ತಡರಾತ್ರಿ
ಪೊಲೀಸ್ ಬಂದೋಬಸ್ತಿನಲ್ಲಿ ನಗರದ ಹೃದಯ ಭಾಗದಲ್ಲಿರುವ ಎರಡು ಕಮಾನುಗಳನ್ನು ತೆರವುಗೊಳಿಸಲಾಯಿತು. ಈ ಕಮಾನುಗಳನ್ನು ತೆರವುಗೊಳಿಸಲು ಎರಡು
ಸಲ ನಗರಸಭೆಯಲ್ಲಿ ರೆಸಲೂಷನ್ ಪಾಸ್ ಮಾಡಲಾಗಿತ್ತು. ಅಲ್ಲದೇ ಜಿಲ್ಲಾಧಿಕಾರಿಗಳು ಸಹ ಈ ಕಮಾನುಗಳನ್ನು ತೆರವುಗೊಳಿಸಲು ಆದೇಶ
ನೀಡಿದ್ದರು. ಈ ಕಮಾನುಗಳಿಗೆ ನೂರಾರು ವರ್ಷಗಳ ಇತಿಹಾಸವಿದ್ದು ಅವು ನಮ್ಮ ಕೊಪ್ಪಳದ ಅಸ್ಮೀತತೆಯ
ಪ್ರಶ್ನೆಯಾಗಿದೆ. ನಮ್ಮ ಕೊಪ್ಪಳದ ಐತಿಹಾಸಿಕತೆಯನ್ನು ಬಿಂಬಿಸುವ ಈ ಕಮಾನುಗಳನ್ನು ತೆರವುಗೊಳಿಸಬಾರದು ಎಂದು
ಸಾಹಿತಿಗಳು, ಪ್ರಗತಿಪರರು ಆಗ್ರಹಿಸಿದ್ದರು.
ಈ
ಭಾಗದಲ್ಲಿ ಸಂಚಾರಕ್ಕೆ ತೊಂದರೆಯಾಗುತ್ತೆ ಮತ್ತು ದೊಡ್ಡ ವಾಹನಗಳು ಸಂಚರಿಸಲಾಗುತ್ತಿಲ್ಲ.
ಅಲ್ಲದೇ ಕಮಾನುಗಳು ಶಿಥಿಲಗೊಂಡಿವೆ ಎಂದು ಕಾರಣ ನೀಡಿ ಇವುಗಳನ್ನು ತೆರವುಗೊಳಿಸಲಾಗಿದೆ.
ಮಧ್ಯರಾತ್ರಿಯಲ್ಲಿ ಕಾರ್ಯಾಚರಣೆ ಮಾಡಿದ್ದಕ್ಕೆ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
ಮುಕ್ತವಾಗಿ ಬೆಳಗಿನ ಸಮಯದಲ್ಲಿ ಮಾಡಬಹುದಿತ್ತು. ಯಾರಿಗೂ
ಸೂಚನೆ ನೀಡದೇ ಏಕಾ ಏಕಿ ಈ ರೀತಿ ಮಾಡುವುದೇಕೇ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
0 comments:
Post a Comment