PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಗ್ರಾಮೀಣ ಅಂಚೆನೌಕರರು ತಮ್ಮ ಬೇಡಿಕೆಗಳ  ಈಡೇರಿಸಲು ಆಗ್ರಹಿಸಿ  ಸಂಸದರ ನಿವಾಸಕ್ಕೆ ಆಗಮಿಸಿ ಮನವಿ ಸಲ್ಲಿಸಿದರು. ಸಂಸದರ ಪರವಾಗಿ ಸಂಸದರ ಪುತ್ರ ಅಮರೇಶ ಕರಡಿ ಹಾಗೂ ಕಾರ್ಯಾಲಯದ ಆಪ್ತಸಹಾಯಕ  ಎಸ್.ಎನ್.ಜೋಷಿ ಮತ್ತು ಹಾಲೇಶ ಕಂದಾರಿ ಮನವಿ ಸ್ವೀಕರಿಸಿದರು. ಫ್ಯಾಕ್ಸ್ ಮತ್ತು ಈ ಮೇಲ್ ಮೂಲಕ  ಮನವಿಯನ್ನು ಸಂಸದರ ಗಮನಕ್ಕೆ  ತರಲಾಯಿತು. ಸದರಿ ಬೇಡಿಕೆಗಳ ಕುರಿತು ಸರಕಾರದ ಗಮನವನ್ನು ಪಾರ್ಲಿಮೆಂಟ್ ಅಧಿವೇಶನದಲ್ಲಿ ಮಾತನಾಡಿ ತರುವುದಾಗಿ ಮತ್ತು ಬೇಡಿಕೆಗಳ ಈಡೇರಿಕೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಂಸದರು ತಿಳಿಸಿದ್ದಾರೆ. 

Advertisement

0 comments:

Post a Comment

 
Top