PLEASE LOGIN TO KANNADANET.COM FOR REGULAR NEWS-UPDATES

 ಮಕ್ಕಳಿಗೆ ಶಿಕ್ಷಣ ನೀಡುವ ಸೇವೆ ಪವಿತ್ರವಾದದ್ದು ಹೊರತು ಹಾಗೂ ಗಳಿಸುವದಕ್ಕಾಗಿ ಮಾಡುವದಲ್ಲ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ   ರಾಘವೇಂದ್ರ ಪಾನಗಂಟಿ ಹೇಳಿದರು.

ನಗರದ ಬಿ.ಎಸ್.ಜಿ.ಎಸ್ ಟ್ರಸ್ಟಿನ ಶಾಂತಿನಿಕೇತನ ಪಬ್ಲಿಕ್ ಸ್ಕೂಲ್ ೬ನೇ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿದ ಅವರು ಮೇಲಿನಂತೆ ನುಡಿದರು. ಮುಂದುವರೆದು ಮಾತನಾಡಿದ ಅವರು ನಮ್ಮ ಹಿಂದುಳಿದ ಹೈ ಕ ಯು ಮುಂದುವರೆಯಬೇಕಾದರೆ ಸಾಧ್ಯ. ಆ ಶಿಕ್ಷಣ ಕ್ಷೇತ್ರವು ಬೆಳೆಯಲು ನಮ್ಮ ಖಾಸಗಿ ಶಾಲೆಗಳ ಪಾತ್ರ ಮಹತ್ವದ್ದಾಗಿದೆ. ಎಂದು ಹೇಳಿದರು.
ನಂತರ ಮುಖ್ಯ ಅತಿಥಿಗಳಾದ ಪಾಲ್ಗೊಂಡು ಮಾತನಾಡಿದ ವಿನೂತನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಿದ್ದಲಿಂಗಯ್ಯ ಹಿರೇಮಠ, ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ನಡೆಸಿಕೊಂಡು ಹೋಗುವುದು ಬಹಳ ಜವಾಬ್ದಾರಿ ಕೆಲಸವಾಗಿದೆ. ಈ ಸಂಸ್ಥೆ ಕ್ರಿಯಾಶೀಲವಾಗಿ ಕೆಲಸಮಾಡುತ್ತಿದ್ದು ಇದ್ದು ಶ್ಲಾಘನೀಯವಾಗಿದೆ ಎಂದು ಹೇಳಿದರು.,

Advertisement

0 comments:

Post a Comment

 
Top