PLEASE LOGIN TO KANNADANET.COM FOR REGULAR NEWS-UPDATES


ನಗರದ ೨೬ನೇ ವಾರ್ಡಿನ ವಿಜಯನಗರ ಬಡಾವಣೆಯಲ್ಲಿ ೧ಕೋಟಿ ರೂ ವೆಚ್ಚದಲ್ಲಿ ಸಿಮೆಂಟ್ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ವಾರ್ಡಿನ ಸದಸ್ಯ ಪ್ರಾಣೇಶ ಮಾದನೂರ ಇಂದು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ೨೬ನೇ ವಾರ್ಡಿನ ಎಲ್ಲಾ ಬಡಾವಣೆಗಳ ಅಭಿವೃದ್ದಿಗೆ ತಾವು ಬದ್ದರಾಗಿದ್ದು ವಾರ್ಡಿನ ಕಲ್ಯಾಣನಗರ,ಗಣೇಶನಗರ, ಸತ್ಯಧ್ಯಾನಪುರ ಬಡಾವಣೆಯಲ್ಲಿ ಕಳೆದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಯಡಿಯೂರಪ್ಪನವರ ಅವಧಿಂiiಲ್ಲಿ ನಗರೋತ್ಥಾನ ಯೋಜನೆ ಅಡಿಯಲ್ಲಿ ಬಿಡುಗಡೆಯಾದ ಹಣದಲ್ಲಿ ಕಾiಗಾರಿಗಳನ್ನು ಪ್ರಾರಂಭಸಲಾಗಿದ್ದು ಇನ್ನು ಮೂಲಭೂತ ಸೌಲಭ್ಯಗಳಿಗಾಗಿ ಶ್ರಮಿಸುವದಾಗಿ ಭರವಸೆ ನೀಡಿದ ಅವರು ಗುತ್ತಿಗೆದಾರರಿಗೆ ಕಾಮಗಾರಿಯನ್ನು ತೀವೃಗತಿಯಲ್ಲಿ ಹಾಗೂ ಗುಣಮಟ್ಟದ  ಕಾಮಗಾರಿಯನ್ನು ಕೈಗೊಳ್ಳಲು ಸೂಚಿಸಿದ ಅವರು ಸಾರ್ವಜನಿಕರಿಗೆ ಯಾವದೇ ಅನಾನೂಕುಲವಾಗದಂತೆ ತುರ್ತಾಗಿ ಕಾಮಗಾರಿ ಪೂರ್ಣಗೊಳಿಸಿವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆಯ ಪ್ರಭಾರಿ ಆಯುಕ್ತ ಮಂಜುನಾಥ, ಗುತ್ತಿಗೆದಾರ ವಿನೋದಕುಮಾರ, ವಾರ್ಡಿನ ನಿವಾಸಿಗಳಾದ ಮುದಕಪ್ಪ, ಮೆಹಬೂಬ, ಪರಮಾನಂದ ಯಾಳಗಿ ಮುಂತಾದವರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top