.jpg)
ಪಿ.ಯೂ.ಸಿ.ಎಲ್. ಮಹಿಳಾ ಸಂಘದ ಉಪಾಧ್ಯಕ್ಷರಾದ ರತೀರಾವ್ ಗುತ್ತಿಗೆ ಕಾರ್ಮಿಕರ ಪದ್ದತಿಯಿಂದ ಕಾರ್ಮಿಕರಿಗೆ ಬಹಳ ತೋಂದರೆಯಾಗುತ್ತಿದೆ. ವಿಶೇಷವಾಗಿ ಮಹಿಳಾ ಕಾರ್ಮಿಕರಿಗೆ ಕೆಲಸ ಅಭದ್ರತೆ ನೆಪದಲ್ಲಿ ಹಲವಾರು ರೀತಿಯ ಕಿರುಕುಳ, ದೌರ್ಜನ್ಯ, ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಿವೆ. ಈ ಕಾರಣಗಳಿಂದ
ಗುತ್ತಿಗೆ ಕಾರ್ಮಿಕರ ಪದ್ದತಿಗಳನ್ನು ರದ್ದುಗೊಳಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಜಿಲ್ಲಾ ಬಚಾವೋ ಆಂದೋಲನ ಸಮಿತಿಯ ಅಧ್ಯಕ್ಷರಾದ ವಿಠ್ಠಪ್ಪ ಗೋರಂಟ್ಲಿ ಅವರು ಮಾತನಾಡಿ ಜಿಲ್ಲಾ ಆಡಳಿತ ಕೋಕೋ-ಕೊಲಾ ಕಾರ್ಮಿಕರ ಬೇಡಿಕೆಗಳನ್ನು ಆದಷ್ಟು ಶಿಘ್ರದಲ್ಲಿ ಪರಿಹರಿಸಲು ಮುಂದಾಗಬೇಕೆಂದು ಹೇಳಿದರು. ಸಂಘದ ಕಾನೂನು ಸಲಹೆಗಾರರಾದ ಮಂಜುನಾಥ ಚಕ್ರಸಾಲಿ ಅವರು ಮಾತನಾಡಿ ಆದಷ್ಟು ಬೇಗ ಈ ಕಾರ್ಮಿಕರ ಬೇಡಿಕೆಗಳನ್ನು ಸಂಭಂದಪಟ್ಟ ಅಧಿಕಾರಿಗಳು ಬಗೆಹರಿಸಬೇಕು. ಇಲ್ಲದಿದ್ದರೆ ಕಾನೂನಾತ್ಮಕವಾಗಿ ಹೋರಾಟ ಮಾಡೋಣ ಎಂದು ಕಾರ್ಮಿಕರಲ್ಲಿ ದೈರ್ಯ ತುಂಬಿದರು. ಟಿ.ಯೂ.ಸಿ.ಐ ರಾಜಾಧ್ಯಕ್ಷರಾದ ಡಿ.ಹೆಚ್.ಪೂಜಾರ ಮಾತನಾಡಿ ಕಾರ್ಮಿಕ ಅಧಿಕಾರಿಗಳ ಸಲಹೆಯನ್ನು ಒಪ್ಪದ ಕೋಕೋ-ಕೊಲಾ ಆಡಳಿತ ಮಂಡಳಿಯ ವಿರುದ್ದ ಕಠಿಣ ಕ್ರಮ ಜರುಗಿಸಬೇಕೆಂದು ಹೇಳಿದರು. ಈ ಧರಣಿ ಸತ್ಯಾಗ್ರಹಕ್ಕೆ ಬೆಂಬಲಿಸಿ ಎ.ಐ.ಸಿ.ಸಿ.ಟಿ.ಯೂ ರಾಜ್ಯಾಧ್ಯಕ್ಷರಾದ ಜೆ.ಭಾರದ್ವಜ, ಟಿ.ಯೂ.ಸಿ.ಐ ಜಿಲ್ಲಾಧ್ಯಕ್ಷರಾದ ಬಸವರಾಜ ನರೆಗಲ್ಲ, ಆರ್.ವಾಯ್. ಎಫ್.ಐ ರಾಜ್ಯ ಸಮಿತಿಯ ಸದಸ್ಯನಾದ ನಾಗರಾಜ ಪೂಜಾರ, ಸಂಘದ ಪದಾಧಿಕಾರಿಗಳಾದ ಎನ್.ರಾಘವೇಂದ್ರ ಇನ್ನೂ ಅನೇಕ ಕಾರ್ಮಿಕರು ಉಪಸ್ಥಿತರಿದ್ದರು.
0 comments:
Post a Comment