PLEASE LOGIN TO KANNADANET.COM FOR REGULAR NEWS-UPDATES




ಕೊಪ್ಪಳ: ನಗರದ ಸಿ.ಪಿ.ಎಸ್.ಶಾಲೆ. ಸಂವಿಧಾನ ಶಿಲ್ಪ ಡಾ.ಬಿ.ಆರ್.ಅಂಬೇಡ್ಕರವರ ೧೨೩ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಅಂಬೇಡ್ಕರವರ ಜೀವನ ಮತ್ತು ಅವರ ಸಾಧನೆಗಳ ಕುರಿತಾಗಿ ಶಿಕ್ಷಕರಾದ ನಾಗಪ್ಪ ನರಿ ಮಕ್ಕಳಿಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರಿ ಮುಖ್ಯ ಶಿಕ್ಷಕರಾದ ಶಂಕ್ರಮ್ಮ ಬಂಗಾರಶೆಟ್ಟರ ವಹಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಬೀರಪ್ಪ ಅಂಡಗಿ ಚಿಲವಾಡಗಿ,ಸಾವಿತ್ರಿದಾಸ್,ವಿಜಯಾ,ರತ್ನಾ,ಗೌಸೀಯಾ ಬೆಗಂ,ಮೋಹಿನ್‌ಪಾಷಾಬೀ,ಗಂಗಮ್ಮ,ವಿಜಯಲಕ್ಷ್ಮೀ,ಭಾರತಿ ಮುಂತಾದವರು  ಹಾಜರಿದ್ದರು. ಶಿಕ್ಷಕರಾದ ಗುರುರಾಜ ಕಟ್ಟಿ ಕಾರ್ಯಕ್ರಮವನ್ನು  ನಿರೂಪಿಸಿದರು. ಶಿಕ್ಷಕರಾದ ವಿರುಪಾಕ್ಷಪ್ಪ ಬಾಗೋಡಿ ಸ್ವಾಗತಿಸಿ,ಶ್ರೀನಿವಾಸ್‌ರಾವ್ ವಂದಿಸಿದರು.

Advertisement

0 comments:

Post a Comment

 
Top