PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ :   ಇಂದು ಭಾಗ್ಯನಗರದ ಸರ್ಕಾರಿ ಪದವಿಪೂರ್ವಕಾಲೇಜುಆವರಣದಲ್ಲಿ ನೆಡೆಯುವಸ್ವರಸೌರಭ ಸಂಗೀತ ಮತ್ತು ಲಲಿತ ಕಲಾ ಸಂಸ್ಥೆ (ರಿ)ಉದ್ಘಾಟನಾ ಸಮಾರಂಭ ಹಾಗೂ ಶ್ರೀ ಗುರುಗಾನಯೋಗಿ ಪಂ.ಡಾ|| ಪುಟ್ಟರಾಜ ಗವಾಯಿಗಳವರ ೧೦೧ ನೇ ಜಯಂತೋತ್ಸವ ಅಂಗವಾಗಿ ವಿಶೇಷ ಸಂಗೀತಕಾರ್ಯಕ್ರಮ ಮತ್ತು ಸಂಗೀತಕ್ಷೇತ್ರದಲ್ಲಿ ಸಾಧನೆಗೈದಕಲಾವಿದರಿಗೆ ಪ್ರಶಸ್ತಿ ಪುರಸ್ಕಾರ ನಡೆಯಲಿದ್ದುಕಾರ್ಯಕ್ರಮಕ್ಕೆಕುದರಿ ಮೋತಿಯ ಶ್ರೀ ಮ.ನಿ.ಪ್ರ. ಜಗದ್ಗುರು ವಿಜಯ ಮಹಾಂತ ಮಹಾಸ್ವಾಮಿಗಳು ದಿವ್ಯ ಸಾನಿದ್ಯವನ್ನು ವಹಿಸಿದ್ದು ಉದ್ಘಾಟನೆಯನ್ನುತಾ.ಪಂ ಸದಸ್ಯರಾದ   ದಾನಪ್ಪ ಜಿ. ಕವಲೂರು ಮಾಡಲಿದ್ದು, ಅಧ್ಯಕ್ಷತೆಯನ್ನು   ಶ್ರೀನಿವಾಸ ಗುಪ್ತಾ ವಹಿಸಿದ್ದಾರೆ,   ಕೊಟ್ರಪ್ಪಚೋರನೂರ ಸಹಾಯಕ ನಿರ್ದೇಶಕರು ಕೊಪ್ಪಳ ಇವರಿಂದಉಪನ್ಯಾಸವಿರುತ್ತದೆ. ಮುಖ್ಯ ಅತಿಥಿಗಳಾಗಿ   ರಾಘವೇಂದ್ರ ಪಾನಘಂಟಿ  ವಕೀಲರು  ಹೊನ್ನೂರು ಸಾಬ ಭೈರಾಪುರ,   ಸಿ.ವಿ ಜಡಿಯವರ್, ಶ್ರೀ ರುದ್ರೇಶಉಜ್ಜನಕೊಪ್ಪ ಸಿ.ಪಿ.ಐ, ಮತ್ತು ಅತಿಥಿಗಳಾಗಿ ಡಾ||ಪಿ. ಬಾಲಪ್ಪ,   ವಿ.ಎಂ. ಬೂಸನೂಮಠ್, ಶ್ರೀಮತಿ ಸುಜಾತ,   ಎ.ಎಂ.ಮದಿರೆ,   ವೀರಪ್ಪ ಶ್ಯಾವಿ,   ಖಾಸೀಂ ಅಲಿ ಮುದ್ದಾಬಳ್ಳಿ,   ಮತ್ತಿತರು ಭಾಗವಹಿಸಲಿದ್ದಾರೆ.
ಸಂಸ್ಥೆಯಿಂದ  ಪ್ರಶಸ್ತಿಪುರಸ್ಕಾರ ನೆಡೆಯಲಿದ್ದು   ಗೋವಿಂದರಾಜ ಬೊಮ್ಮಲಾಪುರ,   ರಾಮಚಂದ್ರಪ್ಪಉಪ್ಪಾರ,   ಸದಾಶಿವ ಪಾಟೀಲ್,   ರುದ್ರೇಶ್‌ಉಜ್ಜನಕೊಪ್ಪ,   ರಾಘವೇಂದ್ರಗಂಗಾವತಿಇವರು ಪ್ರಶಸ್ತಿ ಪುರಸ್ಕಾರಗಳನ್ನು ಸ್ವೀಕರಿಸಲಿದ್ದಾರೆ. 
ಶ್ರೀ ಗುರುಗಾನಯೋಗಿ ಪಂ.ಡಾ|| ಪುಟ್ಟರಾಜ ಗವಾಯಿಗಳವರ ೧೦೧ ನೇ ಜಯಂತೋತ್ಸವ ಅಂಗವಾಗಿ ಏರ್ಪಡಿಸಿರುವ ವಿಶೇಷ ಸಂಗೀತಕಾರ್ಯಕ್ರಮದಲ್ಲಿಕುಮಾರಿ ಶಕುಂತಲಾ ಬೆನ್ನಾಳ ಶಾಸ್ತ್ರೀಯ ಸಂಗೀತ,   ವಿನೋದಈಡಿಗರುದಾಸವಾಣಿ, ಕುಮಾರಿ ವಾಣಿ ವಡ್ಡವಡಿಗಿತತ್ವ ಪದ,   ಯುವರಾಜ ಹಿರೇಮಠ ವಚನ ಗಾಯನ, ಕುಮಾರಿ ಪ್ರತಿಮಾ ಬೊಮ್ಮಲಾಪುರ ಸಿತಾರ್ ವಾದನ, ಹಾಗೂ   ಮಾರುತಿ ಬಿನ್ನಾಳ,   ರಾಘವೇಂದ್ರಗಂಗಾವತಿ,  ಜಲೀಲ್ ಪಾಷಾ ತಬಲಾ ಸಾಥಿಯನ್ನು ನೀಡಲಿದ್ದಾರೆ. ಕಾರ್ಯಕ್ರ ನೀರೂಪಣೆಯನ್ನು   ಕೊಟ್ರೇಶ ಮುಕಾರಿ ಹಾಗೂ ಸಹ ನಿರೂಪಣೆಯನ್ನು  ಮಾರುತಿ ಮ್ಯಾಗಳಮನಿ   ಈರಣ್ಣ ಪಗಡಾಲ್ ವಹಿಸಿದ್ದಾರೆ.

z

Advertisement

0 comments:

Post a Comment

 
Top