PLEASE LOGIN TO KANNADANET.COM FOR REGULAR NEWS-UPDATES


ನಗರದ ಗವಿಮಠ ರಸೆಯಲ್ಲಿರುವ ಮಾಸ್ತಿ ಪಬ್ಲಿಕ್ ಸ್ಕೂಲ್‌ನಲ್ಲಿ ಪ್ರಥಮ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಜೆ.ಡಿ.ಎಸ್.ಮುಖಂಡರಾದ ಪ್ರದೀಪಗೌಡ ಮಾಲಿಪಾಟೀಲ್‌ರವರು ಉಧ್ಘಾಟಿಸಿದರು. ಅಧ್ಯಕ್ಷತೆಯನ್ನು ಹುಲಗಪ್ಪ ಕಟ್ಟಿಮನಿ. ಮುಖ್ಯಅತಿಥಿಗಳಾಗಿ ಕೆ.ಎಮ್.ಸೈಯದ್,ರಮೇಶ್ ವಣಬಳ್ಳಾರಿ ಪಂಪನಗೌಡ,ಡಾ.ಶ್ರೀನಿವಾಸ ಹ್ಯಾಟಿ,ಮಂಜುನಾಥ ಬಿ. ನಿಂಗಪ್ಪ ಭೋವಿ, ಕೊಟ್ರೇಶ್ ಹೈದ್ರಿ,ಮಂಜುನಾಥ ತಾವರಗೇರ,ಸಂತೋಷ್ ದೇಶಪಾಂಡೆ,ಲಕ್ಷ್ಮಣ ಪಲ್ಲೇದ್,ವಿಜಯಕುಮಾರ ಕರಡಿ ಉಪಸ್ಥಿತರಿದ್ದರು. 
                      ಇದೆ ಸಂಧರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ಶಾಲಾ ವಿಧ್ಯಾರ್ಥಿಗಳ ಪಾಲಕರಿಗೆ ಸನ್ಮಾನಿಸಲಾಯಿತು. ವಿನಿತಾ ಬೇಟಗೆರಿ ನಿರೂಪಿಸಿದರು. ಅನ್ನಪೂರ್ಣ ಹಿರೇಮಠ ಮತ್ತು ನಾಗರತ್ನ ಅಕ್ಕಸಾಲಿ ಪ್ರಾರ್ಥಿಸಿದರು. ಗುರುಪ್ರಸಾದ ಕೊಪ್ಪಳ್‌ಕರ್ ಸ್ವಾಗತಿಸಿದರು.ಅಪ್ಪಣ್ಣ ಬೋಂದಾಡೆ ಪುಷ್ಪಾರ್ಪಣೆ ನೆರವೇರಿಸಿದರು.ಶಾಲಾ ಮುಖ್ಯೋಪಾಧ್ಯಾಯರಾದ ಪರಶುರಾಮ ಮ್ಯಾಳಿ ಶಾಲಾ ವರದಿ ವಾಚನ ಮಾಡಿದರು.ಹೀನಾ ಕೌಸರ್ ಕೊಪ್ಪಳ ವಂದಿಸಿದರು. 
                      ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶ್ವೇತಾ ಸಿಂಗ್ ಹಾಗೂ ದೇವೇಂದ್ರಪ್ಪ ಹಿಟ್ನಾಳ ನೇರವೇರಿಸಿದರು.

Advertisement

0 comments:

Post a Comment

 
Top