PLEASE LOGIN TO KANNADANET.COM FOR REGULAR NEWS-UPDATES


ಸುಬ್ರಹ್ಮಣ್ಯ : ಇಲ್ಲಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜಾತ್ರಾ ಸಮಯದಲ್ಲಿ ಭಕ್ತರು ಸ್ವಇಚ್ಛೆಯಿಂದ ನಡೆಸುವ `ಮಡೆಸ್ನಾನ` (ಬ್ರಾಹ್ಮಣರು ಉಂಡ ಎಲೆಯ ಮೇಲೆ ಉರುಳು ಸೇವೆ) ನಿಷೇಧಿಸಲಾಗಿದೆ ಎಂದು ದೇವಳದ ಆಡಳಿತ ಸಮಿತಿ ತಿಳಿಸಿದೆ.

`ಮಡೆ-ಮಡೆಸ್ನಾನ` ವಿರುದ್ಧ ಸಾರ್ವಜನಿಕ ವಲಯದಿಂದ ದೂರು, ಆಕ್ಷೇಪ ಬಂದ ಹಿನ್ನೆಲೆಯಲ್ಲಿ ಮತ್ತು ದೇವಸ್ಥಾನದ ಸೇವಾ ಪಟ್ಟಿಯಲ್ಲಿ ಈ ಸೇವೆ ಸೇರದೇ ಇರುವುದರಿಂದ ಇನ್ನು ಮುಂದಕ್ಕೆ ಭಕ್ತರು ಶ್ರೀ ಕ್ಷೇತ್ರದಲ್ಲಿ ಈ ಪದ್ಧತಿ ಮುಂದುವರಿಸದಂತೆ  ಕೋರಲಾಗಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.

Advertisement

0 comments:

Post a Comment

 
Top