PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆವತಿಯಿಂದ ಪ್ರತಿವರ್ಷದಂತೆ ಜರುಗುವ ಈ ವರ್ಷದ ೨೦೧೪ರ  ೮ನೇ ಜಿಲ್ಲಾ ಉತ್ಸವದಲ್ಲಿ ಕೊಪ್ಪಳ ನಗರದ ಉದಯ ಕಂಪ್ಯೂಟರ‍್ಸ್ ನ ಗಂಗಾಧರ ಕೇಸರಿಮಠ ರವರಿಗೆ  ಇಲ್ಲಿನ ಸಾಹಿತ್ಯ ಭವನದಲ್ಲಿ ಏರ್ಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೊಪ್ಪಳ ಐಸಿರಿ ಪ್ರಶಸ್ತಿಯನ್ನು ಅವರ ಕಂಪ್ಯೂಟರ್  ಶಿಕ್ಷಣದ ಸಾಧನೆ ಮತ್ತು  ಸಮಾಜ ಸೇವೆಗಾಗಿ ಪ್ರಶಸ್ತಿ ಪ್ರದಾನಮಾಡಿ ಸತ್ಕರಿಸಲಾಯಿತು.
 ಗಂಗಾಧರ ಕೇಸರಿಮಠ ರವರು ಕಂಪ್ಯೂಟರ್ ಶಿಕ್ಷಣ ರಂಗದಲ್ಲಿ ಉತ್ತಮ ಹಾಗೂ ಜನರ ಹಿತಕ್ಕಾಗಿ  ಹಾಗೂ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಉತ್ತಮ ಸೇವೆ ಮಾಡುತ್ತಿದ್ದಾರೆ ಅವರ ಈ ಕಾರ್ಯ ಮತ್ತು ಸೇವೆಯನ್ನು ಪರಿಗಣಿಸಿ ಅವರಿಗೆ ಕೊಪ್ಪಳ ಜಿಲ್ಲಾ ಉತ್ಸವದಲ್ಲಿ ಕೊಪ್ಪಳ ಜಿಲ್ಲಾ ನಾಗರೀಕರ ವೇದಿಕೆವತಿಯಿಂದ ಕೊಡಮಾಡುವ ಕೊಪ್ಪಳ ಐಸಿರಿ ಪ್ರಶಸ್ತಿಯನ್ನು ಸಮ್ಮೇಳನ ಅಧ್ಯಕ್ಷರಾದ ಶೇಖರಗೌಡ ಮಾಲಿಪಾಟಿಲ್ ರವರು ಪ್ರಶಸ್ತಿ ಪ್ರದಾನಮಾಡಿದರು. ಗಂಗಾಧರ ಕೇಸರಿಮಠ ರವರು ಕಂಪ್ಯೂಟರ್ ಶಿಕ್ಷಣ ರಂಗದಲ್ಲಿ ಉತ್ತಮ ಹಾಗೂ ನಿರಂತರ ಸಾಮಾಜಿಕ ಸೇವೆ ಮಾಡುತ್ತಾ ಬಂದಿದ್ದಾರೆ. ಇವರ ಈ ಎಲ್ಲ ಚಟುವಟಿಕೆ ಪರಿಗಣಿಸಿ ಇವರಿಗೆ ಈ ಪ್ರಶಸ್ತಿಗೆ ಆಯ್ಕೆ ಮಡಲಾಗಿತ್ತು. 
     ಈ ಸಂದರ್ಭದಲ್ಲಿ  ಸಾಹಿತಿ ಡಾ.iಹಾತೇಂಶ ಮಲ್ಲನಗೌಡರ್,  ಮತ್ತು ಸಿದ್ದಲಿಂಗಯ್ಯ ಹಿರೇಮಠ, ನಾಗರಿಕರ ವೇದಿಕೆಯ ರಾಜ್ಯಾಧ್ಯಕ್ಷ ಮಹೇಶ್ ಬಾಬು ಸುರ್ವೆ ಜಿ.ಎಸ್.ಗೋನಾಳ, ಸಿದ್ದಪ್ಪ ಹಂಚಿನಾಳ, ಹರೀಶ್.ಹೆಚ್.ಎಸ್. ಹನುಮಂತಪ್ಪ ಹೊಳೆಯಾಚಿ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
  ಅಭಿನಂದನೆ: ಗಂಗಾಧರ ಕೇಸರಿಮಠ ರವರು ಕೊಪ್ಪಳ ಜಿಲ್ಲಾ ಉತ್ಸವದಲ್ಲಿ ಕೊಪ್ಪಳ ಐಸಿರಿ ಪ್ರಶಸ್ತಿಯನ್ನು ೨೦೧೪ರ ಸಾಲಿನಲ್ಲಿ ಪ್ರಶಸ್ತಿ ಪಡೆದಿರುವುದಕ್ಕೆ ಅವರ ಸ್ನೇಹಿತg ಬಳಗ ಮತ್ತು ಅವರ ಸಂಸ್ಥೆಯಲ್ಲಿ ಕಂಪ್ಯೋಟರ್ ಶಿಕ್ಷಣ ಕಲಿತ ವಿಧ್ಯಾರ್ಥಿಗಳ ಬಳಗ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದೆ ಹಾಗೂ ಇಲ್ಲಿನ ವಿವಿಧ ಸಂಘಟನೆಗೆಳು ಕೂಡಾ ಅಭಿನಂದಿಸಿದ್ದಾರೆ

Advertisement

0 comments:

Post a Comment

 
Top