ಕೊಪ್ಪಳ : ಗ್ರಾಮೀಣ ಅಂಚೆನೌಕರರು ತಮ್ಮ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಸಂಸದರ ನಿವಾಸಕ್ಕೆ ಆಗಮಿಸಿ ಮನವಿ ಸಲ್ಲಿಸಿದರು. ಸಂಸದರ ಪರವಾಗಿ ಸಂಸದರ ಪುತ್ರ ಅಮರೇಶ ಕರಡಿ ಹಾಗೂ ಕಾರ್ಯಾಲಯದ ಆಪ್ತಸಹಾಯಕ ಎಸ್.ಎನ್.ಜೋಷಿ ಮತ್ತು ಹಾಲೇಶ ಕಂದಾರಿ ಮನವಿ ಸ್ವೀಕರಿಸಿದರು. ಫ್ಯಾಕ್ಸ್ ಮತ್ತು ಈ ಮೇಲ್ ಮೂಲಕ ಮನವಿಯನ್ನು ಸಂಸದರ ಗಮನಕ್ಕೆ ತರಲಾಯಿತು. ಸದರಿ ಬೇಡಿಕೆಗಳ ಕುರಿತು ಸರಕಾರದ ಗಮನವನ್ನು ಪಾರ್ಲಿಮೆಂಟ್ ಅಧಿವೇಶನದಲ್ಲಿ ಮಾತನಾಡಿ ತರುವುದಾಗಿ ಮತ್ತು ಬೇಡಿಕೆಗಳ ಈಡೇರಿಕೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಂಸದರು ತಿಳಿಸಿದ್ದಾರೆ.
Home
»
koppal district information
»
Koppal News
»
koppal organisations
» ಗ್ರಾಮೀಣ ಅಂಚೆನೌಕರರ ಬೇಡಿಕೆಗಳ ಮನವಿ ಈಡೇರಿಸುವ ಭರವಸೆ
Subscribe to:
Post Comments (Atom)
0 comments:
Post a Comment