PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ, ಜ. ೧೬. ಕೊಪ್ಪಳದ ಖ್ಯಾತ ಶಿಲ್ಪ ಕಲಾವಿದ ಪ್ರಕಾಶ ಶೇಖರಪ್ಪ ಶಿಲ್ಪಿಯವರಿಗೆ ಮಂತ್ರಾಲಯದ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿಯನ್ನು ಈಚೆಗೆ ಪ್ರದಾನ ಮಾಡಲಾತು.
ಪ್ರಶಸ್ತಿಯನ್ನು ಶ್ರೀ ಶ್ರೀ ಸುತೀಂದ್ರ ಶ್ರೀಪಾದಂಗಳವರು ಶ್ರೀ ಮಂತ್ರಾಲು ರಾಘವೇಂದ್ರ ಮಠರವರು ಪ್ರಕಾಶ ಶಿಲ್ಪಿಯವರ ಶಿಲ್ಪ ಕಲಾ ಸೇವೆ ಹಾಗೂ ಆಂಜನೇಯ ಭಕ್ತಿ ಸೇವೆಗೆ ಮೆಚ್ಚಿ ಮಠದಿಂದ ೨೦೧೦ ನೇ ಸಾಲಿನ ಈ ಪ್ರತ್ಟಿತ ಪ್ರಶಸ್ತಿಯನ್ನು ಕೊಡಮಾಡಲಾಗಿದೆ. ಪ್ರಶಸ್ತಿ ಜೊತೆ ಬೆಳ್ಳಿ ಪದಕ, ಬೆಳ್ಳಿ ತಂಬಿಗೆ, ಬೆಳ್ಳಿ ಪೂಜಾ ಗ್ಲಾಸ್ ಹಾಗೂ ನಗದು ಪುರಸ್ಕಾರ ಹೊಂದಿದೆ ಎಂದು ಶ್ರೀ ಸಹಸ್ರಾಂಜನೇಯ ದೇವಸ್ಥಾನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಅಶೋಕ ಬಜಾರಮಠ ಹಾಗೂ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದು ಪ್ರಕಾಶರವರಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

Advertisement

0 comments:

Post a Comment

 
Top