PLEASE LOGIN TO KANNADANET.COM FOR REGULAR NEWS-UPDATES




ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುತ್ತಿರುವ ಈ ವೇದಿಕೆಯು ಎಲ್ಲರಿಗೂ ಮಾದರಿಯಾಗಿದೆ. ಕವಿಸಮಯ ಕೆಲಸ ಪ್ರಶಂಸನೀಯ, ಯಾವುದೇ ಆಡಂಭರವಿಲ್ಲದೇ ಸರಳವಾಗಿ ಎಲ್ಲರೂ ಕಲೆತು ಸಾಹಿತ್ಯಿಕ ಚರ್ಚೆ ನಡೆಸುವುದು, ಕವಿಗೋಷ್ಠಿ,ಕಥಾವಾಚನ ಹಮ್ಮಿಕೊಳ್ಳುತ್ತಿರುವುದರ ಕುರಿತು ಬೇರೆ ಜಿಲ್ಲೆಗಳವರು ಸಹ ಕವಿಸಮಯದ ಬಗ್ಗೆ ಪ್ರಶಂಸೆಯ ಮಾತನಾಡುತ್ತಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಹೇಳಿದರು. ಅವರು ಭಾಗ್ಯನಗರದ ಯೋಗಾಶ್ರಮದಲ್ಲಿ ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೩೮ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಿಂದ ಕಾವ್ಯ ಕಮ್ಮಟ ಹಮ್ಮಿಕೊಂಡು ಯುವ ಕವಿಗಳಿಗೆ, ಕವಿಯತ್ರಿಯರಿಗೆ ಹೆಚ್ಚಿನ ಮಾರ್ಗದರ್ಶನ ನೀಡಲಾಗುವುದು. ಇಂತಹ ಸಾಹಿತ್ಯಿಕ ಚಟುವಟಿಕೆಗಳಿಗೆ ಕಸಾಪ ಯಾವತ್ತೂ ಬೆಂಬಲಿಸುತ್ತದೆ ಎಂದರು.

ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ಎ.ಪಿ.ಅಂಗಡಿ-ಕಾಯಿಲೆ, ಎನ್.ಜಡೆಯಪ್ಪ- ಒಳ ಬರಬೇಡ, ಸರೋಜಾ ಬಾಕಳೆ- ಹಿಂಗ್ಯಾಕೈತಿ, ಡಾ.ಮಹಾಂತೇಶ ಮಲ್ಲನಗೌಡರ-ನಶ್ವರ ನಿಲಯ, ಜಿ.ಎಸ್.ಗೋನಾಳ-ನೆಲೆ,ಬೆಲೆ, ವಿಠ್ಠಪ್ಪ ಗೋರಂಟ್ಲಿ-ಇಂಥವನ್ನೊಬ್ಬ, ನನ್ನವ್ವ, ವೀರಣ್ಣ ಹುರಕಡ್ಲಿ- ಜವರಾಯನ ಅಟ್ಟಹಾಸ,ಹೆಚ.ಎಸ್.ವಾಲ್ಮೀಕಿ- ಬರಲಿರುವ ವರ್ಷಗಳು,ಪ್ರಮೋದ ತುರ್ವಿಹಾಳ- ಮಗು, ಡಾ.ವಿ.ಬಿ.ರಡ್ಡೇರ-ಇವಳು ಪ್ರತಿಭಾ, ಸುಮತಿ ಹಿರೇಮಠ- ಭಾಬ ಬಿಂಬ,ಸಿರಾಜ್ ಬಿಸರಳ್ಳಿ - ಬಿಕ್ಕಳಿಕೆ, ನಟರಾಜ್ ಸವಡಿ-ಬಾಲ್ಯ ಕವನಗಳನ್ನು ವಾಚನ ಮಾಡಿದರು. ನಂತರ ಕಾವ್ಯದ ಕುರಿತು ಚರ್ಚೆ ನಡೆಯಿತು. ಸಿರಾಜ್ ಬಿಸರಳ್ಳಿ ಮಾತನಾಡಿ ಕವಿಸಮೂಹ ತನ್ನ ಮಿತಿಯಲ್ಲಿ ಕಾರ್‍ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಕಸಾಪದಂತಹ ಅಧಿಕೃತ ಸಂಸ್ಥೆಗಳು ಸಾಹಿತ್ಯಿಕ ಚರ್ಚೆಗಳನ್ನು, ಕಥೆ,ಕಾವ್ಯಗಳ ಬಗ್ಗೆ ಕಮ್ಮಟಗಳನ್ನು ಹಮ್ಮಿಕೊಳ್ಳಲಿ ಯುವ ಸಾಹಿತಿಗಳಿಗೆ ಮಾರ್ಗದರ್ಶನ ನೀಡುವಂತಾಗಲಿ ಎಂದರು.

ಕಾರ್‍ಯಕ್ರಮದಲ್ಲಿ ಮಹೇಶ ಬಳ್ಳಾರಿ, ಹನುಮಂತಪ್ಪ ಅಂಡಗಿ, ಶ್ರೀನಿವಾಸ ಚಿತ್ರಗಾರ,ಎಚ್.ಎಸ್.ಉಮರಿ, ಎಂ.ಎಚ್.ವಾಲ್ಮಿಕಿ, ಅನಸೂಯಮ್ಮ ವಾಲ್ಮಿಕಿ, ಕೆ.ಎಂ.ಹುನಗುಂದ , ಮುನೀರ್ ಸಿದ್ದಿಕಿ ಹಾಗೂ ಯೋಗಾಶ್ರಮದ ಸದಸ್ಯರು ಸೇರಿದಂತೆ ಇತರರು ಉಪಸ್ಥಿರಿದ್ದರು. ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Advertisement

0 comments:

Post a Comment

 
Top