PLEASE LOGIN TO KANNADANET.COM FOR REGULAR NEWS-UPDATES


ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಂಜುನಾಥ ಜಿ. ಗೊಂಡಬಾಳ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿರುವ ಯುವಚೇತನ ಶಿವರಾಜ ತಂಗಡಗಿ ಅಭಿಮಾನಿಗಳ ವೇದಿಕೆ ಲಾಂಛನವನ್ನು ಈಚೆಗೆ ಸಚಿವ ಶಿವರಾಜ ತಂಗಡಗಿ ಅನಾವರಣಗೊಳಿಸಿದರು.
ಸಂಘಟನಾತ್ಮಕ ಸೇವೆಯೆ ಸಮಾಜದ ಒಳಿತಿಗೆ ಮುನ್ನುಡಿ ಎಂಬ ಸಾಲನ್ನು ಒಳಗೊಂಡ ಲಾಂಛನ ಸಂಘಟನೆ, ಜ್ಞಾನ, ಉದ್ಯೋಗ ಮತ್ತು ಅಭಿವೃದ್ಧಿಯ ದೃಷ್ಟಿಕೋನ ಹೊಂದಿರುವ ಸಂಘಟನೆಯ ಆಶಯಗಳನ್ನು ಒಳಗೊಂಡಿದೆ. ಲಾಂಛನವನ್ನು ವೇದಿಕೆಯ ಸಂಸ್ಥಾಪಕ ಮಂಜುನಾಥ ಗೊಂಡಬಾಳ ಸಿದ್ದಪಡಿಸಿದ್ದು, ವೇದಿಕೆಯ ವೆಬ್‌ಸೈಟ್ ಸಿದ್ದಗೊಳ್ಳುತ್ತಿದೆ, ಕೆಲವೇ ದಿನಗಳಲ್ಲಿ ಅದು ಲೋಕಾರ್ಪಣೆಗೊಳ್ಳಲಿದೆ, ವೇದಿಕೆಯ ವಿವಿದ ಜಿಲ್ಲಾ ಘಟಕಗಳು ರಚನೆಯಾಗುತ್ತಿದ್ದು, ಸಾಮಾಜಿಕ ಕಾರ್ಯಗಳನ್ನು ನಿರಂತರವಾಗಿ ಹಮ್ಮಿಕೊಳ್ಳುವ ಕೆಲಸ ಮಾಡುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ನಗರಸಭೆ ಸದಸ್ಯ ಮುತ್ತುರಾಜ ಕುಷ್ಟಗಿ ಇತರರು ಇದ್ದರು.

Advertisement

0 comments:

Post a Comment

 
Top