PLEASE LOGIN TO KANNADANET.COM FOR REGULAR NEWS-UPDATES


ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಕನಸು ಈಗ ಈಡೇರುವ ಹಂತ ತಲುಪುತ್ತಿದೆ. ರಾಜ್ಯ ಸಕಾ೯ರ ಈಗಾಗಲೇ ಸುವಣ೯ ಗ್ರಾಮ ಯೋಜನೆ ಕೈಗೆತ್ತಿಕೊಂಡು ರಾಜ್ಯಾದ್ಯಂತ ಒಂದು ಸಾವಿರ ಗ್ರಾಮ ಆಯ್ಕೆ ಮಾಡಿದೆ. ಅದರಲ್ಲಿ ಕೊಪ್ಪಳ ತಾಲೂಕಿನ ಮುದ್ದಾಬಳ್ಳಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ ರು, ೫೨.೭೨ ಲಕ್ಷ ಅನುದಾನ ಗ್ರಾಮ ಅಭಿವ?ದ್ದಿಗಾಗಿ ನೀಡಲಾಗುತ್ತಿದ್ದು, ಈ ಗ್ರಾಮಗಳ ಅಭಿವೃದ್ದಿಯಿಂದ ದೇಶದ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಶಾಸಕ ಸಂಗಣ್ಣ ಕರಡಿ ಅಭಿಪ್ರಾಯ ಪಟ್ಟರು.
ಕೊಪ್ಪಳ ತಾಲೂಕಿನ ಮುದ್ದಾಬಳ್ಳಿ ಗ್ರಾಮದಲ್ಲಿ  ಸೋಮವಾರ ನಡೆದ ಸುವಣ೯ ಗ್ರಾಮ ಯೋಜನೆಯಡಿ ಐದನೇ ಹಂತದ ರು, ೫೨.೭೨ ಲಕ್ಷ ಅನುದಾನದ ಕಾಮಗಾರಿಗೆ ಶುಂಕು ಸ್ಥಾಪನೆ ನೆರವೇರಿಸದ ಬಳಿಕ ಅವರು ಮಾತನಾಡಿದರು.
ಗ್ರಾಮೀಣ ಜನರಿಗೆ  ಬಸವ, ಆಶ್ರಯ ಸೇರಿದಂತೆ ಇತರ ಯೋಜನೆಗಳು  ಸಮಪ೯ಕವಾಗಿ ಬಳಕೆ ಮಾಡಿಕೊಂಡಾಗ ಮಾತ್ರ ಸಕಾ೯ರದ ಯೋಜನೆಗಳು ಸಫಲತೆ ಕಾಣಲು ಸಾಧ್ಯ. ಆಗ ಮಾತ್ರ ಗ್ರಾಮಗಳು ಅಭಿವ?ದ್ದಿ ಹೊಂದಲ ಸಾಧ್ಯವಾಗುತ್ತದೆ ಎಂದರು.
ಸುವ೯ಣ ಗ್ರಾಮದ ಕನಸು ನಸಸು ಃ ರಾಜ್ಯ ಸಕಾ೯ರ ಸುವಣ೯ ಗ್ರಾಮ ಆಯ್ಕೆ ಮಾಡಿಕೊಂಡು ಮಹತ್ತರ ಯೋಜನೆಯನ್ನು ಜಾರಿಗೆ ತಂದಿದ್ದು, ಈ  ಯೋಜನೆಯಲ್ಲಿ ಸಫಲತೆ ಕಾಣುತ್ತಿದ್ದೇವೆ. ಹಾಗಾಗಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಕಂಡ ಗ್ರಾಮ ಸ್ವರಾಜ್ಯದ ಕನಸು ಈ ಸುವಣ೯ ಗ್ರಾಮ ಯೋಜನೆಯಿಂದ ಬಹುತೇಕ ನನಸು ಕಾಣುವ ಹಂತ ತಲುಪುತ್ತಿದೆ ಎನ್ನುವ ಭರವಸೆಯನ್ನು ವ್ಯಕ್ತಪಡಿಸಿದರು.
ಬಹದ್ದೂರ ಬಂಡಿ ಮತ್ತು ಬೆಟಗೇರಿ ಏತ ನೀರಾವರಿ ಯೋಜನೆಯನ್ನು ಜಾರಿ ತರುವ ನಿಟ್ಟಿನಲ್ಲಿ ಈಗಾಗಲೇ ವಿದಾನ ಪರಿಷತ್? ಸದಸ್ಯ ಹಾಲಪ್ಪ ಆಚಾರ್? ಹಾಗೂ ತಾವು  ಸತತ ಪ್ರಯತ್ನ ಮಾಡುತ್ತಿದ್ದೇವೆ. ಈಗಾಗಲೇ ಜಲ ಸಂಪನ್ಮೂಲ ಸಚಿವ ಬೊಮ್ಮಾಯಿ ಅವರಿಗೆ ಮನವಿ ಮಾಡಲಾಗಿದ್ದು, ಮುಂಬರುವ ಜ. ೩ ರಂದು ತೆರಳಿ ಬಹದ್ದೂರಬಂಡಿ ಏತ ನೀರಾವರಿ ಯೋಜನೆ ಜಾರಿಗೆ ಒತ್ತಾಯ ಮಾಡಲಾಗವುದು ಎಂದು ಭರವಸೆ ನೀಡಿದರು.
ಜೆಸ್ಕಾಂಗೆ ಸೂಚನೆ ಃ ಗ್ರಾಮದಲ್ಲಿ  ವಿದ್ಯುತ್? ಕಂಬಗಳು ಬಹುತೇಕ ಶೀಥಲತೆ ಹಾಗೂ ವಿದ್ಯುತ್? ವೈಯರ್?ಗಳ ಬದಲಾವಣೆಗೆ ತಾವು ಮನವಿ ಮಾಡಿದ್ದು, ನಿರಂತರ ಜ್ಯೋತಿ ಯೋಜನೆ ಸ್ವಲ್ಪ ದಿನದಲ್ಲಿಯೇ ಬರಲಿದೆ. ಅಲ್ಲದೇ, ಶಿಥಿಲಗೊಂಡ ವಿದ್ಯುತ್? ಕಂಬ ಹಾಗೂ ವೈಯರ್?ಗಳ ಬದಲಾವಣೆ ಕುರಿತಂತೆ ಕೆಪಿಟಿಸಿಎಲ್? ಇಲಾಖೆಗೆ ಸೂಚನೆ ನೀಡಿ ಬದಲಾವಣೆ ಮಾಡಲು ಸೂಚನೆ ನೀಡಲಾಗುವುದು ಎಂದು ಹೇಳಿದರು.
ಶುದ್ದ ಕುಡಿಯುವ ನೀರು ಘಟಕ ಪ್ರಾರಂಭ ಃ  ಗ್ರಾಮದಲ್ಲಿ  ಪ್ಲೋರೈಡ್ ನೀರು ಕುಡಿಯುವ ಬದಲಾಗಿ ಸುಮಾರು ರು, ೫ ಲಕ್ಷ ವೆಚ್ಚದಲ್ಲಿ ಶುದ್ದ ಕುಡಿಯುವ ನೀರು ಘಟಕ ಸ್ಥಾಪನೆ ಮಾಡಲು ಸ್ಥಳೀಯವಾಗಿ ಗ್ರಾಮ ಪಂಚಾಯಿತಿ ಸ್ಥಳವಕಾಶ ನೀಡಿದರೆ ಶುದ್ದ ಕುಡಿಯುವ ನೀರು ಘಟಕ ಸ್ಥಾಪನೆ ಮಾಡಲು ಮುಂದಾಗುವುದು ಈ ಕುರಿತಂತೆ ಗ್ರಾಪಂ ಸದಸ್ಯರು ಚಚೆ೯ ನಡೆಸಿ ವಿಷಯ ತಿಳಿಸಲಿ ಎಂದರು.
ಜಿಪಂ ಸದಸ್ಯೆ ಸೀತಾ ಗೂಳಪ್ಪ ಹಲಗೇರಿ ಮಾತನಾಡಿ, ಮುದ್ದಾಬಳ್ಳಿ ಗ್ರಾಮಕ್ಕೆ ಈಗಾಗಲೇ ೨ ಅಂಗನವಾಡಿ ಕೇಂದ್ರಗಳು ಬಂದಿದ್ದು, ಅವುಗಳಿಗೆ ಸೂಕ್ತ ಸ್ಥಳವಕಾಶ ಇಲ್ಲದಂತಾಗಿ ಹಾಗೇ ನೆನೆಗುದಿಗೆ ಬಿದ್ದಿವೆ. ಸ್ಥಳೀಯವಾಗಿ ಜಾಗ ನೀಡಿದರೆ ಬಾಲ ಮಕ್ಕಳಿಗೆ ಕೇಂದ್ರಗಳ ದೊರೆಯುತ್ತವೆ. ಎಂದರು.
ರಸ್ತೆ , ಚರಂಡಿ ಹಾಗೂ ಕಸ ವಿಲೇವಾರಿಗೆ ಅನುದಾನ ಬಂದಿದ್ದು, ಎಲ್ಲರು ಒಗ್ಗಟ್ಟಾಗಿ ಕಾಮಗಾರಿ ಪೂಣ೯ಗೊಳಿಸೋಣ ಎಂದರು.ಗ್ರಾಮ ಪಂಚಾಯತಿ ಉಪಾಧ್ಯಕ್ಷ ಗೋವಿಂದರಡ್ಡಿ ಮಾದಿನೂರು ಅವರು ಪ್ರಾಸ್ತಾವಿಕ ಮಾತನಾಡಿದರು ಬಳಿಕ ಶಾಸಕ ಸಂಗಣ್ಣ ಕರಡಿ ಅವರು ಅಹ೯ ಫಲಾನುಭವಿಗಳಿಗೆ ನೂತನ ಪಡಿತರ ಕಾಡ್?೯ ವಿತರಣೆ ಮಾಡಿದರು. ಕಾಯ೯ಕ್ರಮದ  ಅಧ್ಯಕ್ಷೆತೆಯನ್ನು  ಗ್ರಾಮ ಪಂಚಾಯತಿ ಅಧ್ಯಕ್ಷೆ  ಸಿದ್ದಮ್ಮ ಪೂಜಾರ್?ವಹಿಸಿದ್ದರು. ಕಾಯ೯ಕ್ರಮದಲ್ಲಿ ಗ್ರಾಪಂ ಸದಸ್ಯರಾದ ಸಣ್ಣ ಹನುಮಪ್ಪ ಹುಳ್ಳಿ,  ಪ್ರಕಾಶ ಹಾಲವತಿ೯, ಸಿದ್ದು ಕಲಾಲ್?, ಹಾಗೂ ಶರಣಪ್ಪ , ಗ್ರಾಪಂ ಕಾಯ೯ದಶಿ೯ ವೆಂಕಟೇಶ, ಗ್ರಾಮದ ಹಿರಿಯರಾದ ಶರಣಗೌಡ ಪಾಟೀಲ್?, ನಂದಯ್ಯ ಸಸಿ, ಪಂಪಣ್ಣ ಹಳ್ಳಿಗುಡಿ, ಈಶಪ್ಪ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯಿತಿ ಲೆಕ್ಕಾಧಿಕಾರಿ ದೊಡ್ಡನಗೌಡ ಪಾಟೀಲ್ ಕಾಯ೯ಕ್ರಮ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.


Advertisement

0 comments:

Post a Comment

 
Top