PLEASE LOGIN TO KANNADANET.COM FOR REGULAR NEWS-UPDATES


ದೇವಾಲಯಗಳ ಚಕ್ರವರ್ತಿಗೆ ೯೦೦ವರ್ಷ : 

ಕೊಪ್ಪಳ,ಡಿ. ೨೦ : ಡಿ. ೨೧, ೨೨ ಹಾಗೂ ೨೫ ರಂದು ಮೂರು ದಿನಗಳ ಕಾಲ ದೇವಾಲಯಗಳ ಚಕ್ರವರ್ತಿ ಇಟಗಿ ಮಹಾದೇವ ದೇವಾಲಯಕ್ಕೆ ಇಲ್ಲಿಗೆ ಸರಿಯಾಗಿ ೯೦೦ ವರ್ಷ ಗತಿಸಿದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾ ನಾಗರೀಕರ ವೇದಿಕೆಯಿಂದ ಈ ವರ್ಷ ಅದ್ದೂರಿಯಾಗಿ ಇಟಗಿ ಉತ್ಸವವನ್ನು ಆಚರಿಸಲು ನಿರ್ಧರಿಸಿದೆ.
ಉತ್ಸವದ ಅಂಗವಾಗಿ ಮಹದೇವ ದೇವಸ್ಥಾನದ ಆವರಣದಲ್ಲಿ ಡಿ. ೨೧ ರಂದು ಮೃತ್ಯುಂಜಯ ಹೋಮ, ಸಂಜೆ ೪ ಗಂಟೆಗೆ ಮಕ್ಕಳಿಗಾಗಿ ಸೈಕಲ್ ಸ್ಪರ್ಧೆ ಹಾಗೂ ಸಂಜೆ ೬ ಗಂಟೆಗೆ ಚಲನ ಚಿತ್ರೋತ್ಸವದಲ್ಲಿ ಭಕತಿಪ್ರಧಾನ ಮತ್ತು ಪೌರಾಣಿಕ ಚಲನಚಿತ್ರ ಪ್ರದರ್ಶನ ಕಾರ್ಯಕ್ರಮ ಜರುಗಲಿವೆ.
ಡಿ. ೨೨ ರಂದು ೯೦೦ ರ್ವಗಳ ವರ್ಷಾಚರಣೆ ಮತ್ತು ಇಟಗಿ ಉತ್ಸವದ ಉದ್ಘಾಟನೆ ನಡೆಯಲಿದ್ದು, ಸಾನಿಧ್ಯವನ್ನು ಯಲಬುರ್ಗಾ ಸಂಸ್ಥಾನ ಮಠದ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯರು ವಹಿಸುವರು. ಮಾಜಿ ಸಚಿವ ಬಸವರಾಜ ರಾಯರಡ್ಡಿ ೯೦೦ ವರ್ಷಗಳ ವರ್ಷಾಚರಣೆಯನ್ನು ಪ್ರಾರಂಭಿಸುವರು. ಉತ್ಸವದ ಉದ್ಘಾಟನೆಯನ್ನು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು ನೆರವೇರಿಸುವರು. ಜೆಡಿಎಸ್ ಮುಖಂಡರಾದ ಸೂರ್ಯನಾರಾಯಣ ರೆಡ್ಡಿ ಇಟಗಿ ಜಾನಪದ ಜಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸುವರು. ದೇವಾಲಯಗಳ ಚಕ್ರವರ್ತಿ ಪುಸ್ತಕವನ್ನು ಕೊಪ್ಪಳ ಜಿಲ್ಲಾ ಪಂಚಾಯತ ಅಧ್ಯಕ್ಷೆ ಜ್ಯೋತಿ ಬಿಲ್ಗಾರ ಬಿಡುಗಡೆಗೊಳಿಸುವರು. ದೇವಾಲಯಗಳ ಚಕ್ರವರ್ತಿಗೆ ೯೦೦ ವರ್ಷಗಳು ಪುಸ್ತಕವನ್ನು ಅರ್ಕ್ಯಾಲಜಿಕಲ್ ಸರ್ವೆ ಆಫ್ ಇಂಡಿಯಾ ರೀಜಿನಲ್ ಡೈರೆಕ್ಟರ್ ಡಾ. ಎಸ್. ವಿ. ವೆಂಕಟೇಶಯ್ಯ  ಬಿಡುಗಡೆಗೊಳಿಸುವರು. ಇಟಗಿ ಉತ್ಸವದ ವಿಶೇಷಾಂಕವನ್ನು ವಾರ್ತಾ ಮತ್ತು ಪ್ರಚಾರ ಇಲಾಖೆ ನಿರ್ದೆಶಕರಾದ ಮುದ್ದುಮೋಹನ್ ಬಿಡುಗಡೆಗೊಳಿಸುವರು. ಸಾಹಿತಿ ಡಾ. ಕೆ. ಬಿ. ಬ್ಯಾಳಿ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವರು. ಕೊಪ್ಪಳ ಜಿಲ್ಲಾ ನಾಗರೀಕರ ವೇದಿಕೆ ಜಿಲ್ಲಾಧ್ಯಕ್ಷರಾದ ಮಹೇಶಬಾಬು ಸುರ್ವೆ ಅಧ್ಯಕ್ಷತೆ ವಹಿಸುವರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಪ್ರಕಾಶ್, ಕೊಪ್ಪಳ ಜಿ.ಪಂ. ಉಪಾಧ್ಯಕ್ಷೆ ಡಾ. ಸೀತಾ ಹಲಿಗೇರಿ, ಡಿಸಿಸಿ ಅಧ್ಯಕ್ಷ, ಮಾಜಿ ಶಾಸಕ ಬಸವರಾಜ ಹಿಟ್ನಾಳ, ವಿಧಾನ ಪರಿಷತ್ ಮಾಜಿ ಸದಸ್ಯ ಎಚ್. ಆರ್. ಶ್ರೀನಾಥ, ಕಿರ್ಲೊಸ್ಕರ್ ಫೆರಸ್ ಇಂಡಸ್ಟ್ರೀಜ್ ವ್ಯವಸ್ಥಾಪಕ ನಿರ್ದೇಶಕ ಆರ್. ವಿ. ಗುಮಾಸ್ತೆ, ಇಟಗಿ ಗ್ರಾ.ಪಂ. ಅಧ್ಯಕ್ಷ ಗವಿಸಿದ್ಧಪ್ಪ ಗುಳಗಣ್ಣವರ, ಜಿ.ಪಂ. ಸದಸ್ಯ ಈರಪ್ಪ ಕುಡಗುಂಟಿ, ಬಿಜೆಪಿ ಜಿಲ್ಲಾಧ್ಯಕ್ಷ ಗಿರಿಗೌಡ, ಪತ್ರಕರ್ತರ ವೇದಿಕೆ ಉಪಾಧ್ಯಕ್ಷ ವಿ.ಎಸ್. ಕೃಷ್ಣ, ಕಸಾಪ ಜಿಲ್ಲಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ, ದಲಿತ ಪತ್ರಕರ್ತರ ಸಂಘದ ಅಧ್ಯಕ್ಷ ವೈ. ಮಂಜುನಾಥ, ಅನ್ಮೋಲ್ ಟೈಮ್ಸ್ ಸಂಪಾದಕ ಎ.ಎ. ವಲಿಸಾಬ, ಕರ್ನಾಟಕ ಜಾಗೃತಿ ವೇದಿಕೆ ಅಧ್ಯಕ್ಷೆ ಪ್ರಭಾವತಿ ರಾಮಚಂದ್ರಯ್ಯ, ಸರಕಾರಿ ಅಭಿಯೋಜಕ ಬಿ.ಎಸ್. ಪಾಟೀಲ್, ಜಿ.ಪಂ. ಈ.ಓ. ಎಚ್. ಕಾಕನೂರ, ಸಮಾಜ ಸೇವಕ ಜಿ.ಟಿ. ಪಂಪಾಪತಿ, ಜೆಡಿಎಸ್ ಮುಖಂಡ ಪ್ರದೀಪಗೌಡ ಮಾಲಿಪಾಟೀಲ್ ವಿಶೇಷ ಆಹ್ವಾನಿತರಾಗಿರುವರು.
ಮುಖ್ಯ ಅತಿಥಿಗಳಾಗಿ ಜಿ.ಪಂ ಸದಸ್ಯ ಸಂಗಯ್ಯ ಹಿರೇಮಠ, ತಾ.ಪಂ ಸದಸ್ಯ ರಾಜಶೇಖರ ಹೊಂಬಾಳ, ಜೆಡಿಎಸ್ ಮುಖಂಡ ಕೆ.ಎಂ. ಸಯ್ಯದ್, ಜಿ.ಪಂ ಸದಸ್ಯ ಯಂಕಣ್ಣ ಯರಾಶಿ, ನಿರ್ಮಿತಿ ಕೇಂದ್ರ ವ್ಯವಸ್ಥಾಪಕ ಸಿ.ವಿ.ಚಂದ್ರಶೇಖರ್, ಡಿವೈಎಸ್ಪಿ ವಿಜಯ ಡಂಬಳ್, ಆಹಾರ ನಾಗರೀಕ ಇಲಾಖೆ ಉಪನಿರ್ದೇಶಕ ಅಶೋಕ ಕಲಗಟಕಿ, ತಹಸೀಲ್ದಾರ ಇ.ಡಿ.ಭೃಂಗಿ, ನಿವೃತ್ತ ವಾರ್ತಾಧಿಕಾರಿ ಬಸವರಾಜ ಆಕಳವಾಡಿ, ಪಿಡಬ್ಲೂಡಿ ಇ.ಇ ಲಷ್ಕರಿ ನಾಯ್ಕ, ಜಡ್‌ಪಿ.ಇ., ಇ.ಇ ಟಿ.ಕೆ. ಭಜಂತ್ರಿ, ಡಿ.ಟಿ.ಪಿ.ಐ ಮಂಟೆ ಲಿಂಗಾಚಾರ್, ಜಿ.ಪಂ ಮಾಜಿ ಅಧ್ಯಕ್ಷ ರಾಮಣ್ಣ ಭಜಂತ್ರಿ, ಪಿ.ಎಸ್.ಐ ಗುರುಬಸವರಾಜ್, ಜಿ.ಪಂ. ಮಾಜಿ ಸದಸ್ಯ ದೇವೇಂದ್ರಪ್ಪ ತಳವಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದ್ಯಾಮಣ್ಣ ಜಮಖಂಡಿ, ಪ್ರಥಮ ದರ್ಜೆ ಗುತ್ತಿಗೆದಾರ ಮಂಜುನಾಥ್ ಕಡೆಮನಿ, ತಾ.ಪಂ ಮಾಜಿ ಅಧ್ಯಕ್ಷ ಶಿವಶಂಕರ್ ದೇಸಾಯಿ, ಪ್ರಜಾವಾಣಿ ವರದಿಗಾರ ಉಮಾಶಂಕರ್ ಹಿರೇಮಠ, ಸ.ನೌ. ಸಂಘದ ಜಿಲ್ಲಾಧ್ಯಕ್ಷ ಶಂಭುಲಿಂಗನಗೌಡ, ವಿನೂತನ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಸಿದ್ದಲಿಂಗಸ್ವಾಮಿ ಹಿರೇಮಠ, ಪ್ರಗತಿಪರ ರೈತರು ದೇವೇಂದ್ರಪ್ಪ ಬಳೂಟಗಿ, ಬಿಜೆಪಿ ಹಿರಿಯ ಮುಖಂಡ ಡಾ|| ಎಂ.ಬಿ ರಾಂಪೂರಿ, ಕನ್ನಡ ಸಾಂಸ್ಕೃತಿ ಇಲಾಖೆ ಸಾ.ನಿರ್ದೇಶಕ ಶ್ರೀಶೈಲ್ ಕರಿಶಂಕರಿ, ಹಿರಿಯ ಸಾಹಿತಿ ಮುನಿಯಪ್ಪ ಹುಬ್ಬಳ್ಳಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಸವನಗೌಡ ಪಾಟೀಲ್, ಜಯಕರ್ನಾಟಕ ಅಧ್ಯಕ್ಷ ವಿಜಯಕುಮಾರ ಕವಲೂರು, ಹಿರಿಯ ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿ, ಪ್ರಾ.ಶಾ. ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪ್ರಭು ಕಿಡದಾಳ ಭಾಗವಹಿಸುವರು.
ಅತಿಥಿಗಳಾಗಿ ಪ.ಪಂ ಅಧ್ಯಕ್ಷ ಸುರೇಶ್‌ಗೌಡ ಬಸಪ್ಪಗೌಡ, ಜಿ.ಪಂ ಮಾಜಿ ಸದಸ್ಯ ಮಹೇಶ್ ಹಳ್ಳಿ, ತಾ.ಪಂ ಮಾಜಿ ಅಧ್ಯಕ್ಷ ಬಸವಪ್ರಭು ಪಾಟೀಲ್, ಎ.ಪಿ.ಎಂ.ಸಿ ಅಧ್ಯಕ್ಷ ಹನುಮಂತಗೌಡ ಮಾಟೀಲ್, ಪ್ರಥಮ ದರ್ಜೆ ಗುತ್ತಿಗೆದಾರ ನವಲಿ ಹಿರೇಮಠ ಮತ್ತು ಸುರೇಶ್ ಬೂಮರಡ್ಡಿ, ಬಸವರಾಜ್ ಪುರದ್, ಅಕ್ಕಿ ಗಣಿ ಮಾಲೀಕರ ಸಂಘದ ಖಜಾಂಚಿ ಕಾಳಪ್ಪ, ಹಠವಾದಿ ಪತ್ರಿಕೆಯ ಸಂಪಾದಕ ಕೆ.ಭೋಜರಾಜ್ ಬಳ್ಳಾರಿ, ಯುವ ಕಾಂಗ್ರೇಸ್ ಪ.ಕಾರ್ಯದರ್ಶಿ ಭಗವಾನ್ ಫಹೀಮ್‌ಬಾಷಾ, ಅನ್‌ಮೋಲ್ ಟೈಮ್ಸ್ ವ್ಯವಸ್ಥಾಪಕ ಆರ್.ಎ.ಮೋಹನ್, ಕ.ರ.ವೇ ಅಧ್ಯಕ್ಷ ಅಜಿತ್ ಓಸ್ತುವಾಲ್, ಗುತ್ತಿಗೆದಾರರ ಸಂಘದ ಅಧ್ಯಕ್ಷ ಶಂಕರಪ್ಪ ದೊಡ್ಡಮನಿ, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ಶಶಿಧರ್, ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ನಾಗರಾಜ್ ಸುಣಗಾರ್, ಹಠವಾದಿ ಪತ್ರಿಕೆಯ ವರದಿಗಾರ ನಂದೀಶ್, ಉದಯ ಟಿವಿ ವರದಿಗಾರ ಮಾಹಾಂತೇಶ್ ಹಿರೇಮಠ, ಕನ್ನಡ ಪ್ರಭ ವರದಿಗಾರ ಅಲ್ಲಾವಿದ್ದೀನ್ ಎಂ.ವಿ, ಪ್ರಜಾವಾಣಿ ವದಿಗಾರ ಸುಭಾಷ್ ಭಜಂತ್ರಿ, ಸಿ.ಪಿ.ಐ ಗುರುಬಸವರಾಜ ನಲ್ಲೂರು, ಪಿ.ಎಸ್.ಐ ಹೆಚ್.ಎಸ್. ನಡುಗಡ್ಡಿ, ಪಿ.ಎಸ್.ಐ ಸುನೀಲ್ ನಾಯಕ್, ಜೆಡಿಎಸ್ ಮುಖಂಡ ಶಿವಪುತ್ರಪ್ಪ ಬೆಲ್ಲದ, ಪಿ.ಎಸ್.ಐ ಸಂಗಪ್ಪ ವಕ್ಕಳದ್, ಹಿರಿಯ ಸಾಹಿತಿ ಎಚ್.ಎಸ್.ಪಾಟೀಲ್, ಅನಂತಶಾರದ ಸಂಪಾದಕ ಎಂ.ಅನಂತಕುಮಾರ್, ಜನಸ್ನೇಹ ಎಂ.ಡಿ ಬಸವರಾಜ್ ತಮ್ಮಣ್ಣನವರ್, ವಾಣಿಜ್ಯೋಧ್ಯಮಿ ಶ್ರೀನಿವಾಸ್ ಗುಪ್ತ, ಆಗಮಿಸುವರು.
ಫೋಟೊ : ೨೦ಕೆಪಿಎಲ್-೦೧
--------------------------
ಕವಿ ಸಮ್ಮೇಳನದ ಕವಿಗೋಷ್ಠಿ
ಡಿ. ೨೫ ಬೆಳಿಗ್ಗೆ ೧೦ ಗಂಟೆಗೆ ಕವಿ ಸಮ್ಮೇಲನ ಕಾರ್ಯಕ್ರಮದ ಸಾನಿಧ್ಯವನ್ನು ಧಾರವಾಡ ಮನ್ಸೂರ ಮಠದ ಶ್ರೀ ಬಸವರಾಜ ದೇವರು ವಹಿಸುವರು. ಸಮ್ಮೇಳದ ಸರ್ವಾಧ್ಯಕ್ಷತೆ ಡಾ ಕೆ.ಬಿ.ಬ್ಯಾಳಿ, ಸಮಯ ಚಾನಲ್ ಸುದ್ದಿ ಮುಖ್ಯಸ್ಥ ಮಹಿಪಾಲರೆಡ್ಡಿ ಮುನ್ನೂರ್ ಉದ್ಘಾಟಿಸುವರು, ಪ್ರಶಸ್ತಿ ಪ್ರಧಾನ ಕ.ಸಾ.ಪ ತಾಲೂಕ ಅಧ್ಯಕ್ಷ ಜಿ.ಎಸ್.ಗೋನಾಳ, ಅಧ್ಯಕ್ಷತೆ ಹನುಮಂತಪ್ಪ ಅಂಡಗಿ.
ಅತಿಥಿಗಳಾಗಿ ಹಿರಿಯ ಸಾಹಿತಿ ಮಹಾಂತೇಶ್ ಮಲ್ಲಗೌಡರ್, ಗಂಗಾವತಿ ಸರ್ಕಾರಿ ಪ.ಪೂ ಶಾಲೆ ಪ್ರಾಧ್ಯಾಪಕಿ ಡಾ. ಮಮ್ತಾಜ್ ಬೇಗಂ, ಸಮಯ ಟಿವಿ ಗದಗ ಜಿಲ್ಲಾ ವದಿಗಾರ ಮಂಜುನಾಥ ಬೊಮ್ಮನಕಟ್ಟಿ, ಎನ್.ಜಡಿಯಪ್ಪ, ಕವಿ ಸಮೂಹ ಮುಖ್ಯಸ್ಥ ಸಿರಾಜ್ ಬಿಸರಳ್ಳಿ, ಕವಿ ಲೋಕ ಮುಖ್ಯಸ್ಥ ಪರಶುರಾಮ್‌ಪ್ರಿಯ, ಸಾಹಿತಿ ಎನ್.ಎಲ್. ಚನ್ನೇಗೌಡ, ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಶಿಕ್ಷಕರ ವಿಕಾಸ ಪರಿಷತ್ ಅಧ್ಯಕ್ಷ ಟಿ.ರಾಮಕೃಷ್ಣಯ್ಯ ಉಪಸ್ಥಿತರಿರುವರು.
ಭಾಗವಹಿಸುವ ಕವಿಗಳು ಶರಣಗೌಡ ಯರದೊಡ್ಡಿ, ಎಂ.ಡಿ.ಹುಸೇನ, ಶಿವಪ್ರಸಾದ ಹಾದಿಮನಿ, ಶರಣಪ್ಪ ಸಿಂಧೋಗಿ, ಈಶಪ್ಪ ಬಾಳಗಿ, ಎನ್. ಜಡೆಯಪ್ಪ, ಎಸ್.ಪಿ.ಗೊಂಡಬಾಳ, ವೈ.ಬಿ.ಜೂಡಿ, ನಟರಾಜ್ ಸೋನಾರ್, ಶಾಂತಾದೇವಿ ಹಿರೇಮಠ, ಅಂಬಿಕಾ ಬಾರಕೇರ, ಅಲ್ಲಾವಿದ್ದೀನ್ ಎಮ್ಮಿ, ಒಡ್ಡೆಸಾಬ್ ಹಾದಿಮನಿ, ಚಂದ್ರಕಾಂತ್ ಪಡೆಸೂರ್, ಎಸ್.ಎಂ.ಕಂಬಾಳಿಮಠ, ಸೋಮು ಲಷ್ಮೀಕ್ಯಾಂಪ, ಶಾಂತವೀರ ಬನ್ನಿಕೊಪ್ಪ, ಮಲ್ಲಪ್ಪ ಮೆಟ್ರಿ, ಸುಮತಿ ಹಿರೇಮಠ, ರವೀಂದ್ರ ಬಾಕಳೆ, ಗವಿಸಿದ್ದಪ್ಪ ಬಾರಕೇರ, ರುದ್ರಪ್ಪ ಬಂಡಾರಿ, ಬಿ.ಎಂ.ಹಳ್ಳಿ, ಜೆ.ಕೆ.ವೆಂಕಟೇಶ್, ಗೊರೂರು ಅನಂತರಾಜ, ಗೋರಹಳ್ಳಿ ಜಗದೀಶ, ಕೆಂಪ್ಲಾಪುರ ಮೋಹನ್, ಡಾ||ಕೆ.ಕೆ ಚಂದ್ರಹಾಸ ಗುಪ್ತ, ಗೋರುರು ಪಂಕಜ, ಎ.ಪಿ.ಅಂಗಡಿ, ಗುರುಶಾಂತ ಮನಗೂಳಿ, ಸತ್ಯನಾರಾಯಣ, ಕೊಟ್ರೇಶ ಎಸ್.ಉಪ್ಪಾರ, ಶ್ರೀನಿವಾಸ ಚಿತ್ರಗಾರ, ಲಕ್ಮೀದ್ಯಾವಪ್ಪ, ಉಮೇಶ್ ಯುಟಿವಿ ಭಾಗವಹಿಸುವರು. 
ಡಿ.೨೫ ಸಂಜೆ ೬ ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದ ಸಾನಿಧ್ಯವನ್ನು ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ವಹಿಸುವರು. ಶಾಸಕರಾದ ಸಂಗಣ್ಣ ಕರಡಿ, ಅಮೇಗೌಡ ಬಯ್ಯಾಪುರ, ಈಶಣ್ಣ ಗುಳಗಣ್ಣನವರ್, ಪರಣ್ಣ ಮನವಳ್ಳಿ, ಶಿವರಾಜ ತಂಗಡಗಿ, ವಿಧಾನಪರಿಷತ್ ಸದಸ್ಯ ಹಾಲಪ್ಪ ಆಚಾರ್, ಪಸ್ಥಿತರಿರುವರು.
ಅಧ್ಯಕ್ಷತೆಯನ್ನು ಸಿದ್ದಪ್ಪ ಹಂಚಿನಾಳ ವಹಿಸುವರು. ಅತಿಥಿಗಳಾಗಿ ಜಾತ್ಯತೀತ ಜನತಾದಳದ ಮುಖಂಡ ಅಮರ ಗುಂಡಪ್ಪ, ನಗರ ಅಭಿವೃದ್ದಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಕಳಕಪ್ಪ ಜಾಧವ್, ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ವಾರ್ತಾಧಿಕಾರಿ ಬಿ.ವಿ.ತುಕಾರಾಂ ರಾವ್, ಬಿ.ಸಿ.ಎಂ ಇಲಾಖೆಯ ಅಧಿಕಾರಿ ಬಿ.ಕಲ್ಲೇಶ್, ಬಿ.ಇ.ಓ. ಉಮೇಶ್ ಪೂಜಾರ್, ಯುವಜನ ಸೇವೆ ಮತ್ತು ಕ್ರೀಡಾಧಿಕಾರಿ ವಿ.ಎನ್.ಗಾಡಿ, ಪಾಂಡುರಂಗ ಓಲೇಕಾರ, ಆರ್.ಟಿ.ಒ. ಶಿವರಾಜ ಪಾಟೀಲ್, ಇಟಗಿ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಮತ್ತು ಇಟಗಿ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಮಹೇಶಬಾಬು ಸುರ್ವೆ ತಿಳಿಸಿದ್ದಾರೆ.

Advertisement

0 comments:

Post a Comment

 
Top