PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ:     ಭಾಗ್ಯನಗರದ ನಿವಾಸಿಯಾಗಿದ್ದ ನಿವೃತ್ತ ಪ್ರಾಚಾರ್ಯ , ಸಾಹಿತಿ ಸಂಗಪ್ಪ ಹನುಮಂತಪ್ಪ ವಾಲ್ಮೀಕಿ (೭೩)  ಇಂದು ಬೆಳಗಿನ ಜಾವ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದರು.
ಉತ್ತಮ ಶಿಕ್ಷಕರು ದಕ್ಷ ಆಡಳಿತಗಾರರೂ ಆಗಿದ್ದ ಎಸ್.ಹೆಚ್.ವಾಲ್ಮೀಕಿ ಬೇವು-ಬೆಲ್ಲ , ಪ್ರವಾದಿ ಮುಹಮ್ಮದ್(ಸ) , ಶ್ರೀಮದ್ ಭಗವದ್ಗೀತೆಯ ಪಕ್ಷಿನೋಟ ,ಕೃತಿಗಳನ್ನು ರಚಿಸಿ ಸಾಹಿತ್ಯಿಕ ಪ್ರತಿಭೆ ಅನಾವರಣಗೊಳಿಸಿದ್ದರು. ಕ.ಸಾ.ಪ.ದ ಹಿರಿಯ ಅಜೀವ ಸದಸ್ಯರೂ ಆಗಿದ್ದರು. ಮೃತರು , ಪತ್ನಿ , ಪುತ್ರಿ, ಪುತ್ರರಾದ ನ್ಯಾಯವಾದಿ ಸಂಜೀವ , ಡಾ.ಸುನೀಲ್. ಕಿರಿಯ ಸಹೋದರ ಜಿಲ್ಲಾ ವಾಲ್ಮೀಕಿ ಸಂಘದ ಅಧ್ಯಕ್ಷ ಎಮ್.ಹೆಚ್.ವಾಲ್ಮೀಕಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Advertisement

0 comments:

Post a Comment

 
Top