PLEASE LOGIN TO KANNADANET.COM FOR REGULAR NEWS-UPDATES




ಪ್ರತಿಯೊಬ್ಬರು ನಾಟಕಕಾರರು ಪ್ರತಿಯೊಂದು ಕ್ಷೆತ್ರದಲ್ಲಿ ಒಬ್ಬ ವ್ಯಕ್ತಿ ವಿವಿಧ ರೀತಿಯ ನಟನೆ ಮಾಡುತ್ತಾನೆ. ಒಬ್ಬ ವ್ಯಕ್ತಿ ತನ್ನ ತಂದೆ ತಾಯಿಯ ಜೊತೆ ಮಗ ಮಗಳ ಜೊತೆ ಹೆಂಡತಿಯ ಜೊತೆ ಸ್ನೆಹಿತರ ಜೊತೆ ಬೇರೆ ಬೇರೆ ರೀತಿಯ ವರ್ತನೆಯನ್ನು ಮಾಡುತ್ತಾನೆ ಅದೇ ರೀತಿ ತನ್ನ ಮೇಲಾಧಿಕಾರಿಯೊಂದಿಗೆ ಕೆಳಅಧಿಕಾಯೊಂದಿಗೆ ತನ್ನ ಸಹಪಾಟಿಯೊಂದಿಗೆ ತನ್ನದೆ ಶೈಲಿಯಲ್ಲಿ ವರ್ತಿಸುತ್ತಾನೆ ಹೀಗೆ ಎಲ್ಲರೂ ಜಗತ್ತಿನಲ್ಲಿ ತಮ್ಮ ತಮ್ಮ ರೀತಿಯಲ್ಲಿ ನಾಟಕವಾಡುತ್ತಾರೆ. ಅದನ್ನು ಯಾರು ಗಮನಿಸುವುದಿಲ್ಲಾ ಪ್ರತಿಯೊಬ್ಬರಲ್ಲಿ ನಾಟಕದ ಕಲೆ ಅಡಗಿದೆ. ಅದನ್ನು ಕಲಾವಿದರು ವೇದಿಕೆ ಮೇಲೆ ಸಮಾಜದ ಆಗೂ ಹೊಗೂಗಳನ್ನು ಸಮಾಜದ ಸಮಸ್ಯೆಯನ್ನು ಇಂದಿನ ನೈಜ ಸ್ಥಿತಿಯನ್ನು ವೇದಿಕೆ ಮೂಖಾಂತರ ಜನರ ಮುಂದೆ ಪ್ರತಿ ಬಿಂಬಿಸುತ್ತಾರೆ. ಎಂದು ಕರ್ನಾಟಕ ಸರ್ಕಾರ ನಾಟಕ ಅಕ್ಯಾಡೆಮಿಯ ಸದಸ್ಯರಾದ ಶಿವಶಂಕರ ಹಾಲ್ಕುರಿಕಿ ತಿಳಿಸಿದ್ದರು
        ಇವರು ಭಾರತ ಸರಕಾರ ನೆಹರು ಯುವ ಕೇಂದ್ರ, ಕೊಪ್ಪಳ ಮತ್ತು ವಂದೇಮಾತರಂ ಯುವ  ಸಾಂಸ್ಕ್ರತಿಕ ಸೇವಾ ಸಂಘ (ರಿ) ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಹೊಸ ಬಂಡಿಹರ್ಲಾಪೂರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ಸಮುದಾಯ ಅಭಿವೃದಿ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮತನಾಡಿದರು ಮತ್ತು ವಿದ್ಯಾರ್ಥಿಗಳಿಂದ ಕಿರು ನಾಟಕ ಮಾಡಿಸಿದ್ದರು ಕಾರ್ಯಕ್ರಮದ ಅದ್ಯಕ್ಷತೆಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಕೃಷ್ಣಾ. ಬಿ. ನಾಯಕ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಉಪನ್ಯಾಸಕರಾದ ವೆಂಕಟಚಲಪತಿ, ಮಲ್ಲಿಕಾರ್ಜುನ ಜಿ, ಮತ್ತು ವಂದೇಮಾತರಂ ಸೇವಾ ಸಂಘದ ಅಧ್ಯಕ್ಷರಾದ ರಾಕೇಶ ಕಾಂಬ್ಳೇಕರ್ ಆಗಮಿಸಿದ್ದರು ರಾಷ್ಟ್ರಿಯ ಯುವ ಪಡೆಯಾದ ಗವಿಸಿದ್ದಮ್ಮ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಿಯಾಂಕ ಯಲಬುರ್ಗಿಮಠ ನಿರೂಪಿಸಿದ್ದರು.



Advertisement

0 comments:

Post a Comment

 
Top