PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳದ ಉಸ್ತುವಾರಿ ಸಚಿವರಾದ ಮುರುಗೇಶ ನಿರಾಣಿಯವರು ಕೊಪ್ಪಳ ಜಿಲ್ಲೆಯ ಕೃಷಿ ಕಾರ್ಮಿಕರ ಬಗ್ಗೆ ಮಾತಾನಾಡುತ್ತಾ ಗೂಳೆ ಹೋಗುವುದು ಕೊಪ್ಪಳ ಜನತೆಯ ಚಟ ಎಂದು ಕುಲ್ಲಕ ಹೇಳಿಕೆಯನ್ನು ನೀಡಿ  ಜಿಲ್ಲೆಯ ಜನತೆಯನ್ನು ಅವಮಾನಿಸಿದ್ದಾರೆ. ಇಂತಹ ಅವಹೇಳನಕಾರಿಯಾದ ಹೇಳಿಕೆಯನ್ನು ಹೇಳಿದಂತಹ ನಿರಾಣಿಯವರು ಸಾರ್ವಜನಿಕವಾಗಿ ಕ್ಷೇಮಾಪಣೆ ಕೇಳಿ ತಮ್ಮ ಹೇಳಿಕೆಯನ್ನು ಹಿಂಬಪಡೆಯಬೇಕು. ಒಂದು ವೇಳೆ ಕ್ಷೇಮಾಪಣೆ ಕೇಳದಿದ್ದರೇ ಜಿಲ್ಲಾ ಕಾಂಗ್ರೇಸ್ ವತಿಯಿಂದ ಸಚಿವರ ವಿರುದ್ದ ತೀವ್ರ ಪ್ರತಿಭಟನೆ ಮಾಡಲಾಗುವುದು. ಬೇಜವಾಬ್ದರಿಯ ಸಚಿವರು ರಾಜೀನಾಮೆ ಕೊಟ್ಟು ಜಿಲ್ಲೆಯಿಂದ ತೋಲಗಲಿ, ಬಿಜೆಪಿ ಸರಕಾರದ ಆಡಳಿತದ ಬಗ್ಗೆ ಹಾಗೂ ಸಚಿವರ ವ್ಯಕ್ತಿತ್ವದ ಬಗ್ಗೆ ಇಡೀ ನಾಡಿನ ಜನತೆಗೆ ಮನವರಿಕೆಯಾಗಿದೆ. ನಮ್ಮ ಜಿಲ್ಲೆಯ ಜನರ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ.
      ಗುರುಬಸವರಾಜ ಅಳವಂಡಿ ವಕೀಲರು, ವೈಜನಾಥ ದಿವಟರು, ನಾಗರಾಜ ಬಳ್ಳಾರಿ, ಮುನೀರ ಸಿದ್ದೀಕಿ, ಶಿವಾನಂದ ಹೊದ್ಲೂರು, ಮೈಬುಬು ಅರಗಂಜಿ, ಧಾರವಾಡ ರಫೀ, ಅರುಣ ಶೆಟ್ಟಿ, ಅಶೋಕ ಕಂಬಳಿ, ಉಪಸ್ಥಿತರಿದ್ದರೆಂದು ಪಕ್ಷದ ವಕ್ತಾರರಾದ ಅಕ್ಬರ ಪಾಷ್ ಪಲ್ಟನ್ ತಿಳಿಸಿರುತ್ತಾರೆ.

Advertisement

0 comments:

Post a Comment

 
Top