PLEASE LOGIN TO KANNADANET.COM FOR REGULAR NEWS-UPDATES




ಇಂದು ಬೆಳಿಗ್ಗೆ ೮-೦೦ ಗಂಟೆಗೆ ಜಿಲ್ಲಾ ಪೊಲೀಸ್ ಕಛೇರಿಯ ಆವರಣದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಗೌರವಾನ್ವಿತ ಶ್ರೀ ಸಿ.ಎಸ್. ಮಾಳಗಿ, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಕೊಪ್ಪಳರವರು ಆಗಮಿಸಿ, ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿದರು. ಅದೇ ರೀತಿಯಾಗಿ ಶ್ರೀ ಈಶ್ವರಚಂದ್ರ ವಿದ್ಯಾಸಾಗರ, ಐಪಿಎಸ್, ಪೊಲೀಸ್ ವರಿಷ್ಠಾಧಿಕಾರಿಗಳು, ಪೊಲೀಸ್ ಅಧಿಕಾರಿ/ಸಿಬ್ಬಂದಿಗಳು, ನಗರದ ಹಿರಿಯ ಗಣ್ಯವ್ಯಕ್ತಿಗಳು, ಪತ್ರಕರ್ತರು, ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿದರು. ಶ್ರೀ ವೈ.ಕೆ. ಕಾಶಪ್ಪನವರ್, ಆರ್‌ಪಿಐ ಡಿಎಆರ್ ರವರ ನೇತೃತ್ವದಲ್ಲಿ ಹುತಾತ್ಮರಿಗೆ ನೀಡುವ ಗೌರವ ಸಮರ್ಪಣೆಯ ಕವಾಯತು ನಡೆಯಿತು.

Advertisement

0 comments:

Post a Comment

 
Top