿಯ ಪ್ರಧಾನಕಾರ್ಯದರ್ಶಿಗಳು ಹಾಗೂ ಜಿಲ್ಲಾ ಕ.ಸಾ.ಪ.ದ ಅಧ್ಯಕ್ಷರಾದ ಶೇಖರಗೌಡ ಮಾಲಿಪಾಟೀಲ, ಜಿಲ್ಲಾ ಕ.ಸಾ.ಪ.ದ ಗೌರವ ಕಾರ್ಯದರ್ಶಿ  ಎಸ್.ಬಿ.ಗೊಂಡಬಾಳ, ಸಮ್ಮೇಳನದ ಸಹಕಾರ್ಯದರ್ಶಿ ಹಾಗೂ ತಾಲೂಕಾ ಕ.ಸಾ.ಪ.ದ ಅಧ್ಯಕ್ಷರಾದ    ಬಸವರಾಜ ಕೋಟಿ, ಸಮಿತಿಯ ಸದಸ್ಯರಾದ  ಕೆ.ಆರ್. ವೆಂಕಟೇಶ, ಸಮಿತಿಯ ಪ್ರಧಾನಕಾರ್ಯದರ್ಶಿ  ನರಸಪ್ಪ ಅಮರಜ್ಯೋತಿ ಮುಂತಾದವರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top