PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-02- ಗಿಣಗೇರಾ ಅಲ್ಟ್ರಾಟೆಕ್ ಸಿಮೆಂಟ್ ಘಟಕದಲ್ಲಿ ಅಲ್ಟ್ರಾಟೆಕ್ ಸಿಮೆಂಟ್ ಘಟಕ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಘಟಕದ ಮುಖ್ಯಸ್ಥರು ಹಾಗೂ ಉಪಾಧ್ಯಕ್ಷರಾದ ಟಿ.ಕೆ.ಎಮ್ ರೆಡ್ಡಿ, ನೆರವೇರಿಸಿರು.  ಈ ಸಂದರ್ಭದಲ್ಲಿ ಘಟಕದ ಮಾನವ ಸಂಪನ್ಮೂಲ ಅಧಿಕಾರಿಗಳಾದ ರಾಮಚಂದ್ರ ಡಿ. ಜ್ಯೋಶಿ, ಹಾಗೂ ಡಾ. ಟಿ. ಹೆಚ್. ಮುಲ್ಲಾ ಹನಮಂತಪ್ಪ ಸಿ, ಪ್ರದೀಪ್ ಕುಮಾರ, ಎಸ್.ಎಮ್. ಕೋಗ್ಲಿ, ಸಂಪತ್ತ ಕುಮಾರ, ಪಿ.ಎಸ್. ಎನ್ ಮೂರ್ತಿ, ಪ್ರಕಾಶ, ಹಾಗೂ ಕಾರ್ಮಿಕರು ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಿಬ್ಬಂದಿವರ್ಗದವರು ಉಪಸ್ಥಿತರಿದರು. ಈ ಸಂದರ್ಭದಲ್ಲಿ ೪೨ ಜನ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.

Advertisement

0 comments:

Post a Comment

 
Top