PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ನಗರದಲ್ಲಿ ಸಿಟಿಜನ್ ಪಾರ್ ಅಕೌಂಟೆಬಲ್ ಗೌರಮೇನ್ಸ್ ( ಸಿ.ಎ.ಜಿ) ವತಿಯಿಂದ ಆಯೋಜಿಸಲ್ಪಟ್ಟ ಭಾರತದ ಉಕ್ಕಿನ ಮನುಷ್ಯ ಸರದಾರ್ ವಲ್ಲಾಭಾಯ ಪಟೇಲ್‌ರವರ ಪುಣ್ಯ ತಿಥಿಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಏಕತಾ ರ‍್ಯಾಲಿಗೆ  ರಾಮಕೃಷ್ಣ ಮಠದ ಪುಜ್ಯರಾದ ಚೈತ್ಯಾನಂದ ಸ್ವಾಮಿಜಿಯವರು ಕೊಪ್ಪಳ ಹಿರಿಯ ನಾಗರಿಕರಾದ ಅಶೋಕ ಸ್ವಾಮಿ ಹಿರೇಮಠ ರವರಿಗೆ ಏಕತಾ ಶಾಲು ಒದಗಿಸುವ ಮೂಲಕ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಸರದಾರ್ ವಲ್ಲಾಭಾಯಿ ಪಟೇಲ್‌ರ ಬಗ್ಗೆ ಶಿವಕುಮಾರ  ಕುಕನೂರು ಅಧ್ಯಕ್ಷರು ಶಾಂತಿ ನಿಕೇತನ ಪಬ್ಲಿಕ್ ಸ್ಕೂಲ್  ಇವರು ಮಾತನಾಡಿದರು. 
                 
ಏಕತಾ ಓಟವು ಗವಿಮಠದಿಂದ ಗಡಿಯಾರ ಕಂಭದ ಮಾರ್ಗವಾಗಿ ಜವಾಹರ ರಸ್ತೆಯ ಮೂಲಕ ಅಶೋಕ ವೃತ್ತದ ಮೂಲಕ ಬಾಲಕರ ಸರಕಾರಿ ಪದವಿ ಪೂರ್ವ ಕಾಲೆಜಿನಲ್ಲಿ ಮುಕ್ತಾಯವಾಯಿತು.
ಕಾರ್ಯಕ್ರಮದಲ್ಲಿ ಸಂಸದರಾದ ಶಿವರಾಮಗೌಡ್ರ, ಮಾಜಿ ಶಾಸಕರು ಬಿ ಜೆ ಪಿ ಜಿಲ್ಲಾಧ್ಯಕ್ಷರಾದ  ಸಂಗಣ್ಣ ಕರಡಿಯವರು, ವಿಧಾನ ಪರಿಷತ್ತ ಸದಸ್ಯರಾದ ಹಾಲಪ್ಪ ಆಚಾರ, ಮಾಜಿ ಕಾಡಾ ಅಧ್ಯಕ್ಷರಾದ ಹೆಚ್ ಗಿರಿಗೌಡ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನರಸಿಂಹರಾವ್ ಕುಲಕರ್ಣಿ, ರಾಜು ಬಾಕಳೆ, ಜಿಲ್ಲಾ ರೈತ ಮೋರ್ಚಾಧ್ಯಕ್ಷರಾದ ನಾರಾಯಣಪ್ಪ, ಜಿಲ್ಲಾ ಕಾರ್ಯದರ್ಶಿಗಳಾದ ತೋಟಪ್ಪ ಮೇಟಿ, ಜಿಲ್ಲಾ ಯುವಮೋರ್ಚಾಧ್ಯಕ್ಷರಾದ ಮಂಜುನಾಥ ಪಾಟೀಲ, ಜಿಲ್ಲಾ ಹಿಂದುಳಿದ ಅಧ್ಯಕ್ಷರಾದ ಉಮೇಶ ಸಜ್ಜನ, ಜಿಲ್ಲಾ ಅಲ್ಪ ಸಂಖ್ಯಾತರ ಪ್ರಧಾನ ಕಾರ್ಯದರ್ಶಿಗಳಾದ ಮುಜಾವರ, ಮಹಿಳಾ ಮೋರ್ಚಾಜಿಲ್ಲಾಧ್ಯಕ್ಷರಾದ ಹೇಮಲತಾ ನಾಯಕ, ನಗರಸಭಾ ಸದಸ್ಯರಾದ ಅಪ್ಪಣ್ಣ ಪದಕಿ, ಗವಿಸಿದ್ದಪ್ಪ ಚಿನ್ನೂರು, ಪ್ರಾಣೇಶ ಮಾದಿನೂರು, ಪ್ರಾಣೇಶ ಮಹೇಂದ್ರಕರ, ಶಿವಪ್ಪ ಮುಂಗ್ಲಿ, ಬಿ ಜೆ ಪಿ ಮುಖಂಡರಾದ ಕೆ.ಜಿ ಕುಲಕರ್ಣಿ, ವಿ ಎಮ್ ಬೂಸನೂರಮಠ, ಆರ್ ಬಿ ಪಾನಘಂಟಿ, ಫಿರಾಹುಸೆನ ಹೊಸಳ್ಳಿ, ಗವಿಸಿದ್ದಪ್ಪ ಕಂದಾರಿ, ಹಾಲೇಶ ಕಂದಾರಿ, ಸಂಗಮೆಶ ಡಂಬಳ, ಕೆ.ರವೀಂದ್ರಾವ್, ದತ್ತಾ, ಮಂಜುನಾಥ ಅಂಗಡಿ, ಬಿ ಜೆ ಪಿ ಗ್ರಾಮಾಂತರ ಅಧ್ಯಕ್ಷರಾದ ಕೋಟ್ರೇಶ ಶಡ್ಮಿ, ನಗರ ಘಟಕದ ಅಧ್ಯಕ್ಷರಾದ ಚಂದ್ರು ಕವಲೂರು, ನಗರ ಯುವ ಘಟಕದ ಅಧ್ಯಕ್ಷರಾದ ಪೃತ್ವಿರಾಜ ಚಾಕ್ಲೆಬ್ಬಿ, ಶಂಕುತಲಾ ಮಾಲೀಪಾಟೀಲ, ಶಾಮಲಾ ಕೊನಾಪೂರ, ಹೇಮಕ್ಕಾ ಮಂಗಳೂರು, ವೀರುಪಣ್ಣ, ಎ ಬಿ ವಿ ಪಿ ಮುಖಂಡರಾದ ರಾಕೇಶ ಪಾನಘಂಟಿ, ನರೇಂದ್ರ ಕೆ ಕುಲಕರ್ಣಿ, ಅಮೀತ,   ಜಿಲ್ಲಾ ಬಿ ಜೆ ಪಿ ವಕ್ತಾರರಾದ ಚಂದ್ರುಶೇಖರ ಪಾಟೀಲ ಹಲಗೇರಿ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಆಡಳಿ ಮಂಡಳಿ ವರ್ಗದವರು ಶಿಕ್ಷಕ ವೃಂದದವರು, ವಿವಿಧ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು. ಕೊಪ್ಪಳ ನಾಗರಿಕರು ಏಕತಾ ಓಟವನ್ನು ಯಶ್ವಸ್ವಿ ಗೊಳಿಸಿದರು ಎಂದು ಜಿಲ್ಲಾ ಸಂಚಾಲಕರಾದ ಮಲ್ಲಣ್ಣ ಬೇಲೆರಿ ಹಾಗೂ ಸಹ ಸಂಚಾಲಕರಾದ ಗವಿಸಿದ್ದಪ್ಪ ಚಿನ್ನೂರು, ತಿಳಿಸಿದ್ದಾರೆ.    

Advertisement

0 comments:

Post a Comment

 
Top