PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ ತಾಲೂಕಿನ ಬುದುಗುಂಪಾ ಶ್ರೀ ಕುವೆಂಪು ಹಿರಿಯ ಪ್ರಾಥಮಿಕ/ ಪ್ರೌಢಶಾಲೆಯಲ್ಲಿ ದಿ.೦೫.೦೩.೨೦೧೪ ರಂದು ೯ನೇ ಶಾಲಾ ವಾರ್ಷಿಕೋತ್ಸವದಲ್ಲಿ ಸಮ್ಮೇಳನದಲ್ಲಿ ಮೂಲ ಜನಪದ ಗೀತೆಗಳ ಗಾಯನನವನ್ನು ರಾಜ್ಯ ಪ್ರಶಸ್ತಿ ವಿಜೆತರಾದ ಶರಣಪ್ಪ ವಡಗೇರಿಯವರು ಉದ್ಘಾಟಿಸಿದರು. 
                   ಹಾಗೂ ರಂಗ ವಿಜ್ಞಾನಿ ಹಾಲ್ಕುರಿಕೆ ಥೇಟರ್‌ನ ಮುಖ್ಯಸ್ಥರಾದ ಹಾಲ್ಕುರಿಕೆ ಶಿವಶಂಕರ ಉಪನ್ಯಾಸ ನೀಡಿದರು. ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಯರಾದ ಸ್ರೀ ತಿಪ್ಪೆಸ್ವಾಮಿ, ದುರಗಪ್ಪ ಮ್ಯಾದನೇರಿ, ಇಂದರಗಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯರಾದಂತ ಭೀಮಸೇನ ಬಡಿಗೇರ, ಈ ಕಾರ್ಯಕ್ರಮ ಅಧ್ಯಕ್ಷತೆಯನ್ನು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಫಕೀರಪ್ಪ ಎಮ್ಮಿಯವರು ವಹಿಸಿದ್ದು ಅಂದೆ ಸಂಜೆ ೦೬:೩೦ ಕ್ಕೆ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ನಡೆದವು ಸಂಗೋಳ್ಳಿ ರಾಯಣ್ಣ ಐತಿಹಾಸಿಕ ನಾಟಕವು ಸೇರಿದ್ದ ಜನರಿಗೆ ಅಚ್ಚುಗೆ ಮೆಚ್ಚುಗೆ ಪಾತ್ರರಾದರು ಯಶಸ್ವಿಯಾಗಿ ಜರುಗಿದವು.  
                   ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರಾದ ಪಾರ್ವತಮ್ಮ ಸಿದ್ದಪ್ಪ ಗೊಬ್ಬಿ, ರಾಘವೇಂದ್ರ ಪಾನಘಂಟಿ, ಪ್ರಹ್ಲಾದ ಅಗಡಿ, ಮಹಮ್ಮದ ಅಲಿಬುದ್ದಿನ್, ಬಸವರಾಜ ಭಾವಿಕಟ್ಟಿ ಎ.ವಿ.ಗುರುರಾಜ, ಬಸವರಾಜ ಪೆದ್ಲ, ಪಂಚಯ್ಯ ಹಿರೇಮಠ, ಲಿಂಗರಾಜ, ಲಿಂಗರಡ್ಡಿ, ಬಸವಗುರು, ಸಿಮಣ್ಣ ಗಬ್ಬೂರ, ರಾಮಣ್ಣ ಶ್ಯಾವಿ, ಗ್ರಾಮದ ಗುರು ಹಿರಿಯರು, ಪಾಲಕರು, ಯುವಕರು ಕಾರ್ಯಕ್ರಮವನ್ನು  ಯಶಸ್ವಿಗೊಳಿಸಿದರು.  


ಈ ನಾಟಕದ ನಿರ್ದೆಶನವನ್ನು ಪ್ರಾಣೇಶ ಪೂಜಾರ ಶಿಕ್ಷಕರ ಕಲಾ ವೃಂದ ಕೊಪ್ಪಳ ಇವರು ನೀಡಿದರು.  

Advertisement

0 comments:

Post a Comment

 
Top