೨೭/೧೨/೨೦೧೫ ರಂದು ನಡೆಯಲಿರುವ ವಿಧಾನಪರಿಷತ್ತ ಚುನಾವಣೆಯ ಸಿ. ವಿ ಚಂದ್ರಶೇಕರ ವಿಧಾನ ಪರಿಷತ್ತ ಕೊಪ್ಪಳ ರಾಯಚೂರು ವಿಧಾನ ಪರಿಷತ್ತ ಅಭ್ಯುರ್ಥಿ ಪರವಾಗಿ ಮತ ಯಾಚಿಸಲು ಪ್ರಯುಕ್ತ ವಿಧಾನಪರಿಷತ್ತ ಚುನಾವಣೆಗೆ ಪ್ರಚಾರಕ್ಕಾಗಿ ಬಿ ಜೆ ಪಿ ರಾಜ್ಯಧ್ಯಕ್ಷರಾದ ಪ್ರಹ್ಲಾದ ಜೋಷಿಯವರು ನಾಳೆ ದಿನಾಂಕ ೧೨//೧೨/೨೦೧೫ ರಂದು ಬೆಳಿಗ್ಗೆ ೧೧ ಗಂಟೆಗೆ ಕೊಪ್ಪಳ ನಗರದ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ೧೧ ಗಂಟೆಗೆ ಜಿಲ್ಲಾ ಪಂಚಾಯತಿ ಕ್ಷೇತ್ರದಗಳಾದ ಬಂಡಿಹರ್ಲಾಪೂರ, ಹಿಟ್ನಾಳ, ಗಿಣಗೇರಿ, ಲೆಬಗೇರಿ ಮತ್ತು ಕೊಪ್ಪಳ ನಗಗರದ ಎಲ್ಲಾ ಚುನಾಯಿತ ಪ್ರತಿನಿಧಿಗಳ ಮತ ಯಾಚಿಸುವರು . ಈ ಸಭೆಯ ಅಧ್ಯಕ್ಷತೆಯನ್ನು ಕೊಪ್ಪಳ ಜಿಲ್ಲಾಧ್ಯಕ್ಷರಾದ ಕರಡಿ ಸಂಗಣ್ಣನವರು ವಹಿಸುವರು ಈ ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷರು, ವಿಧಾನ ಪರಿಷತ್ತ ಚುನಾವಣೆಯ ಉಸ್ತುವರಿಗಳಾದ ಹಾಲಪ್ಪ ಆಚಾರ, ಶಾಸಕರಾದ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕರಾದ ಪರಣ್ಣ ಮನವಳದ್ಳಿ, ಮಾಜಿ ಸಂಸದರಾದ ಶಿವರಾಮಗೌಡ ಸಹ ವಸ್ತುರಿಗಳಾದ ಹೆಚ್ ಗಿರಿಗೌಡ, ಜಿ.ಪಂ ಅಧ್ಯಕ್ಷರಾದ ಅಮರೇಶ ಕುಳಗಿ, ಬಸವರಾಜ ದಡೆಸೂರು, ಜಿಲ್ಲಾ ಎಲ್ಲಾ ನಾಯಕರು ಪಕ್ಷದ ಮುಖಂಡರು ಕಾರ್ಯಕರ್ತರು ಭಾಗವಹಿಸುವರು ಎಂದು ಕೊಪ್ಪಳ ಜಿಲ್ಲಾ ವಕ್ತರರಾದ ಚಂದ್ರಶೇಖರಗೌಡ ಪಾಟಿಲ ಹಲಗೇರಿ ತಿಳಿಸಿದ್ದಾರೆ.
Subscribe to:
Post Comments (Atom)
0 comments:
Post a Comment