PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ ತಾಲೂಕಿನ ಕೂಕನಪಳ್ಳಿ ಹಾಗೂ ಬೂದಗುಂಪಾ ಕ್ರಾಸ್ ಗ್ರಾಮಗಳಲ್ಲಿ ಪ್ರತಿ ಶುಕ್ರವಾರ ಕುರಿ ಹಾಗೂ ದನಗಳ ಸಂತೆಯನ್ನು ಒಂದೇ ದಿನ ಹಾಗೂ ಒಂದೇ ಸಮಯದಲ್ಲಿ ನಡೆಸಲು ಜಿಲ್ಲಾಧಿಕಾರಿ ಕೆ.ಪಿ.ಮೋಹನರಾಜ್ ಅವರು ಆದೇಶ ಹೊರಡಿಸಿದ್ದಾರೆ.
ಕೂಕನಪಳ್ಳಿ ಹಾಗೂ ಬೂದಗುಂಪಾ ಕ್ರಾಸ್ ನಲ್ಲಿ ಕುರಿ ಮತ್ತು ದನಗಳ ಸಂತೆ ಜರುಗಿಸುವ ಕುರಿತು ಕಳೆದ ಜೂ.14 ರಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಸಿದ ಸಭೆಯ ನಿರ್ಣಯದಂತೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಕೂಕನಪಳ್ಳಿ ಮತ್ತು ಬೂದಗುಂಪಾ ಕ್ರಾಸ್ ಎರಡೂ ಗ್ರಾಮಗಳಲ್ಲಿ ಒಂದೇ ದಿನ ಅಂದರೆ ಪ್ರತಿ ಶುಕ್ರವಾರ ಹಾಗೂ ಒಂದೇ ಸಮಯದಲ್ಲಿ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನರಾಜ್   ಆದೇಶದಲ್ಲಿ ತಿಳಿಸಿದ್ದಾರೆ. 

Advertisement

0 comments:

Post a Comment

 
Top