PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ಬಡವರಿಗೆ ತಲುಪಬೇಕಾದ ಪಡಿತರ ವಸ್ತುಗಳು, ಸೀಮೆ ಎಣ್ಣೆ, ಅಕ್ಕಿ ಬೇಳೆಗಳು ಬ್ಲಾಕ್ ಮಾರ್ಕೆಟ್ ನಲ್ಲಿ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಆಹಾರ ಇಲಾಖೆ ನಿರ್ದೇಶಕರೇ ಕಾರಣ ಅವರನ್ನು ತಕ್ಷಣ ಅಮಾನತುಗೊಳಿಸಬೇಕೆಂದು ಆಹಾರ ಹಕ್ಕು ರಕ್ಷಣಾ ವೇದಿಕೆ ಆಗ್ರಹಿಸಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ವೇದಿಕೆಯ ಬಸವರಾಜ ಶೀಲವಂತರ, ಜೆ.ಭರದ್ವಾಜ ಹಾಗು ಇತರರು ಬಡವರಿಗೆ ಸಿಗಬೇಕಾದ ಪಡಿತರ ವಸ್ತುಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಸದಾಶಿವ ಮರ್ಜಿ ಸಹಶಾಮೀಲಾಗಿದ್ದಾರೆ ಇವರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

Advertisement

0 comments:

Post a Comment

 
Top