PLEASE LOGIN TO KANNADANET.COM FOR REGULAR NEWS-UPDATES

ಕರ್ನಾಟಕ ರಾಜ್ಯ ಸರಕಾರ ಇದೇ ತಿಂಗಳು ಎರಡರಂದು ಪೋಲಿಸ್ ಇಲಾಖೆಯಲ್ಲಿ ೨೮೫ ಪಿ.ಎಸ್.ಐ.(ನಾಗರೀಕ) ಹಾಗೂ ಪಿ.ಎಸ್.ಐ.(ಮೀಸಲು) ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಯಲ್ಲಿ ಸಂವಿಧಾನದ ೩೭೧(ಜೆ) ಪ್ರಕಾರ ಹೈದ್ರಾಬಾದ ಕರ್ನಾಟಕಕ್ಕೆ ಸುಮಾರು ೨೨ ಹುದ್ದೆಗಳನ್ನು ಗುಲ್ಬರ್ಗಾ ವಿಭಾಗದಲ್ಲಿ ಮತ್ತು ಬೆಂಗಳೂರು ನಗರದಲ್ಲಿರುವ ಸ್ಥಳೀಯ ಅಭ್ಯರ್ಥಿಗಳಿಗೆ ಮೀಸಲಿಡಲಾಗಿತ್ತು ಹಾಗೂ ಹೈದ್ರಾಬಾದ ಕರ್ನಾಟಕದ ಮೀಸಲಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹೈದ್ರಾಬಾದ ಕರ್ನಾಟಕೇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಿಲ್ಲವೆಂದು ಘೋಷಿಸಲಾಗಿತ್ತು. ಇದರಿಂದ ಹೈದ್ರಾಬಾದ ಕರ್ನಾಟಕದ ಅಭ್ಯರ್ಥಿಗಳು ಗೊಂದಲಕ್ಕೀಡಾಗಿದ್ದರು, ತಕ್ಷಣ ಹೈದ್ರಾಬಾದ ಕರ್ನಾಟಕ ಹೋರಾಟ ಸಮಿತಿಯು ಸಚಿವರಾದ   ಹೆಚ್.ಕೆ.ಪಾಟೀಲ್‌ರನ್ನು ಭೇಟಿಯಾಗಿ ಹೈದ್ರಾಬಾದ ಕರ್ನಾಟಕದ ಅಭ್ಯರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಕೋರಲಾಗಿತ್ತು.
ಈ ಗೊಂದಲವನ್ನು ಬಗೆಹರಿಸಲು ಪಿ.ಎಸ್.ಐ. ನೇಮಕಾತಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಹೈದ್ರಾಬಾದ ಕರ್ನಾಟಕ ವಿಶೇಷ ಘಟಕದ ಅಧಿಕಾರಿಗಳನ್ನು ಸೂಚಿಸಲಾಗಿತ್ತು. ಅದರಂತೆ, ಸಭೆ ನಡೆಸಿದ ಅಧಿಕಾರಿಗಳು, ಆನ್-ಲೈನ್ ಮೂಲಕ ಸಲ್ಲಿಸಲಾಗುವ ಅರ್ಜಿಯಲ್ಲಿ ಹೈದ್ರಾಬಾದ ಕರ್ನಾಟಕದ ಅಭ್ಯರ್ಥಿಗಳಿಗೆ ಹೈದ್ರಾಬಾದ ಕರ್ನಾಟಕದ ಮೀಸಲಾತಿಯಡಿ (ಸ್ಥಳೀಯ) ಹಾಗೂ ಸ್ಥಳೀಯೇತರ ಹುದ್ದೆಗಳಿಗೆ ಒಂದೇ ಅರ್ಜಿಯಲ್ಲಿ ಏಕಕಾಲದಲ್ಲಿ ಸಲ್ಲಿಸಲು ಅವಕಾಶ ನೀಡಿ ಮಾರ್ಪಡಿಸಲಾಗಿದೆ. ಇದರ ಬಗ್ಗೆ ಶೀಘ್ರದಲ್ಲಿ ತಿದ್ದುಪಡಿ ಅಧಿಸೂಚನೆ ಹೊರಡಿಸಲಾಗುತ್ತಿದೆ.
ಆದ್ದರಿಂದ ಅಭ್ಯರ್ಥಿಗಳು ಗೊಂದಲಕ್ಕೀಡಾಗದೇ, ಹೈದ್ರಾಬಾದ ಕರ್ನಾಟಕದ ಮೀಸಲಾತಿಯಡಿ (ಸ್ಥಳೀಯ) ಹಾಗೂ ಸ್ಥಳೀಯೇತರ ಹುದ್ದೆಗಳಿಗೆ ಏಕಕಾಲದಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳಲು ಡಾ.ರಝಾಕ ಉಸ್ತಾದ್  ಕೋರಿದ್ದಾರೆ.

Advertisement

0 comments:

Post a Comment

 
Top