PLEASE LOGIN TO KANNADANET.COM FOR REGULAR NEWS-UPDATES



ಪ್ರೀತಿ ಮಾಯೆ ಹುಷಾರು ಕಣ್ಣಿಗೆ ಕಾಣೋ ಬಜಾರು.. ಅಂತಿರೋ ಹಾಡನ್ನು ನಾವು ಈ ಸ್ಟೋರಿಗಾಗಿ ಕೊಂಚ ಚೇಂಜ್ ಮಾಡಿ ಹೇಳಬೇಕಿದೆ. ಯಾಕಂದ್ರೆ ಪ್ರೀತಿಯ ಮಾಯೆ ಒಂಥರಾ ಆಗಿದ್ರೆ ಇಂದಿನ ಯುವಜನರಲ್ಲಿ ಮೊಬೈಲ್ ಗೀಳು ಕಡಿಮೆಯೇನಿಲ್ಲ. ತನ್ನಷ್ಟಿದ ಮೊಬೈಲ್ ಕೊಡಿಸಲಿಲ್ಲ ಅನ್ನೋ ಒಂದೇ ಒಂದು ಕಾರಣಕ್ಕೆ ಆ ಹುಡುಗ ಈಗ ಮನೆ ಬಿಟ್ಟು ಓಡಿಹೋಗಿದ್ದಾನೆ. ಹೀಗಾಗಿ ಮಗನನ್ನು ಕಾಣದ ಪಾಲಕರು ಕಂಗಾಲಾಗುವಂತಾಗಿದೆ.    
 ಬಹುತೇಕ ಕಡೆಗಳಲ್ಲಿ ಪ್ರೀತಿಗಾಗಿ ಮನೆ ಬಿಟ್ಟು ಹೋಗುತ್ತಿದ್ದ ಯುವಕರು, ಬಾಲಕರು ಇಂದು ಮೊಬೈಲ್ ಗಾಗಿ ಮನೆ ಬಿಟ್ಟು ಓಡಿ ಹೋಗೋಕೆ ಮುಂದಾಗ್ತಿದ್ದಾರೆ. ಅಂದ್ಹಾಗೆ ಈತನ ಹೆಸರು ಶಶಿಕುಮಾರ್ ಅಂತಾ,,, ಈತ ಮೂಲತ ಕೊಪ್ಪಳದ ಗಂಗಾವತಿಯ ಹಿರೇಜಂತಕಲ್ 
ಗ್ರಾಮದಲ್ಲಿರುವ ವಿರುಪಾಕ್ಷಪ್ಪ ಮತ್ತು ಶಶಿರೇಖಾ ಅನ್ನೋ ದಂಪತಿಯ ಎರಡನೇ ಸುಪುತ್ರ. ಹದಿನೈದು ವರ್ಷದ ಶಶಿಕುಮಾರ್‌ಗೆ ಮೊಬೈಲ್ ಅಂದ್ರೆ ಇನ್ನಿಲ್ಲದ ಹುಚ್ಚು. ಮಲಗಿದ್ರು ಮೊಬೈಲ್ ಬೇಕು... ಊಟುಕ್ಕೆ ಕುಳಿತೀರು ಮೊಬೈಲ್‌ನಲ್ಲಿ ಮಾತನಾಡುತ್ತ ಊಟ ಮಾಡುತ್ತಿದ್ದ ಕಣ್ರೀ,,, ಮೊಬೈಲ್ ಕೈಯಲ್ಲಿ ಇಲ್ಲಂದ್ರೆ ಸಾಕು ಈತ ಏನು ಮಾಡುವುಕ್ಕೆ ಹಿಂಜೆರುತ್ತೀರಲಿಲ್ಲ,,, 
ಮೊಬೈಲ್ ಗೀಳಿಗೆ ಬಿದ್ದ ಬಾಲಕ ತನಗೆ ಇಷ್ಟ ಆಗುವ ಮೊಬೈಲ್ ಸೆಟ್ ಮನೆಯವರು ಕೊಡಿಸಲಿಲ್ಲ ಅನ್ನೋ ಒಂದೇ ಕಾರಣಕ್ಕೆ ಮನೆ ಬಿಟ್ಟು ಓಡಿ ಹೋಗಿದ್ದಾನೆ. 
ಶಶಿಕುಮಾರನಿಗೆ ಈ ಮೊದ್ಲು ಮಗ ಕೇಳಿದ್ನಲ್ಲ ಅನ್ನೋ ಕಾರಣಕ್ಕೆ ಎರಡು ಸಾವಿರ ರೂಪಾಯಿ ಬೆಲೆಯ ಮೊಬೈಲ್ ಕೊಡಿಸಿದ್ರು. ಆದ್ರೆ ಶಶಿಕುಮಾರ್‌ಗೆ ಅದು ಇಷ್ಟ ಆಗಲಿಲ್ಲ ಅನ್ಸುತ್ತೆ. ಹೀಗಾಗಿ ಪಾಲಕರಿಗೆ ತಿಳಿಸದೇ ಇನ್ನೂರು ರೂಪಾಯಿಗೆ ಅದನ್ನು ಮಾರಿಬಿಟ್ಟಿದ್ದ. ತನಗೆ ಹನ್ನೆರಡು ಸಾವಿರ ರೂಪಾಯಿಯ ಮೊಬೈಲ್ ಬೇಕು ಅಂತ ಹಠ ಹಿಡಿದು ಕುಳಿತಿದ್ದ. ಆದ್ರೆ ಅದೇನಾಯ್ತೋ ಏನೋ ಒಂದು ದಿನ ಮನೆಯಲ್ಲಿಟ್ಟಿದ್ದ ಮೂರು ಸಾವಿರ ರೂಪಾಯಿಗಳನ್ನು ತೆಗೆದುಕೊಂಡು ಯಾರಿಗೂ ಹೇಳದೆ ನಸುಕಿನ ಜಾವ ಐದು ಗಂಟೆ ಹೊತ್ತಿಗೆ ಮನೆಬಿಟ್ಟು ಓಡಿ ಹೋಗಿದ್ದಾನೆ. ಹೀಗಾಗಿ ಮಗನ ಬರುವಿಕೆಗಾಗಿ ಹೆತ್ತವರು ಕಾತರಿಸುತ್ತಿದ್ದಾರೆ. ಒಂದು ತಿಂಗಳಿಂದ ಕಣ್ಣೀರಲ್ಲೇ ದಿನ ದೂಡುತ್ತಿದ್ದಾರೆ. ಪೊಷಕರು ಮೊಬೈಲ್ ಕೊಡಿಸುತ್ತಿನಿ ನಿನ್ನು ಎಲ್ಲಿದ್ರೂ ಮನೆಗ ಬಾ ಅಂತ್ತಿದ್ದಾರೆ...  
ಮಗನನ್ನು ಕಾಣದ ಪೋಷಕರು ಕಂಗಾಲಾಗಿದ್ದಾರೆ. ಮಗನೇ ನಿನ್ನಿಷ್ಟದ ಮೊಬೈಲ್ ಕೊಡಿಸ್ತೀವಿ ದುಡ್ಡು ಒಯ್ದಿದ್ದಕ್ಕೆ ಬೈಯೋದಿಲ್ಲ, ಎಲ್ಲೆ ಇದ್ರೂ ಆರಾಮ್ ಆಗಿರು. ಮನೆಗೆ ಬೇಗ ಬಾ ಅಂತ ಹೆತ್ತವರು ಪರಿ ಪರಿಯಾಗಿ ಬೇಡಿಕೊಳ್ತಿದ್ದಾರೆ. ಮಗನನ್ನು ಹುಡುಕಿಕೊಡಿ ಪ್ಲೀಸ್ ಅಂತ ಗಂಗಾವತಿ ನಗರ ಠಾಣೆಯ ಪೊಲೀಸರ ಮೊರೆ ಹೋಗಿದ್ದಾರೆ. ತಮ್ಮ ಮಗನ ಬರುವಿಕೆಗಾಗಿ ಕಾದು ಕುಳಿತಿದ್ದಾರೆ.  

Advertisement

0 comments:

Post a Comment

 
Top