PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ - ಲೋಕದರ್ಶನ ಪತ್ರಿಕೆಯ ಜಿಲ್ಲಾ ವರದಿಗಾರ ಎಂ.ಸಾದಿಕ್ ಅಲಿಯವರ ಮಾತೋಶ್ರೀ ತಾಜ್‌ಬೇಗಂ ಗಂಡ ಹಾಜಿ ಎಂ.ಉಸ್ಮಾನ್ ಅಲಿ (೮೦) ರವರು ಜೂ.೨೮ ರ ರವಿವಾರ ರಾತ್ರಿ ವೇಳೆ ನಿಧನ ಹೊಂದಿದ್ದು, ಅವರ ಅಂತ್ಯಕ್ರಿಯೆ ಜೂ.೨೯ರ ಸೋಮವಾರ ಮಧ್ಯಾಹ್ನ ಕೊಪ್ಪಳ ನಗರದ ಹುಲಿಕೆರೆ ರಸ್ತೆಯಲ್ಲಿರುವ ಬಾಚನಕಲ್ ಕಬರಸ್ಥಾನ್‌ದಲ್ಲಿ ಜರುಗಿತು.
ಮೃತರು ಸುಮಾರು ಆರು ತಿಂಗಳ ಕಾಲ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಕೊನೆಗೆ ಅಂತೀಮ ಉಸಿರೇಳೆದ ಅವರು, ತನ್ನ ಹಿಂದೆ ಗಂಡ, ನಾಲ್ಕು ಜನ ಹೆಣ್ಣು ಮಕ್ಕಳು, ಆರು ಜನ ಗಂಡು ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು, ಓರ್ವ ಸಹೋದರ, ಸೊಸೆಯಂದಿರು, ಅಳಿಯಂದಿರು ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯಲ್ಲಿ ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸಯ್ಯದ್ ಜುಲ್ಲು ಖಾದರ್ ಖಾದ್ರಿ, ಕಾಂಗ್ರೆಸ್ ಮುಖಂಡ ಕೆ.ಎಂ.ಸಯ್ಯದ್, ಬಿಜೆಪಿ ವಕ್ತಾರ ಚಂದ್ರಶೇಖರಗೌಡ ಪಾಟೀಲ್ ಹಲಗೇರಿ, ಕನಸೇ ರಾಜ್ಯಾಧ್ಯಕ್ಷ ವಿಜಯಕುಮಾರ ಕವಲೂರು, ಜಿಲ್ಲಾಧ್ಯಕ್ಷ ಫುರಕಾನ್ ಅಹ್ಮದ್ ದಾಗದಾರ, ನಗರಸಭೆ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್, ಅಂಜುಮನ್ ಕಮೀಟಿ ಅಧ್ಯಕ್ಷ ಎಂ.ಪಾಷಾ ಕಾಟನ್, ಜೆಡಿಎಸ್ ನಗರ ಯುವ ಅಧ್ಯಕ್ಷ ಸಯ್ಯದ್ ಮೆಹಮೂದ್ ಹುಸೇನಿ ಸೇರಿದಂತೆ ಪತ್ರಕರ್ತರಾದ ಹರೀಶ ಹೆಚ್.ಎಸ್, ಜಿ.ಎಸ್.ಗೋನಾಳ, ಸೋಮರೆಡ್ಡಿ ಅಳವಂಡಿ, ಶರಣಪ್ಪ ಬಾಚಲಾಪುರ, ಮೌನೇಶ ಬಡಿಗೇರ, ಎನ್.ಎಂ.ದೊಡ್ಡಮನಿ,  ಹನುಮಂತ ಹಳ್ಳಿಕೇರಿ, ಆರ್.ಬಿ.ಪಾಟೀಲ್, ವೀರಣ್ಣ ಕಳ್ಳಿಮನಿ, ಶಿವರಾಜ ನುಗಡೋಣಿ, ಪ್ರಸನ್ನ ದೇಸಾಯಿ, ರವಿಚಂದ್ರ ಬಡಿಗೇರ, ನಾಗರಾಜ ಇಂಗಳಗಿ, ಶೇಖ್ ಮಹೇಬೂಬ ಪಟೇಲ್, ಶರಣಕುಮಾರ ಅಮರಗಡ್ಡಿ ಯಲಬುರ್ಗಾ, ಇಮಾಮ ಸಂಕನೂರು, ಶ್ಯಾಮೀದ್ ತಾಳಕೇರಿ, ದೇವಪ್ಪ ಗಳಗನಾಥ, ನಿವೃತ್ತ ಪ್ರಾಚಾರ್ಯ ಡಾ: ಮಹಾಂತೇಶ ಮಲ್ಲನಗೌಡರ, ಜೆಡಿಎಸ್ ಯುವ ನಾಯಕ ಮಹ್ಮದ್ ಮುಸ್ತಫಾ ಕುಷ್ಟಗಿ, ಅಬ್ದುಲ್ ಅಜೀಜ್ ಮಾನ್ವಿಕರ್, ಕಾಂಗ್ರೆಸ್ ಮುಖಂಡ ಮರ್ಧಾನಲಿ ಅಡ್ಡೇವಾಲೆ, ಇಬ್ರಾಹಿಮ್ ಅಡ್ಡೇವಾಲೆ ಸೇರಿದಂತೆ ಪಟೇಲ್, ಜಾಗೀರದಾರ, ಸಾಲಗುಂದಿ ಬಂಧುಗಳು ಅಲ್ಲದೇ ಅಪಾರ ಜನಸ್ತೋಮ ಪಾಲ್ಗೊಂಡು ತೀವ್ರ ಸಂತಾಪ ವ್ಯಕ್ತಪಡಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು.

Advertisement

0 comments:

Post a Comment

 
Top