PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-06- ನಗರದ ಶ್ರೀಗವಿಮಠದಲ್ಲಿ ಪ್ರತಿ ಅಮವಾಸ್ಯೆಯ ದಿನದಂದು ಜರುಗುವಂತಹ ಬೆಳಕಿನಡೆಗೆ ಮಾಸಿಕ ಕಾರ್ಯಕ್ರಮವು  ದಿನಾಂಕ ೧೦-೦೧-೨೦೧೬ ರಂದು ರವಿವಾರ ಸಂಜೆ ೬.೩೦ ಕ್ಕೆ ಶ್ರೀಮಠದ ಕೆರೆಯ ದಡದಲ್ಲಿ ೭೭ ನೇ  ಬೆಳಕಿನೆಡೆಗೆ  ಮಾಸಿಕ ಕಾರ್ಯಕ್ರಮ ಜರುಗುವದು. ಮುಖ್ಯ ಅತಿಥಿಗಳಾಗಿ ಗಂಗಾವತಿ ತಾಲೂಕಿನ ಕುರುಬಗೊಂಡದ  ಪಂಡಿತ ಪಂಚಾಕ್ಷರ ಶಾಸ್ತ್ರಿ ಹಿರೇಮಠ ಉಪನ್ಯಾಸ ಮಾಡಲಿದ್ದಾರೆ. ಅಧ್ಯಕ್ಷತೆ  ಡಂಬ್ರಳ್ಳಿಯ ಬಾಳನಗೌಡ್ರ ಸಿದ್ಧನಗೌಡ್ರ ಪೋಲೀಸ ಪಾಟೀಲ ವಹಿಸಿವರು.   ಹುಲಗಿಯ ಶ್ರೀಮತಿ ಪರಿಮಳ ರಮೇಶ ವೈದ್ಯ ಇವರು ತಿಂಗಳ ಸ್ಫೂತಿದಾಯಕರಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಶ್ರೀಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಸಂಗೀತ ಸೇವೆಯಿದೆ. ಕಾರ್ಯಕ್ರಮದ ಭಕ್ತಿ ಸೇವೆಯನ್ನು  ವಿರುಪಾಕ್ಷರೆಡ್ಡಿ ಕೆಂಚರೆಡ್ಡಿ ಯಡ್ರಮ್ಮನಹಳ್ಳಿ ಸಾ ಹ್ಯಾಟಿ ವಹಿಸಿದ್ದಾರೆ. ಸದ್ಬಕ್ತರು ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು  ಶ್ರೀಗವಿಮಠದ ತಿಳಿಸಿದೆ.

Advertisement

0 comments:

Post a Comment

 
Top