PLEASE LOGIN TO KANNADANET.COM FOR REGULAR NEWS-UPDATES

 ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ ಕೊಪ್ಪಳ ಯುವಜನ ಮತ್ತು ಸೇವಾ ಕ್ರೀಡಾ ಇಲಾಖೆ ಕೊಪ್ಪಳ ಶ್ರೀ ತಾಯಮ್ಮದೇವಿ ಭಜನಾ ಸಂಘ (ರಿ) ಕಾತರಕಿ ಇವರ ಸಂಯುಕ್ತ ಆಶ್ರಯದಲ್ಲಿ ೦೮.೦೩.೨೦೧೪ ರಂದು ನಡೆದ ಜಿಲ್ಲಾ ಮಟ್ಟದ ಯುವಮೇಳ ಕಾರ್ಯಕ್ರಮದಲ್ಲಿ ರಾಘವೇಂದ್ರ ಅರಿಕೇರಿ ಇವರು ಸಾಮಾಜಿಕ ಕ್ಷೇತ್ರದಲ್ಲಿ ಯುವ ಶಕ್ತಿಯ ಬಗ್ಗೆ ಕಾಳಜಿಯ ಹೊಂದಿದ್ದು. ಸಂಘ ಸಂಸ್ಥೆಗಳ ಜೊತೆಗೆ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು ರಾಜ್ಯ ಮತ್ತು ರಾಷ್ಟ್ರೀಯ ಭಾವ್ಯಕಿತ ಶಿಬಿರಗಳಲ್ಲಿ  ಪಾಲ್ಗೊಳ್ಳುತ್ತಾ ಕರಾಟೆ ಕಲೆಯ ಬಗ್ಗೆ   ಉಪನ್ಯಾಸ ಹಾಗೂ ಕೊಪ್ಪಳ ತಾಲೂಕ ೩೪ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡುವ ಮುಖಾಂತರ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ ಪ್ರಸ್ತುತ  ರಾಘವೇಂದ್ರ ಅರಿಕೇರಿ  ಇವರನ್ನು ಯುವಜನ ಮತ್ತು ಸೇವಾ ಕ್ರೀಡಾ ಇಲಾಖೆಯು ಇವರನ್ನು ಗುರುತಿಸಿ ೨೦೧೩-೧೪ ನೇ ಸಾಲೀನ ಜಿಲ್ಲಾ ಯುವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.     
ಈ ಸಂದರ್ಭದಲ್ಲಿ ಕ್ರೀಡಾ ಅಧಿಕಾರಿಗಳಾ
ದ ಎಸ್.ಎಮ್.ಪಾಟೀಲ, ಚಂದ್ರಮಪ್ಪ ಮಾಸ್ತಾರ, ರಾಜ್ಯ ಯುವಪ್ರಶಸ್ತಿ ಪುರಸ್ಕೃತರಾದ ಜಗದಯ್ಯಸಾಲಿಮಠ, ವಂದೇ ಮಾತರಂ ಸಂಘದ ಅದ್ಯಕ್ಷರಾದ ರಾಕೇಶ ಕಾಂಬ್ಳೇಕರ, ಪ್ರಾಚಾರ್ಯರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ, ಶಂಕ್ರಯ್ಯ ಅಬ್ಬಿಗೇರಿಮಠ, ಇನ್ನೂ ಅನೇಕ ಗಣ್ಯವಕ್ತಿಗಳು, ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.  

Advertisement

0 comments:

Post a Comment

 
Top