PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ನ. ೨೪. ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನವೆಂಬರ್ ೨೫ ರಂದು ಬುಧವಾರ ಕೊಪ್ಪಳ ತಾಲೂಕ ಮಟ್ಟದ ಸ್ಕೌಟರ್‍ಸ್ ಗೈಡರ್‍ಸ್ ಸಮಾವೇಶ ನಡೆಯಲಿದೆ.
     ಈ ಕುರಿತು ಪ್ರಕಟಣೆ ನೀಡಿರುವ ತಾಲೂಕ ಸಂಸ್ಥೆ, ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾಋ ಎಂ. ಕನಗವಲ್ಲಿ, ಪೋಲಿಸ್ ವರಷ್ಠಾಧಿಕಾರಿ ಕೆ. ತ್ಯಾಗರಾಜನ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಕ ಅಧಿಕಾರಿ ಕೃಷ್ಣ ಡಿ. ಉದಪುಡಿ ಸೇರಿದಂತೆ ಅನೇಕ ಅಧಿಕಾಋಇಗಳು ಪಾಲ್ಗೊಳ್ಳುವರು, ಇದೇ ಸಂದರ್ಭದಲ್ಲಿ ಶೇಖರಗೌಡ ಮಾಲಿಪಾಟೀಲ, ವೆಂಗನಗೌಡ ಹಿರೇಗೌಡ್ರ, ಹೆಚ್. ಎಸ್. ಪಾಟೀಲ, ಹೆಚ್. ಎಂ. ಸಿದ್ರಾಮಸ್ವಾಮಿ, ಮೆಹಬೂಬ ಕಿಲ್ಲೆದಾರ, ಸಾವಿತ್ರಿ ಮುಜುಂದಾರ್, ಸಿದ್ದಲಿಂಗಪ್ಪ ಕೊಟ್ನೆಕಲ್‌ರವರಿಗೆ ಸನಮ್ಮಾನಿಸಲಾಗುತ್ತಿದೆ. ತಾಲೂಕಿನ ಎಲ್ಲಾ ಶಾಲೆಯವರು ಅದಕ್ಕಾಗಿ ೨೫ ರಂದು ಬೆಳಿಗ್ಗೆ ೯ ರಿಂದ ನಡೆಯುವ ಸಮಾವೇಶದಲ್ಲಿ ಘಟಕ ಹೊಂದಿದ ಶಾಲೆಯವರು ನವೀಕರಣ ಶುಲ್ಕ ತುಂಬಬೇಕು, ಘಟಕ ಇಲ್ಲದವರು ಸಹ ಶುಲ್ಕ ತುಂಬಿ ಹೊಸ ಘಟಕವನ್ನು ಆರಂಭಿಸಬೇಕು, ತಪ್ಪಿದಲ್ಲಿ ಸಂಬಂಧಿಸಿದ ಶಾಲೆಯ ಶಿಕ್ಷಕರನ್ನು ಹೊಣೆಗಾರರನ್ನಾಗಿಸಲಾಗುವದು ಎಂದು ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.

Advertisement

0 comments:

Post a Comment

 
Top