PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಬಸವಣ್ಣನ ಬಗ್ಗೆ ಬರೆದ ಕವಿತೆಗಳು ನಮ್ಮನ್ನು ಮತ್ತೊಮ್ಮೆ ಬಸವಪಥದತ್ತ ಸಮಾಜ ಸಾಗಲಿ ಎಂಬ ಸಂದೇಶ ಸಾರುತ್ತವೆ ಎಂದು ಯುವ ಕವಿ ಶಿ.ಕಾ.ಬಡಿಗೇರ ಹೇಳಿದರು. ಅವರು ಕವಿಸಮೂಹ ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕವಿಸಮಯ ಕಾರ್‍ಯಕ್ರಮದಲ್ಲಿ ಕವನಗಳ ವಿಮರ್ಶೆ ಮಾಡುತ್ತ ಮಾತನಾಡುತ್ತಿದ್ದರು.

ಸಮಾಜಕ್ಕೆ ಒಳ್ಳೆಯದಾಗಲಿ ಎಂಬ ಆಶಯ ಹೊತ್ತಿರುವ ಕವನಗಳಲ್ಲಿ ಬಸವಣ್ಣನನ್ನು ಸಶಕ್ತವಾಗಿ ಕವನಗಳಲ್ಲಿ ಬಿಂಬಿಸಲಾಗಿದೆ ಎಂದರು. ಕವಿಸಮಯದಲ್ಲಿ ಭಾಗವಹಿಸಿದ್ದ ಹಿರಿಯ ಕವಿ ವಿಠ್ಠಪ್ಪ ಗೋರಂಟ್ಲಿ ಕವಿತೆಯನ್ನುಂಥದ್ದು ಅನುಭವಿಸವಂಥದ್ದು, ಗದ್ಯದಲ್ಲಿ ಬರೆಯಲಾಗದ್ದನ್ನು ಪದ್ಯದಲ್ಲಿ ಬರೆಯಬೇಕು ಅದೂ ಕಾವ್ಯಾತ್ಮಕವಾದಾಗ ಓದುಗರನ್ನು ಸೆಳೆಯುತ್ತದೆ ಎಂದರು. ಗಂಗಾವತಿಯ ಮೆಹಮುದ್ ಮಿಯಾ ಕಲ್ಯಾಣದ ಬೆಳಕು ವಿಶ್ವಮಾನವ ಬಸವಣ್ಣ ಕವನ ವಾಚಿಸಿದರು. ಕುಷ್ಟಗಿಯ ಚೌಡೇಶ್ ಎಸ್. ಅಣ್ಣ ಬಸವಣ್ಣ , ಪುಷ್ಪಲತಾ ಏಳುಭಾವಿ- ವಿಶ್ವಮಾನವ ಜ್ಯೋತಿ , ವೀರಣ್ಣ ಹುರಕಡ್ಲಿ- ಛಲ , ವಿಜಯಲಕ್ಷ್ಮೀ ಹಿರೇಮಠ-ಜಗಜ್ಯೋತಿ ಬಸವಣ್ಣ, ಸಿರಾಜ್ ಬಿಸರಳ್ಳಿ- ಕ್ಷಮಿಸು ಬಸವ, ಡಾ.ಗೀತಾ ಪರವಿ- ಕಲ್ಯಾಣ ಬಸವ, ವಿಠ್ಠಪ್ಪ ಗೋರಂಟ್ಲಿ- ಕಲ್ಯಾಣದ ಬೆಳಕು,ಶಿ.ಕಾ.ಬಡಿಗೇರ-ಬಸವಪಥ ಎಂಬ ಕವನಗಳನ್ನು ವಾಚಿಸಿದರು. ಕೆಲವು ಕವಿತೆಗಳಲ್ಲಿ ಬಸವಣ್ಣ ಆದರ್ಶ ಮತ್ತು ಪ್ರಸ್ತುತ ಸಂದರ್ಭದಲ್ಲಿ ಬಸವಣ್ಣನ ಅನಿವಾರ್‍ಯತೆಯ ಬಗ್ಗೆ ಕವಿಗಳು ಬಹಳ ಚೆನ್ನಾಗಿ ಮನಮುಟ್ಟುವಂತೆ ಕವನ ರಚಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಕವಿಸಮಯ ಕಾರ್‍ಯಕ್ರಮದಲ್ಲಿ ಬಸವಲಿಂಗಯ್ಯ ಸಸಿಮಠ,ವಿಶ್ವನಾಥ ನಿಲೂಗಲ್, ಬಸವರಾಜ ಶೀಲವಂತರ, ಹುಸೇನಪಾಷಾ, ಮಹೇಶ್ ಬೆಳವಣಿಕೆ, ನೀಲಕಂಠಪ್ಪ,ಪಂಪಾಪತಿ ಹೊನ್ನಳ್ಳಿ,ಮಲ್ಲಿಕಾರ್ಜುನ ಹಡಪದ ಯಲಬುರ್ಗಾ ಸೇರಿದಂತೆ ಹಲವಾರು ಜನ ಭಾಗವಹಿಸಿದ್ದರು. ಕವಿಸಮೂಹದ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

ಮುಂದಿನ ರವಿವಾರದ ಕವಿಸಮಯ ಕಾರ್‍ಯಕ್ರಮಕ್ಕೆ ಕುಲಾಂತರಿ ಎಂಬ ವಿಷಯದ ಮೇಲೆ ಕವನ ರಚಿಸಲು ಎಲ್ಲರಿಗೂ ಸೂಚಿಸಲಾಯಿತು. ಪ್ರಸ್ತುತ ಸಂದರ್ಭದಲ್ಲಿ ಕುಲಾಂತರಿ ಎನ್ನುವದು ಕೇವಲ ತಳಿಗಳಿಗೆ ಸೀಮಿತವಾಗಿಲ್ಲ ಅದು ನಮ್ಮ ವ್ಯಾಪಕ ಜನಜೀವನವನ್ನೇ ಪ್ರಭಾವಿಸುತ್ತಿದೆ. ಪೀಳಿಗೆಗಳನ್ನು, ಜನಸಮೂಹವನ್ನು ಮಾನಸಿಕವಾಗಿ, ದೈಹಿಕವಾಗಿ , ಭೌದ್ದಿಕವಾಗಿ ಬದಲಾಯಿಸುತ್ತಿದೆ. ಅದರ ಬಗ್ಗೆ ಕವನ ರಚಿಸಲು ಕೋರಲಾಗಿದೆ.

Advertisement

0 comments:

Post a Comment

 
Top