PLEASE LOGIN TO KANNADANET.COM FOR REGULAR NEWS-UPDATES

 ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ಮೆಕ್ಕೆಜೋಳ, ಈರುಳ್ಳಿ, ಸಜ್ಜೆ ಮುಂತಾದ ಬೆಳೆಗಳ ಆವಕ (ಪ್ರಾರಂಭವಾಗಿದ್ದು). ದರಗಳು ಕುಸಿದಿದ್ದು, ಕುಸಿದ ದರದಿಂದ ರೈತರು ಕಂಗಾಲಾಗಿದ್ದಾರೆ. ಭಾರತ ಸರಕಾರ ಘೋಷಿಸಿರುವ ದರದಂತೆ
ಮೆಕ್ಕೆಜೋಳ, ಈರುಳ್ಳಿ, ಸಜ್ಜೆ ಬೆಳೆಗಳನ್ನು ಖರೀದಿಸಲು ಜಿಲ್ಲಾದ್ಯಾಂತ ಖರೀದಿ ಕೇಂದ್ರಗಳನ್ನು ದಿ: ೨೫-೧೦-೨೦೧೪ ರ ಶನಿವಾರದೊಳಗಾಗಿ ಪ್ರಾರಂಭಿಸಲು ವಿವಿಧ ಸಂಘಟನೆಗಳವರು  ಒತ್ತಾಯಿಸಿದ್ದಾರೆ.

ಖರೀದಿ ಕೇಂದ್ರಗಳನ್ನು ನಿಗದಿತ ದಿನಾಂಕದೊಳಗಾಗಿ ಪ್ರಾರಂಭಿಸದಿದ್ದಲ್ಲಿ ದಿ  ೨೭-೧೦-೨೦೧೪ ರ ಸೋಮವಾರದಂದು ಎ.ಪಿ.ಎಂ.ಸಿ. ಕೊಪ್ಪಳ ಮಾರುಕಟ್ಟೆ ಬಂದ್ ಮಾಡಿ ಪ್ರತಿಭಟಿಸಲಾಗುವದೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರಾದ ಭೀಮಸೇನ ಕಲಿಕೇರಿ, ಜಿಲ್ಲಾ ಕಾರ್ಯಾಧ್ಯಕ್ಷ ನಜೀರಸಾಬ ಮೂಲಿಮನಿ ಕನಕಪ್ಪ ಪೂಜಾರ, ಶೇಖರಪ್ಪ ಬೆಟಗೇರಿ, ಹನಮಂತಪ್ಪ ಗಿಜಗಿ ಮತ್ತು ಭಾರತ್ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಸ್.ಎ.ಗಫಾರ್, ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಸವರಾಜ ಶೀಲವಂತರ ಮುಂತಾದ ಎ.ಪಿ.ಎಂ.ಸಿ. ಎದುರಿಗೆ ಸಾಂಕೇತಿಕವಾಗಿ ಧರಣಿ ನಡೆಸಿ ನಂತರ ಎ.ಪಿ.ಎಂ.ಸಿ. ಅಧ್ಯಕ್ಷರ ಗವಿಸಿದ್ದಪ್ಪ ಮುದಗಲ್ ಅವರಿಗೆ ಮನವಿ ಅರ್ಪಿಸಿ ಒತ್ತಾಯಿಸಿದ್ದಾರೆ.
ಜಿಲ್ಲೆಯ ರೈತರು ಬೆಂಬಲ ಬೆಲೆ ಖರೀದಿ ಕೇಂದ್ರಗಳು ಪ್ರಾರಂಭವಾಗುವವರೆಗೂ ತಮ್ಮ ಬೆಳೆಗಳನ್ನು ಮಾರಾಟ ಮಾಡಬಾರದೆಂದು ಸಂಘಟನೆಗಳು ಮನವಿ ಮಾಡಿಕೊಂಡಿವೆ.

Advertisement

0 comments:

Post a Comment

 
Top