PLEASE LOGIN TO KANNADANET.COM FOR REGULAR NEWS-UPDATES


ಕಾತರಕಿ-ಗುಡ್ಲಾನೂರಿನ ಪದವಿಪೂರ್ವ ಕಾಲೇಜಿನಲ್ಲಿ   ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಮತಿ ಹಿರೇಮಠರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ದೊರಕಿದೆ.
                      ಹೈದ್ರಾಬಾದ್ ಕರ್ನಾಟಕದ ಕನ್ನಡ ಸಾಹಿತ್ಯದಲ್ಲಿ ಪ್ರಾದೇಶಿಕ ಸಂವೇದನೆ ಎಂಬ ವಿಷಯದ ಮೇಲೆ ಮಹಾಪ್ರಬಂಧವನ್ನು ಪ್ರಾಧ್ಯಾಪಕರಾದ ಡಾ.ಎ.ಸುಬ್ಬಣ್ಣ ರೈ ಅವರ ಮಾರ್ಗದರ್ಶನದಲ್ಲಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದರು.
                 ಪಿಎಚ್.ಡಿ ಪದವಿ ಪಡೆದ ಶ್ರೀಮತಿ ಸುಮತಿ ಹಿರೇಮಠರಿಗೆ   ಅಲ್ಲಮಪ್ರಭು ಬೆಟ್ಟದೂರ,ವಿಠ್ಠಪ್ಪ ಗೋರಂಟ್ಲಿ, ಡಾ.ಮಹಾಂತೇಶ ಮಲ್ಲನಗೌಡರ, ಡಾ.ವಿ.ಬಿ.ರಡ್ಡೇರ್, ಸಿರಾಜ್ ಬಿಸರಳ್ಳಿ, ಮಹೇಶ ಬಳ್ಳಾರಿ ಸೇರಿದಂತೆ ಕನ್ನಡನೆಟ್.ಕಾಂ ಕವಿಸಮೂಹ ಬಳಗ ಮತ್ತು ಸಕಲ ವಿದ್ಯಾರ್ಥಿ ಬಳಗ ಅಭಿನಂದಿಸಿದೆ.

Advertisement

0 comments:

Post a Comment

 
Top