PLEASE LOGIN TO KANNADANET.COM FOR REGULAR NEWS-UPDATES


ಡಾ. ವಿಷ್ಣು ಮಾನವೀಯತೆಯ ಸಾಕಾರಮೂರ್ತಿ  ಎಸ್. ವಿ. ಪಾಟೀಲ ಬಣ್ಣನೆ
ಕೊಪ್ಪಳ, ಡಿ.೩೦. ಖ್ಯಾತನಟ ಡಾ. ವಿಷ್ಣುವರ್ಧನ್ ಅವರು ಮಾನವೀಯತೆಯನ್ನು ಸಾಕಾರಮೂರ್ತಿಯಾಗಿ ಎಲ್ಲರಪ್ರೀತಿಗೆ ಪಾತ್ರರಾಗಿದ್ದರು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟಕಕಾರ ಎಸ್. ವಿ. ಪಾಟೀಲ ಗುಂಡೂರು ಬಣ್ಣಿಸಿದರು.
 ಅವರು ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ  ವಿಷ್ಣು ಅವರ ಅಭಿಮಾನಿ ದಿ.ರಮೇಶ ಕುಡತಿನಿ ಅವರ ವೇದಿಕೆಯಲ್ಲಿ ವಿಭಾ ಚಾರಿಟೇಬಲ್ ಟ್ರಸ್ಟ್, ವಾರ್ತಾ ಇಲಾಖೆ, ಡಾ. ವಿಷ್ಣುವರ್ಧನ ಪ್ರತಿಷ್ಠಾನ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಕೊಪ್ಪಳ ಜಿಲ್ಲಾ ಬೆಳ್ಳಿಮಂಡಲ ಶಾಖೆ ಸಹಯೋಗದೊಂದಿಗೆ ಏರ್ಪಡಿಸಿದ್ದ ಡಾ. ವಿಷ್ಣುವರ್ಧನ ೨ ನೇ ಪುಣ್ಯ ಸ್ಮರಣೆ ನಿಮಿತ್ಯ ಸಿಂಹಾವಲೋಕನ ಚಿತ್ರೋತ್ಸವ ಉದ್ಘಾಟಿಸಿ ಮಾತನಾಡಿದರು. ವಿಷ್ಣು ಅವರು ಎತ್ತರಕ್ಕೆ ಏರಿದ್ದರೂ ಅವರಲ್ಲಿ ಅಹಂಕಾರ ಮತ್ತು ಡಂಬಾಚಾರದಿಂದ ಉಳಿದು ಸರಳತೆಯನ್ನು  ಮೈಗೂಡಿಸಿಕೊಂಡು ನಾಡಿನ ಚಿತ್ರರಂಗದ ಶ್ರೀಮಂತಿಕೆಗೆ ಜೀವಕಳೆನೀಡಿದ್ದರು. ಇವರ ಆದರ್ಶ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಆಶಿಸಿದರು. 
ಮುಖ್ಯ ಅತಿಥಿಯಾಗಿದ್ದ ಚಲನ ಚಿತ್ರ ಸಾಹಿತಿ ಡಾ. ಮಹಾಂತೇಶ ಮಲ್ಲನಗೌಡರ ಮಾತನಾಡಿ,ಯುವಕರು ಉತ್ತಮಚಲನಚಿತ್ರಗಳಭಿರುಚಿಯನ್ನು ಬೆಳೆಸಿಕೊಳ್ಳುವ ಮೂಲಕ ಕನ್ನಡ ಪರಂಪರೆ ಹೆಚ್ಚಿಸಲು ಛಲಗಾರರಾಗಬೇಕು,ಕೊಪ್ಪಳ ಜಿಲ್ಲೆಯ ಅನೇಕ ಯುವಕರು ಈರಂಗದಲ್ಲಿ ತಮ್ಮನ್ನು ಕ್ರಿಯಾಶೀಲರಾಗಿ ತೊಡಗಿಸಿಕೊಳ್ಳುವ ಮೂಲಕ ಚಿತ್ರರಂಗಕ್ಕೆಪ್ರವೇಶಿಸಿದ್ದು  ಆರೋಗ್ಯಕರಬೆಳವಣಿಗೆ ಎಂದರು.
ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಮಾಜಿ ಅಧ್ಯಕ್ಷ, ಹೋರಾಟಗಾರ ಕೆ.ವಾಸುದೇವ ಅಧ್ಯಕ್ಷತೆವಹಿಸಿ ಮಾತನಾಡಿ, ಡಾ. ವಿಷ್ಣು ಅವರು ಕನ್ನಡ ಚಳವಳಿ ಸಂದರ್ಭದಲ್ಲಿ ಹೋರಾಟದದಿನಗಳಲ್ಲಿ ಕೊಪ್ಪಳದ  ನಂಟಿನ ಕುರಿತು ಸ್ಮರಿಸಿದರಲ್ಲದೇ  ತಾವು ಸಾಹಸ ಸಿಂಹದೊಂದಿಗೆ ತಾಸುಗಟ್ಟಲೆ ಸಮಯ ಕಳೆದ ನೆನಪುಗಳನ್ನು ಮೆಲಕುಹಾಕಿದರು. ಮುಖ್ಯ ಅತಿಥಿಗಳಾಗಿ ಪತ್ರಕರ್ತ ಎಸ್. ಎ. ಗಫಾರ್,   ಬೆಳ್ಳಿ ಸಾಕ್ಷಿ ಸಂಚಾಲಕ ರಂಗನಾಥ ಕೋಳೂರು, ವೀರ ಕನ್ನಡಿಗ ಯುವಕ ಸಂಘದ ಅಧ್ಯಕ್ಷ ಶಿವಾನಂದ ಹೊದ್ಲೂರು, ಚಲನ ಚಿತ್ರ ನಟ ಬಸವರಾಜ ಕೊಪ್ಪಳ ಮಾತನಾಡಿದರು. ಕೊಪ್ಪಳ ನಗರಠಾಣೆ ಎ.ಎಸ್.ಐ ಬಸವರಾಜ , ವಿಕಾಸ ಉಳ್ಳಾಗಡ್ಡಿ ವೇದಿಕೆಯಲ್ಲಿದ್ದರು.
ಚಲನಚಿತ್ರನಟಿ ಕು. ನಿಧಿ ಚಕ್ರವರ್ತಿ ಚಿತ್ರೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿ, ಉತ್ತರ ಕರ್ನಾಟಕವೇ ಚಿತ್ರರಂಗವನ್ನು ಬೆಳೆಸಿದ್ದು ನನ್ನ ತವರು ನಾಡುಕೊಪ್ಪಳವನ್ನು ಎಂದಿಗೂ ಮರೆಯಲಾರೆ, ಇಲ್ಲಿಯ ಜನರ ಪ್ರೀತಿ ಎಲ್ಲೂ ಸಿಗಲಾರದ್ದು ಎಂದ ಅವರು, ಉತ್ತಮ ಚಿತ್ರಗಳು ಬಂದಲ್ಲಿ ಪಾತ್ರ ಮಾಡುವುದಾಗಿ ತಿಳಿಸಿದ ಅವರು ಡಾ.ವಿಷ್ಣು ಸರ್ ಅವರೊಂದಿಗೆ ನಟಿಸುವ ಆಸೆ ಈಡೇರಲಿಲ್ಲ ಎಂದು ವಿಷಾದಿಸಿದರಲ್ಲದೇ ಕೆಲ ಸಮಯ ಭಾವುಕರಾದರು. ಕಲಾವಿದರಾದ ಗಣೇಶ ಕಿನ್ನಾಳ, ಶರಣಗೌಡ ಇತರರು ಗಾಯನ ಹಾಗೂ ನಾಟಕದ ಏಕಪಾತ್ರ ಅಭಿನಯ ಪ್ರದರ್ಶಿಸಿದರು. ಪ್ರಾರಂಭದಲ್ಲಿ ದಿ. ವಿಷ್ಣುವರ್ಧನ್ ಹಾಗೂ ದಿ. ರಮೇಶ ಕುಡತಿನಿ ಅವರಿಗೆ ಎರಡು ನಿಮಿಷ ಮೌನಾಚರಣೆ ನಡೆಸಲಾಯಿತು.ಇದೇ ಸಂದರ್ಭದಲ್ಲಿ  ದಿ. ವಿಷ್ಣು ಮತ್ತು ನಟಿ ಸುಹಾಸಿನಿ ಮತ್ತು ಶ್ರೀವಿದ್ಯಾ ನಟಿಸಿರುವ ಪ್ರದರ್ಶನಗೊಂಡ ಸುಪ್ರಭಾತ ಚಲನಚಿತ್ರ  ವೀಕ್ಷಿಸಿ ಸಂಭ್ರಮಿಸಿದರು. ಅಕಾಡೆಮಿಯ ಬೆಳ್ಳಿಮಂಡಲದ ಜಿಲ್ಲಾ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಪ್ರಾಸ್ತಾವಿಕವಾಗಿ ಮಾತನಾಡಿದರು, ವಿಠ್ಠಲ ಮಾಲಿಪಾಟೀಲ ರುದ್ರಪ್ಪ ಭಂಡಾರಿ ಸ್ವಾಗತಿಸಿದರು. ದುರುಗಪ್ಪ ಹಿರೇಮನಿ ಪ್ರಾರ್ಥಿಸಿದರು, ಜಿಲ್ಲಾ ಸಹ ಸಂಚಾಲಕ ವಿಠ್ಠಲ ಮಾಲಿಪಾಟೀಲ ನಿರೂಪಿಸಿದರು, ಜೋಡಪ್ಪ ಯತ್ನಟ್ಟಿ ವಂದಿಸಿದರು.



Advertisement

0 comments:

Post a Comment

 
Top