PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಅ. ೧೪: ಡೆಂಗ್ಯೂ ಜ್ವರ ಕುರಿತಂತೆ ಸಾರ್ವಜನಿಕರಲ್ಲಿ ಹಲವಾರು ತಪ್ಪು ಕಲ್ಪನೆಗಳಿದ್ದು, ಡೆಂಗ್ಯೂ ಜ್ವರದಿಂದ ಮೃತಪಟ್ಟ ಪ್ರಕರಣಗಳಿಗೆ ಸರ್ಕಾರದ ವತಿಂದ ಯಾವುದೇ ತರಹದ ಸಹಾಯಧನ ಅಥವಾ ಪರಿಹಾರ ಧನ ನೀಡಲಾಗುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಸಿ.ಬಿ. ಬಸವರಾಜ್ ಅವರು ಸ್ಪಷ್ಟಪಡಿಸಿದ್ದಾರೆ.
ಡೆಂಗ್ಯೂ ಜ್ವರವನ್ನು ಖಚಿತಪಡಿಸುವ ಪರೀಕ್ಷಾ ಪದ್ಧತಿಗಳು ಯಾವುದೇ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವುದಿಲ್ಲ, ಡೆಂಗ್ಯೂ ಜ್ವರ ಪ್ರಕರಣಗಳಿಗೆ ಹೆಚ್ಚಿನ ಪರೀಕ್ಷೆ ಹಾಗೂ ಚಿಕಿತ್ಸೆಯು ಹುಬ್ಬಳ್ಳಿಯ ಕಿಮ್ಸ್ ಹಾಗೂ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಉಚಿತವಾಗಿ ದೊರೆಯುತ್ತದೆ. ಸಂಶಯಾಸ್ಪದ ಮತ್ತು ಖಚಿತಪಟ್ಟ ಎಲ್ಲ ಡೆಂಗ್ಯೂ ರೋಗಿಗಳು ಹುಬ್ಬಳ್ಳಿಯ ಕಿಮ್ಸ್ ಅಥವಾ ಬಳ್ಳಾರಿಯ ವಿಮ್ಸ್ ಸಂಸ್ಥೆಗಳಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಸಿ.ಬಿ. ಬಸವರಾಜ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

1 comments:

  1. DEAR SIR, WE ARE NOT EXPECTING ANY COMPENSATION FROM YOUR SIDE, KINDLY CONTROL THE FEVER, PUTTING FOGGING, AVAILABILITY OF MEDICINS IN DISTRICT HOSPITALS, ALREADY WE HEARD THAT IN YELBURGA ONE PATIENT [DIED IN GERMON HOSPITAL GADAG,AND ONE OF OUR BEST TEACHER MS. RESHMIYA, SFS SCHOOL ARE DIED [ IN K.L.E HOSPITAL, BELGAUM] BECAUSE OF THIS DENGUE FEVER,

    HENCE KINDLY TAKE ACTION TO CONTROL THE FEVER.

    ReplyDelete

 
Top