PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-02- ಬಿಸರಹಳ್ಳಿ ಸಾಮರಸ್ಯಕ್ಕೆ ಹೆಸರಾಗಿದೆ.ಸರ್ವ ಜನಾಂಗದವರು ಸೇರಿ ನನಗೆ ಸನ್ಮಾನ ಮಾಡಿದ್ದು ನನಗೆ ಹರ್ಷವನ್ನುಂಟು ಮಾಡಿದೆ. ನನ್ನೂರಿನ ಸನ್ಮಾನ ನನಗೆ ರಾಜ್ಯೋತ್ಸವ ಪ್ರಶಸ್ತಿಗಿಂತ ಮಿಗಿಲು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹೆಚ್.ಎಸ್.ಪಾಟೀಲ ಹೇಳಿದರು. ಅವರು ಕೊಪ್ಪಳ ತಾಲೂಕಿನ ಬಿಸರಹಳ್ಳಿಯಲ್ಲಿ ಕನಕದಾಸ ಜಯಂತಿ ಅಂಗವಾಗಿ ಹಮ್ಮಿಕೊಂಡ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕೆಂಪಯ್ಯ ಗುರುವಿನ ಸಾನಿಧ್ಯ ವಹಿಸಿದ್ದರು. ಶಿವಣ್ಣ ಶಹಪೂರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿರೂಪಾಕ್ಷಗೌಡರ ಮಾಲಿಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಜಿಲ್ಲಾ ವಾರ್ತಾಧಿಕಾರಿ ಬಸವರಾಜ ಆಕಳವಾಡಿ, ಕೊಪ್ಪಳ ಜಿ

ಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ. ಶಿಕ್ಷಕಿ ಅರುಣಾ ನರೇಂದ್ರ. ವೀರಕನ್ನಡಿಗ ಯುವಕ ಸಂಘದ ಅಧ್ಯಕ್ಷರಾದ ಶಿವಾನಂದ ಹೊದ್ಲೂರು, ಹಿರಿಯರಾದ ನೀಲಪ್ಪ ಕರಿಗಾರ, ಅಂದಪ್ಪ ಚಿಲಗೋಡ, ಹೊನ್ನಕೇರಪ್ಪ ಗಂಡಾಳಿ, ಬಸವರಾಜ ಡಂಬಳ, ಬಾಳಪ್ಪ ದ್ಯಾವಣ್ಣವರ, ಆನಂದ ಜಾಲಿಹಾಳ, ರಮೇಶ ಮೂಲಿಮನಿ, ರಾಮನಗೌಡ ಗೊಡಚಳ್ಳಿ, ಚನ್ನನಗೌಡ ಮಾಲಿಪಾಟೀಲ, ಮುಸ್ತಪಾ ಅತ್ತಾರ, ಶಿವಪ್ಪ ಹಲಗೇರಿ, ಶಿವಪ್ಪ ಮೋರನಾಳ, ಲೋಕನಗೌಡ ಪೋಲಿಸ ಪಾಟೀಲ, ಮಂಜುನಾಥ ಕೊಪ್ಪದ, ಶರಣಯ್ಯ ಗುರುವಿನ, ಹನುಮಂತಪ್ಪ ಬೆಟಗೇರಿ, ಮುದಕಪ್ಪ ಬಿಕನಳ್ಳಿ, ದೇವಪ್ಪ ಮುದ್ದಿ, ಭೀಮಣ್ಣ ಕಳ್ಳಿ, ಭರಮಜ್ಜ ಕಾಟಿ, ಅಂದಾನಸ್ವಾಮಿ ಬೂತಣ್ಣನವರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕೊಪ್ಪಳದ ಶಾಸಕರಾದ ರಾಘವೇಂದ್ರ ಹಿಟ್ನಾಳ ಅವರು ಕನಕದಾಸರ ಭಾವಚಿತ್ರವನ್ನು ಅನಾವರಣಗೊಳಿಸಿದರು.  ಕಳಸ, ಕುಂಭ, ಡೊಳ್ಳಿನೊಂದಿಗೆ ಕನಕದಾಸರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.  ಬೀರಪ್ಪ ಗುರಿಕಾರ ನಿರೂಪಿಸಿದರು. ಪರಶುರಾಮ ಡಂಬಳ ಸ್ವಾಗತಿಸಿದರು. ಜಮದಗ್ನಿ ಹಂಚಿನಾಳ ವಂದಿಸಿದರು.

Advertisement

0 comments:

Post a Comment

 
Top