PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-27- ಇತ್ತೀಚೆಗೆ ನಡೆದ ತಾಲೂಕು ಮತ್ತು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶ್ರೀ ಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ ಹಿಂದೂಸ್ಥಾನಿ ಗಾಯನದಲ್ಲಿ ಕು||ವರ್ಷಿಣಿ ಸಂಕ್ಲಾಪುರ, ಲಘುಸಂಗೀತದಲ್ಲಿ ಕು||ಅನನ್ಯ ದೇಸಾಯಿ ಮತ್ತು ಭಾವಗೀತೆ ಪ್ರಕಾರದಲ್ಲಿ ಕು||ಸಂಕಲ್ಪ ಅವರಾದಿ ಈ ಮೂರು ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ನಡೆಯುವ ಸ್ಪಧೆಗಳಿಗೆ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ಸದರಿ ವಿದ್ಯಾರ್ಥಿಗಳನ್ನು ಶ್ರೀ ಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದ ಶಿಕ್ಷಕರಾದ ವಿರೇಶ ಹಿಟ್ನಾಳ ಇವರು ಅಭಿನಂದಿಸಿದ್ದಾರೆ.



Advertisement

0 comments:

Post a Comment

 
Top