PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಸರಕಾರಿ ಪದವಿ ಕಾಲೇಜಿನ ತರಗತಿಗಳನ್ನು ಬೆಳಗಿನ ಅವಧಿಗೆ ನಡೆಸಲು ಒತ್ತಾಯಿಸಿ ಎಸ್.ಎಫ್.ಐ ಕಾಲೇಜಿನ ಎದುರು ಪ್ರತಿಭಟನೆ ಹಮ್ಮಿಕೊಂಡಿತ್ತು. ಪದವಿ ತರಗತಿಗಳನ್ನು ಮೊದಲಿಗೆ 7 ರಿಂದ 11 ಗಂಟೆಗೆ ನಿಗದಿ ಮಾಡಲಾಗಿತ್ತು. ಆದರೆ ಈಗ 11 ರಿಂದ ಸಂಜೆ 5 ಗಂಟೆಯವರೆಗೆ ವೇಳೆ ಬದಲಾವಣೆ ಮಾಡಿರುವುದರಿಂದ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ಬಹಳ ತೊಂದರೆಯಾಗುತ್ತಿದೆ. ಆದ್ದರಿಂದ ವೇಳೆ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಗೆ ಮಣಿದ ಪ್ರಾಚಾರ್ಯ ರಾಘವೇಂದ್ರಾಚಾರ್ ಬೆಳಗಿನ ವೇಳೆಯಲ್ಲಿ ತರಗತಿಗಳನ್ನು ನಡೆಸಲು ಒಪ್ಪಿದರು. ಪ್ರತಿಭಟನೆಯಲ್ಲಿ ಎಸ್ ಎಫ್ ಐ ಜಿಲ್ಲಾಧ್ಯಕ್ಷ ಗುರುರಾಜ ದೇಸಾಯಿ, ಮಾರುತಿ ಮೇಗಳಮನಿ, ಸುಭಾನ್ , ಸೈಯದ್, ವಿಠಲ್, ರೇಣುಕಾ ಇನ್ನಿತರರು ಭಾಗವಹಿಸಿದ್ದರು.

Advertisement

0 comments:

Post a Comment

 
Top