PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ವನಮಹೋತ್ಸವ ಕಾರ್ಯಕ್ರಮದದಲ್ಲಿಂದು ಬಸವ ಮಂಟಪ, ಕಲ್ಯಾಣ ನಗರ, ಪ್ರಗತಿ ಕಾಲನಿ, ಪೋಲೀಸ್ ಕಾಲನಿ ಮತ್ತು ಟೀಚರ್‍ಸ್ ಕಾಲನಿಗಳಲ್ಲಿ ಒಟ್ಟು ೬ ಟ್ರ್ಯಾಕ್ಟರ್ ಸಸಿಗಳನ್ನು ವಿತರಿಸಲಾಯಿತು.  ಶ್ರೀಗವಿಮಠ , ವನಶ್ರೀಟ್ರಸ್ಟ, ಜಿಲ್ಲಾಡಳಿತ, ಅರಣ್ಯ ಇಲಾಖೆ, ನಗರಸಭೆ, ಹಾಗೂ ಪರಿಸರ ಪ್ರಿಯ ಸಂಘಟಣೆಗಳ ಅಡಿಯಲ್ಲಿ ಜರುಗುತ್ತಿರುವ ಈ ಕಾರ್ಯಕ್ರಮ ಇಂದು ೪ ನೇ ದಿನಕ್ಕೆ ಪಾದಾರ್ಪಣೆ ಮಾಡಿದೆ.  ಪೂಜ್ಯ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಸಸಿ ವಿತರಣೆ ಮಾಡಲಾಯಿತು. ಪ್ರತಿಯೊಬ್ಬರೂ ಪೂಜ್ಯ ಶ್ರೀಗಳ ಪಾದಕ್ಕೆ ವಂದಿಸುತ್ತಾ ಧನ್ಯತಾಭಾವದಿಂದ ಸಸಿಗಳನ್ನು ಪಡೆದುಕೊಂಡು ಸ್ವಯಂ ನೆಡುವಲ್ಲಿ ನಿರತರಾದರು. ಶ್ರೀಗಳ ಜೊತೆಗೆ ನಗರಸಭಾ ಸದಸ್ಯ ಪ್ರಾಣೇಶ ಮಾದಿನೂರು, ಬಸವರಾಜ್ ಪುರದ, ರಾಜು ಶೆಟ್ಟರ್, ವಸ್ತ್ರದ್ ಸಹೋದರರು ಹಾಗೂ ಆಯಾ ವಾರ್ಡುಗಳ ಪ್ರಮುಖರು ಭಾಗಿಯಾಗಿದ್ದರು. ಇಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಭಾಗವಹಿಸಿ ಪೂಜ್ಯ ಶ್ರೀಗಳ ಆಶಿರ್ವಾದ ಪಡೆದು, ಸಸಿ ನೆಡುವುದರ ಮೂಲಕ ಸಹಕಾರ ನೀಡಿದರು. 

ಈ ಸಂದರ್ಭದಲ್ಲಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಪ್ರತಿ ವಾರ್ಡಗಳಲ್ಲೂ ಪೂಜ್ಯ ಶ್ರೀಗಳ ಜೊತೆ ಪುರ ಪ್ರಮುಖರು, ರಾಜಕೀಯ ಧುರೀಣರು ಜೊತೆಗೂಡಿ ಸಹಕರಿಸುತ್ತಿದ್ದರು. ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಮತ್ತು ಶ್ರೀಗವಿಸಿದ್ಧಶ್ವರ ಪದವಿಪೂರ್ವ ಕಾಲೇಜಿನ ಎನ್.ಎಸ್.ಎಸ್ / ಎನ್.ಸಿ.ಸಿ ವಿದ್ಯಾರ್ಥಿಗಳು ಮೊದಲಾದವರು ಭಾಗವಹಿಸಿದ್ದ


Advertisement

0 comments:

Post a Comment

 
Top