PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-01-ಸೋಲು ಗೆಲವು ಸಮಾನವಾಗಿ ಸ್ವೀಕರಿಸಿ ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕ್ರಿಡಾ ನಿದೇರ್ಶಕ ಖಾಲಿದಖಾನ್ ಹೇಳಿದರು. ಅವರು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕಾನೂನು ಮಹಾ ವಿದ್ಯಾಲಯದ ನೆಡದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಬಡ್ಡಿ ಎಂಬವುದು ಒಂದು ದೇಶಿಯ ಕ್ರೀಡೆಯಾಗಿದ್ದು ಮತ್ತು ಈ ಕ್ರೀಡೆ ಆರೋಗ್ಯಕ್ಕೆ ಉತ್ತಮವಾದ ಕ್ರೀಡೆಯಾಗಿದೆ ಎಂದ ಅವರು ವಿದ್ಯಾರ್ಥಿಗಳು ಜೀವನದಲ್ಲಿ ಕ್ರೀಡೆಯನ್ನು ಅಳವಡಿಸಿಕೊಳ್ಳಬೇಕು ಅಂದಾಗ ಮಾತ್ರ ಮಾನಸಿಕವಾಗಿ ದೈಹಿಕವಾಗಿ ಆರೋಗ್ಯ ಇರಲು ಸಾಧ್ಯ ಎಂದರು.
    ನಂತರ ಮಾತನಾಡಿದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚರ್ಯರರು ಆದ ಡಾ: ಬಿ.ಎಸ್.ಹನಸಿ ಮಾತನಾಡಿ ಸತತ ಎರಡು ದಿನಗಳಿಂದ ಕಬಡ್ಡಿ




ಪಂದ್ಯಾವಳಿಗಳನ್ನು ಅನುಕೂಲಕರವಾದ ರೀತಿಯಲ್ಲಿ ನೆಡೆಯಲು ಸಹಕಾರಿಯಾದ ಎಲ್ಲರಿಗೂ ಚಿರ ಋಣಿಯಾಗಿದ್ದೇವೆ ಎಂದ ಅವರು ಕಬಡ್ಡಿ ಪಂದ್ಯಾವಳಿ ಮೊದಲ ಭಾರಿಗೆ ರಾಜ್ಯ ಮಟ್ಟದ ನೆಡಿಸಿದ್ದು ಎಲ್ಲರಿಗೂ ಸಂತೋಷದಾಯಕವಾಗಿದೆ ಎಂದ ಅವರು ಮುಂದಿನ ದಿನ ಮಾನಗಳಲ್ಲಿ ಇಂತಹ ಹತ್ತಾರು ಕ್ರೀಡೆಯನ್ನು ಆಯೋಜಿವದರೊಂದಿಗೆ ಈ ಭಾಗದ ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೊಭಾವನೆಯನ್ನು ಅಳವಡಿಸಿಕೊಳ್ಳಲು ಸಹಕಾರಿ ಮಾಡಲಾಗುವದು ಎಂದರು . ರಾಜ್ಯದ ವಿವಿಧ ಜಿಲ್ಲೆಯ ಕಾನೂನು ಕಾಲೇಜಿನ ಕ್ರೀಡಾ ಪಟುಗಳು ಬಂದಿದ್ದು ಉತ್ತಮ ರೀತಿಯಲ್ಲಿ ಕ್ರೀಡೆಯನ್ನು ಆಡುವದರ ಜೋತಗೆ ಕ್ರೀಡಾ ಪ್ರದರ್ಶನ ಮಾಡಿದರು. ಸುಮಾರು ೨೨ ಜಿಲ್ಲೆಗಳಿಂದ ಬಂದ ಕ್ರೀಡಾ ಪಟುಗಳು ಭಾಗವಹಿಸಿದ್ದವು. ಅದರಲ್ಲಿ ಉತ್ತಮ ಆಟವನ್ನು ಪ್ರದರ್ಶನ ಮಾಡಿ ಪ್ರಥಮ ಬಹುಮಾನವನ್ನು ಪಡೆದ ಉಡಪಿಯ ವೈಕುಂಟ ಬಾಳಿಗ ಕಾನೂನು iಹಾವಿದ್ಯಾಲಯದ ಕಾಲೇಜಿನ ಕ್ರೀಡಾಪಟುಗಳು ಪಡೆದರು. ದ್ವಿತೀಯ ಬಹುಮಾನವನ್ನು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪುತ್ತೂರ ಕಾಲೇಜಿನ ಕ್ರೀಡಾ ಪಟುಗಳು ಪಡೆದವು. ಅದೇ ರೀತಿ ತೃತೀಯ ಬಹುಮಾನವನ್ನು  ಬಿ ಎಲ್ ಡಿ ಕಾನೂನು ಮಹಾವಿದ್ಯಾಲಯ ಜಮಖಂಡಿ ಪಡೆದರು. ಕಾಲೇಜಿನ ದೈಹಿP ಶಿಕ್ಷಣ  ನಿರ್ದೇಶಕರು ಬಸವರಾಜ ಅಳ್ಳೋಳಿ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮೈಸೂರು ಬಸವಶ್ರೀ ಕಾನೂನು ಮಹಾವಿದ್ಯಾಯದ ದೈಹಿP ಶಿಕ್ಷಣ  ನಿರ್ದೇಶಕರು ತೊಂಟದಾರ್ಯ ಅವರು ಮತ್ತು ಚಿತ್ರದುರ್ಗ ದೈಹಿಕ ಶಿಕ್ಷಣ ನಿರ್ದೇಶಕರು ಮುರಗೆಶಿ. ವಲಿಸಾಬ ಹಕಿಂ ಬಹುಮಾನವನ್ನು ವಿತರಿಸಿದರು .ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ಕಾಲೇಜಿನ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಕೊಡತಗೇರಿ ನಿರೂಪಿಸಿ ವಂದಿಸಿದರು.

Advertisement

0 comments:

Post a Comment

 
Top