.jpg)
ರು.

ಕಾರ್ಯಕ್ರಮವನ್ನು ಗಂಗಾವತಿ ಜಿ.ಹೆಚ್.ಎನ್.ಕಾಮರ್ಸ್ ಕಾಲೇಜಿನ ಪ್ರಾಂಶುಪಾಲ ಓಂಕಾರೆಪ್ಪ ಬಳ್ಳೊಳ್ಳಿ ಉದ್ಘಾಟಿಸಿ ಮಾರ್ಮಿಕವಾಗಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಬಸವದಳದ ಕೋಶಾಧ್ಯಕ್ಷರಾದ ಕೊಟ್ರಪ್ಪ ಶೇಡದ ವಹಿಸಿಕೊಂಡಿದ್ದರು. ಮಾಜಿ ಜಿ. ಪಂ. ಸದಸ್ಯ ಶರಣಪ್ಪಗೌಡ್ರ ಪಾಟೀಲ ವೀರಾಪೂರ ಷಟಸ್ಥಲ ಧ್ವಜಾರೋಹಣ ಮಾಡಿದರು. ಮುಖ್ಯ ಅತಿಥಿತಳಾಗಿ ವೆಂಕನಗೌಡ್ರ ಪಾಟೀಲ ಹೊರತಟ್ನಾಳ, ಜಯಕರ್ನಾಟಕ ಸಂಘಟನೆಯ ಉತ್ತರಕರ್ನಾಟಕ ಕಾರ್ಯಾಧ್ಯಕ್ಷ ವಿಜಯಕುಮಾರ ಕವಲೂರ, ಕೂಡಲಸಂಗಮ ಬಸವಧರ್ಮ ಪೀಠದ ಗಣನಾಯಕ ಕೆ. ವೀರಣ್ಣ ಲಿಂಗಾಯತ್ ಇತರರು ವೇದಿಕೆ ಮೇಲಿದ್ದರು.
ಚೈತ್ರಾ ಈಶ್ವರ ಲಿಂಗಾಯತ್ ವಚನ ಗಾಯನ ನಡೆಸಿಕೊಟ್ಟರು, ಕೆ. ವಿಜಯಲಕ್ಷ್ಮೀ ಈಶ್ವರ ಲಿಂಗಾಯತ್ ರವರು ನೆನಹು ಎಂಬ ಗಾಯನ ಹಾಗೂ ಬಸವತತ್ವ ತರಬೇತಿ ಕಮ್ಮಟದ ಮೊದಲನೆ ದಿನದ ಕಾರ್ಯಕ್ರಮ ನಡೆಸಿಕೊಟ್ಟರು. ಬಸವದಳದ ಕಾರ್ಯದರ್ಶಿ ಶಿವಬಸಯ್ಯ ವೀರಾಪೂರ ಲಿಂಗದೇವ ನಿಷ್ಠೆ ಕುರಿತು ಮಾತನಾಡಿದರು, ಗುರುರಾಜ ಪಾಟೀಲ ಶರಣ ಮೇಳ ನಿಷ್ಠೆ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಬಾಲಕ ಬಸವಣ್ಣನವರ ದೇವಪ್ರಜ್ಞೆ ಎಂಬ ರೂಪಕವನ್ನು ಕೆ, ವಿಜಯಲಕ್ಷ್ಮೀಯವರ ಸಾರಥ್ಯದಲ್ಲಿ ಮನಮೋಹಕವಾಗಿ ಅಭಿನಯಿಸಿದರು.
ರುದ್ರೇಶ ಗೋಸಿ ಸ್ವಾಗತಿಸಿದರು, ಲಿಂಗಾಯತ ಧರ್ಮ ಮಹಸಭಾ ಅಧ್ಯಕ್ಷ ಸುಂಕಪ್ಪ ಅಮರಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು, ವೀರಣ್ಣ ಡೊಳ್ಳಿನ ಕಾರ್ಯಕ್ರಮ ನಿರೂಪಿಸಿದರು, ಕೊನೆಯಲ್ಲಿ ಅಮರೇಗೌಡ್ರ ಪಾಟೀಲ ವಂದಿಸಿದರು. ಈ ಕಾರ್ಯಕ್ರಮವೂ ಮೇ ೨ ವರೆಗೆ ನಡೆಯುತ್ತಿದ್ದು, ಬೆಳಿಗ್ಗೆ ೫ ರಿಂದ ೮ ವರೆಗೆ ಬಸವ ಚಿಂತನ ಪ್ರಭೆ ಕಾರ್ಯಕ್ರಮ ಹಾಗೂ ಸಂಜೆ ೬ ರಿಮದ ೮ ವರೆಗೆ ಗೋಷ್ಠಿಗಳು ನಡೆಯುತ್ತವೆ.
0 comments:
Post a Comment