PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-12- ಇಂದು ನಗರದ ಗವಿಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಕೊಪ್ಪಳ ಪದವಿ ಪೂರ್ವ ಶಿಕ್ಷಣ ಇಲಾಖೆ ಕೊಪ್ಪಳ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಕೊಪ್ಪಳ ಹಾಗೂ ಸಂದೇಶ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮುನಿರಾಬಾದ್ ಇವರ ಸಂಯುಕ್ತ ಆಶ್ರಯದಲ್ಲಿ ಬಾಲ್ಯ ವಿವಾಹ ನಿಷೇದ ಕುರಿತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಪರಿಕ್ಷತರಾಜ್ ಪ್ರಾಚಾರ್ಯರು ಶ್ರೀ ಗವಿಸಿದ್ದೇಶ್ವರ ಪದವಿ ಪೂರ್ವ ಕಾಲೇಜು ಕೊಪ್ಪಳರವರು ಮಾತನಾಡುತ್ತಾ ಗಂಡಿಗೆ ೨೧ ವರ್ಷ ಹಾಗೂ ಹೆಣ್ಣಿಗೆ ೧೮ ವರ್ಷ ಕನಿಷ್ಟ ವರ್ಷ ಆಗಿರಬೇಕು ಇದರ ಒಳಗಡೆ ಮದುವೆಯಾದಲ್ಲಿ ಕಾನೂನು ದೃಷ್ಟಿಯಿಂದ ಅವರಿಗೆ ದಂಡ ಮತ್ತು ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ತಿಳಿಸಿದರು. ಜೋ
ಈಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಅಶೋಕ, ಶ್ರೀ ಗವಿಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನ ಕನಿಷ್ಠ ೮೦ ವಿದ್ಯಾರ್ಥಿಗಳು ಹಾಜರಿದ್ದರು. ಸ್ವಾಗತ ವಜೀರಸಾಬ್ ತಳಕಲ್ ನೇರವೆರಿಸಿದರು, ಪ್ರಾರ್ಥನೆ ಗೀತೆಯನ್ನು ಕುಮಾರಿ ರುಕ್ಮಣಿ, ವಂದನಾರ್ಪಣೆಯನ್ನು ಅಶೋಕ ಉಪನ್ಯಾಸಕರು ನೆರವೆರಿಸಿದರು.
ತೆಗೆ ಮಕ್ಕಳ ಸಹಾಯವಾಣಿ ೧೦೯೮ ಗೆ ಕರೆಮಾಡಲು ತಿಳಿಸಿದರು. ಹೆಚ್.ಎಸ್ ಹೊನ್ನೂಂಚಿ ವಿಕೇಂದ್ರಿಕೃತ ತರಬೇತಿ ಸಂಯೋಜಕರು ಎಸ.ಐ.ಆರ್.ಡಿ ಮೈಸೂರ ಮಾತನಾಡುತ್ತಾ ಬಾಲ್ಯವಿವಾಹ ನಿಷೇದ ಕಾಯ್ದೆಯ ಪ್ರಮುಖ ಅಂಶಗಳು ಹಾಗೂ ಮಕ್ಕಳ ಹಕ್ಕುಗಳು, ಬಾಲ್ಯವಿವಾಹ ನಿಷೇದ ಅಧಿಕಾರಿUಳ ಜವಬ್ದಾರಿಯ ಬಗ್ಗೆ ತಿಳಿಸಿದರು. ವಜೀರಸಾಬ್ ತಳಕಲ್ ಯೋಜನಾಧಿಕಾರಿಗಳು (ಯುಜಿಡಿ ) ವಿಭಾಗ ನಗರಸಭೆ ಕೊಪ್ಪಳ ರವರು ಮಾತನಾಡುತ್ತಾ ಬಾಲ್ಯ ವಿವಾಹ ದೈಹಿಕ ಮಾನಸಿಕ ಬೆಳವಣಿಗೆಗೆ ಕುಂಟಿತಗೊಳ್ಳುತ್ತದೆ, ವಿದುವೆಯರ ಸಂಖ್ಯೆ ಹೆಚ್ಚಾಗುತ್ತದೆ, ಅಭಿವೃದ್ಧಿ ಕುಂಟಿತಗೊಳ್ಳುತ್ತದೆ ಗ್ರಾಮೀಣ ಭಾಗದಲ್ಲಿ ಬಾಲ್ಯವಿವಾಹ ತಡೆಗಟ್ಟಲು ಜಾಗೃತಿ ವಹಿಸಬೇಕು.

Advertisement

0 comments:

Post a Comment

 
Top