PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ ಡಿ.  ಕೊಪ್ಪಳ ಜಿಲ್ಲೆ ಶೇಂಗಾ ಬೆಳೆಯಲ್ಲಿ ಹೆಚ್ಚಿನ ಪ್ರದೇಶವನ್ನು ಹೊಂದಿದ್ದು ಮುಂಗಾರು ಮತ್ತು ಬೇಸಿಗೆ ಎರಡು ಹಂಗಾಮಿನಲ್ಲಿ ಶೇಂಗಾ ಬೆಳೆಯಲಾಗುತ್ತಿದೆ ಆದರೆ, ಗುಣಮಟ್ಟದ ಬೀಜದ ಕೊರತೆ, ಹೆಚ್ಚು ಇಳುವರಿ ನೀಡುವ ಹೊಸ ತಳಿಗಳ ಕೊರತೆಯಿಂದಾಗಿ ರೈತರು ತಮ್ಮಲ್ಲಿಯೇ ಬೆಳೆದು ಉಳಿಸಿಕೊಂಡಿರುವ ಬೀಜಗಳ ಮೆಲೆ ಅವಲಂಬಿತರಿರುವದರಿಂದ ಪ್ರತಿ ವರ್ಷ ಇಳುವರಿಯು ಕುಂಟಿತಗೊಳ್ಳುತ್ತಿದೆ.
  ಮಾರುಕಟ್ಟೆಯಲ್ಲಿ ನಿಗದಿತ ತಳಿಗಳ ಬೀಜದ ಕೊರತೆ ಹಾಗೂ ಶೇಂಗಾ ಬೇಸಾಯದ ವೈಜ್ಞಾನಿಕ ಪದ್ದತ್ತಿಗಳ ಮತ್ತು ತಾಂತ್ರಿಕತೆಗಳ ಕೊರತೆಯಿಂದಾಗಿ ಹಾಗೂ ರೋಗ-ಕೀಟಗಳ ಬಾಧೆಯಿಂದಾಗಿ ರೈತರು ಪ್ರತಿ ವರ್ಷ ಶೇಂಗಾ ಬೇಸಾಯದಲ್ಲಿ ಹಾನಿಯನ್ನು ಅನುಭವಿಸುತ್ತಿದ್ದಾರೆ. ಈ ಸಮಸ್ಯಗಳಿಗೆ ಪರಿಹಾರ ಕಂಡುಕೊಳ್ಳಲು ಮತ್ತು ರೈತರಿಗೆ ಶೇಂಗಾ ಬೇಸಾಯದ ತಾಂತ್ರಿಕತೆಗಳ ಕುರಿತು ಜಿಲ್ಲೆಯ ಕೃಷಿ ವಿಸ್ತರಣಾ ಶಿಕ್ಷಣ ಘಟಕದಲ್ಲಿ ಸತತವಾಗಿ ೯ ತರಬೇತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಯಿತು. ಈ ತರಬೇತಿಗಳಲ್ಲಿ ಒಟ್ಟು ೬೫೦ ಜನ ಶೇಂಗಾ ಬೆಳೆಗಾರರು ಲಾಭ ಪಡೆದಿದ್ದು ೨೦೦೦ ಎಕರೆ ಪ್ರದೇಶದಲ್ಲಿ ಹೊಸ ತಾಂತ್ರಿಕತೆಗಳನ್ನು ರೈತರು ಬೇಸಿಗೆ ಶೇಂಗಾ ಬೇಸಾಯದಲ್ಲಿ ಅಳವಡಿಸಿಕೊಳ್ಳಲಿದ್ದಾರೆ. ಕೃಷಿ ವಿಸ್ತರಣಾ ಶಿಕ್ಷಣ ಘಟಕದ ಸದರಿ ತರಬೇತಿಗಳಲ್ಲಿ ಭಾಗವಹಿಸಿದ ೫೦೦ ಜನ ಶೇಂಗಾ ಬೆಳೆಗಾರರಿಗೆ ಕೃಷಿ ವಿಶ್ವವಿದ್ಯಾಲಯದ ಸಮಗ್ರ ಬೆಳೆ ನಿರ್ವಹಣಾ ಪದ್ದತ್ತಿಗಳು ಯೋಜನೆಯಡಿ ಪ್ರಾಯೋಗಿಕವಾಗಿ ಶೇಂಗಾ ಬೆಳೆಯಲ್ಲಿ ಕೆಲ ಪರಿಕರಗಳನ್ನು ಒದಗಿಸಲಾಗಿದ್ದು ರೈತರು ಇವುಗಿಳಿಂದಾಗುವ ಲಾಭಗಳನ್ನು ತಿಳಿಯಲು ತರಬೇತಿಗಳಲ್ಲಿ ಮನವರಿಕೆ ಮಾಡಲಾಗಿದೆ. ಪ್ರಸಕ್ತ ಸಾಲಿನಿಂದ ಜಿಲ್ಲೆಯಲ್ಲಿ ಮೂರು ಹೊಸ ಶೇಂಗಾ ತಳಿಗಳನ್ನು ಉPಃಆ-೪, ಉPಃಆ-೫ ಮತ್ತು ಖ-೮೮೦೮ ಪರಿಚಯಿಸಲು ಪ್ರಾತ್ಯೆಕ್ಷಿಕೆಗಳನ್ನು ಆಯ್ದ ಗ್ರಾಮಗಳಲ್ಲಿ ರೈತರ ಸಮ್ಮುಖದಲ್ಲಿ ಹಮ್ಮಿಕೊಂಡಿದೆ. ಸದರಿ ಪ್ರಾತ್ಯೆಕ್ಷಿಕೆಗಳಿಂದ ಮುಂಗಾರು ಹಂಗಾಮಿನಲ್ಲಿ ೧೫೦ ಎಕರೆ ಪ್ರದೇಶದಲ್ಲಿ ಬೇಸಾಯಕ್ಕೆ ಹೊಸ ತಳಿಗಳ ಬೀಜದೊರಕಿಸುವ ಹಿನ್ನಲೆಯಲ್ಲಿ ಈ ಪ್ರಾತ್ಯೆಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. 

ದಿನಾಂಕ ೨೭-೧೨-೨೦೧೧ರಂದು ನಡೆದ ೯ನೇಯ ತರಬೇತಿಯಲ್ಲಿ ಹ್ಯಾಟಿ ಗ್ರಾಮದ ೧೦೮ ಜನ ರೈತರು ಭಾಗವಹಿಸಿದ್ದರು. ತರಬೇತಿಯ ಉದ್ಘಾಟನೆಯಲ್ಲಿ ವಿಸ್ತರಣಾ ಮುಂದಾಳು ವಿ ಆರ್. ಜೋಶಿ ಹಾಗೂ ತಾಲೂಕು ಕೃಷಿಕ ಸಮಾಜದ ಸದಸ್ಯರುಗಳಾದ ದೇವಪ್ಪ ಬಹದ್ದೂರಬಂಡಿ, ಗ್ಯಾನಪ್ಪ ಮತ್ತು ಚನ್ನವೀರಗೌಡ ಇವರುಗಳು ರೈತರಿಗೆ ತರಬೇತಿಯಲ್ಲಿನ ಹೊಸ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಪಡೆದು ಅವುಗಳ ಸದುಪಯೋಗ ಪಡೆಯಲು ಕೋರಿದರು. ಶೇಂಗಾ ಬೆಳೆಯ ವಿವಿಧ ತಳಿಗಳಬಗ್ಗೆ ಡಾ: ಮಲ್ಲಿಕಾರ್ಜುನ ಕೆಂಗನಾಳ ಪರಿಚಯಿಸಿದರು ಹಾಗೂ ರೋಗಗಳ ನಿರ್ವಹಣೆಯ ಬಗ್ಗೆ ಮತ್ತು ಲಘುಪೋಶಕಾಂಶಗಳ ಬಳಕೆಯ ಬಗ್ಗೆ ತಿಳಿಸಿದರು.  ಯುಸೂಫಲಿ ನಿಂಬರಗಿ ಮಾನತಾಡಿ ವಿವಿಧ ಬೇಸಾಯ  ಪದ್ದತ್ತಿಗಳ ಬಗ್ಗೆ ವಿವಿರಿಸಿದರು. ಕಿರಣ ಕುಮಾರ ಮಾತನಾಡಿ ಶೇಂಗಾ ಬೆಳೆಯಲ್ಲಿ ಕೀಟನಿರ್ವಹಣೆಯ ಬಗ್ಗೆ ರೈತರೊಂದಗೆ ಚರ್ಚಿಸಿದರು. ತರಬೇತಿಯ ಸಮಾರೋಪದಲ್ಲಿ ಜಿಲ್ಲೆಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಿ. ಬಿ. ಬಾಲರೆಡ್ಡಿ ರೈತರನ್ನು ಉದ್ದೇಶಿಸಿ ಮಾತನಾಡಿ ಶೇಂಗಾ ಬೆಳೆಯಲ್ಲಿ ಲಘು ಪೋಶಕಾಂಶಗಳನ್ನು ಸೂಕ್ತವಾಗಿ ಬಳಸಲು ಸಲಹೆ ನೀಡಿದರು. ಬೀಜೋಪಚಾರದ ಬಗ್ಗೆ ವಿವರಿಸಿ ರೈತರು ಕೃಷಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕೃಷಿ ವಿಸ್ತರಣಾ ಶಿಕ್ಷಣ ಘಟಕಕ್ಕೆ ಭೇಟಿ ನೀಡಿ ಕೃಷಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಒತ್ತು ನೀಡಿದರು. 

Advertisement

0 comments:

Post a Comment

 
Top