PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ ತಾಲೂಕ ಪಂಚಾಯತಿಯಿಂದ ತಾಲೂಕಿನ ವಿವಿಧ ಗ್ರಾಮಗಳಾದ ಮುನಿರಾಬಾದ್ ಡ್ಯಾಂ ಹಾಗೂ ಹುಲಿಗಿ ಗ್ರಾ.ಪಂ.ಯಲ್ಲಿ ನಿರ್ಮಲ ಭಾರತ ಅಭಿಯಾನ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕುರಿತು ವೈ.ಬಿ.ಜೂಡಿ ಕಲಾತಂಡದವರು ಬೀದಿ ನಾಟಕ ಪ್ರದರ್ಶನ ಮಾಡುವುದರ ಮೂಲಕ ಜನರಿಗೆ ಮಾಹಿತಿ ನೀಡಿದರು. ಅಲ್ಲದೇ ಗ್ರಾಮಸ್ಥರಿಗೆ ವಿವಿಧ ಕಿರುಚಿತ್ರಗಳನ್ನು ಪ್ರದರ್ಶನ ಮಾಡಲಾಯಿತು.
  ಈ ಸಂದರ್ಭದಲ್ಲಿ ಹುಲಿಗಿ ಗ್ರಾ.ಪಂ.ಅಧ್ಯಕ್ಷ ಪಾಲಾಕ್ಷಪ್ಪ ಗುಂಗಾಡಿ, ಗ್ರಾ.ಪಂ.ಸದಸ್ಯರಾದ ರಾಮಣ್ಣ ನಾಯಕ, ನಾರಾಯಣಪ್ಪ, ಪಿ.ರಾಮಸ್ವಾಮಿ, ಯಮನೂರಸಾಬ, ಕರಿಯಪ್ಪ, ಮುಖಂಡರಾದ ರಾಮು, ಸುರೇಶ, ತಾಲೂಕ ಐಇಸಿ ಸಂಯೋಜಕರಾದ ದೇವರಾಜ ಪತ್ತಾರ, ಪಂಚಾಯತಿ ಅಭಿವೃದ್ದಿ ಅಧಿಕಾರಿ ಬಸವರಡ್ಡಿ ತವದಿ, ಎನ್‌ಬಿಎ ಸ್ವಚ್ಚತಾಧೂತ ಮಹೇಶ, ಕರವಸೂಲಿಗಾರ ಜಿಲಾನಿ, ಮಂಜುನಾಥ, ಗಣಕಯಂತ್ರ ನಿರ್ವಾಹಕ ದೊಡ್ಡಬಸಯ್ಯ ಸೇರಿದಂತೆ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಯಲಬುರ್ಗಾ : 
 ನಿರ್ಮಲ ಭಾರತ ಅಭಿಯಾನ ಮತ್ತು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ೧೫ ಅಂಶಗಳ ಕಾರ್ಯಕ್ರಮಗಳ ಕುರಿತು ಸಮುದಾಯದಲ್ಲಿ ಅರಿವು ಮೂಡಿಸಲು ಚೈತನ್ಯ ರಥ ಕಾರ್ಯಕ್ರಮವನ್ನು ಯಲಬುರ್ಗಾ ತಾಲೂಕಿನ ವಿವಿಧ ಗ್ರಾಮಗಳಾದ ಹಿರೇವಂಕಲಕುಂಟಾ, ಬಳೂಟಗಿ ಹಾಗೂ ತಾಳಕೇರಿ ಗ್ರಾಮದಲ್ಲಿ ಗ್ರಾ.ಪಂ.ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಚಾಲನೆ ನೀಡಿದರು.
ಚೈತನ್ಯ ರಥ ಯಾತ್ರೆ ಮೂಲಕ ಜನಪದ ಹಾಗೂ ಬೀದಿ ನಾಟಕದ ಮುಖಾಂತರ ಸರ್ಕಾರದ ಯೋಜನೆಗಳಾದ ಉದ್ಯೋಗ ಖಾತ್ರಿ ಯೋಜನೆ, ನಿರ್ಮಲ ಭಾರತ ಯೋಜನೆ, ಸಾಕ್ಷರ ಭಾರತ ಯೋಜನೆಗಳ ಮಹತ್ವವನ್ನು ಜನರಿಗೆ ತಿಳಿಸಲಾಯಿತು. ಅಲ್ಲದೇ ಎಮ್.ಜಿ.ಎನ್.ಆರ್.ಇ.ಜಿ ಯೋಜನೆಯಲ್ಲಿ ಸಮಾನ ಕೂಲಿ ಸಮಾನ ವೇತನ, ವರ್ಷದಲ್ಲಿ ಒಂದು ಕುಟುಂಬಕ್ಕೆ-೧೦೦ ದಿನ ಕೂಲಿ, ಕಾಯಕ ಸಂಘಗಳ ರಚನೆ, ಪ್ರಸ್ತುತ ವರ್ಷದಲ್ಲಿ ದಿನಕ್ಕೆ ರೂಪಾಯಿ ೧೭೪ ಕೂಲಿ, ವಯಕ್ತಿಕ ಶೌಚಾಲಯ ನಿರ್ಮಾಣ ಮುಂತಾದ ಯೋಜನೆಗಳ ಬಗ್ಗೆ ಜನ ಜಾಗೃತಿ ಮೂಡಿಸಲಾಯಿತು. 
ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು, ಕಾರ್ಯದರ್ಶಿಗಳು, ತಾಲೂಕ ಐಇಸಿ ಸಂಯೋಜಕರು, ಎನ್‌ಬಿಎ ಸ್ವಚ್ಚತಾಧೂತರು, ಸಿಬ್ಬಂದಿ ವರ್ಗದವರು, ಗ್ರಾಮಸ್ಥರು ಭಾಗವಹಿಸಿದ್ದರು.

Advertisement

0 comments:

Post a Comment

 
Top