PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ೨೯- ಮನುಷ್ಯನಿಗೆ ಕಲಿಯುಗದಲ್ಲಿ ನೆಮ್ಮದಿ ಸಿಗುತ್ತಿಲ್ಲ. ಸತ್ಸಾಂಗ ಹಾಗೂ ಭಗವಂತನ ನಾಮ ಸ್ಮರಣೆಯಿಂದ ಮಾತ್ರ ಮಾನಸಿಕ ನೆಮ್ಮದಿ ಸಾದ್ಯವೇಂದು ಕರ್ಕಿಹಳ್ಳಿ ಗುರುಮಹಾರಾಜ ಶ್ರೀ ಸುರೇಶ ಪಾಟೀಲ ಹೇಳಿದರು.
ಅವರು ಗುರುವಾರದಂದು ನಗರದ ವಿಠ್ಠಲ ಕೃಷ್ಣ ದೇವಸ್ಥಾನದಲ್ಲಿ ಜರುಗುತ್ತಿರುವ ೫೬ನೇ ಶ್ರೀ ಶಿವಚಿದಂಬರ ನಾಮ ಅಖಂಡ ವೀಣಾ ಜಪ ಸಪ್ತಾಹದ ಸಾನಿಧ್ಯವಹಿಸಿ ಆಶಿರ್ವಚನ ನೀಡುತ್ತಿದ್ದರು.
ಕಲಿಯುಗದಲ್ಲಿ ಬಂಗಾರ,ಬೆಳ್ಳಿ,ಮನೆ ಸೇರಿದಂತೆ ಎಲ್ಲ ವೈಭೊಗವನ್ನು ಸಹ ಮನುಷ್ಯ ಪಡಿಯಬಲ್ಲ ಆದರೆ ನೆಮ್ಮದಿ ಯಿಂದ ಮಾತ್ರ ಇರಲೂ ಸಾಧ್ಯವಿಲ್ಲ ಭಗವಂತನನಾಮ ಸ್ಮರಣೆಯೊಂದೇ ಅ
ದಕ್ಕೆ ಮುಕ್ತಿ ಮಾರ್ಗ ಎಂದು ಹೇಳಿದರು.
ರಾಮಾಯಣದಲ್ಲಿ ರಾಮ-ಸೀತೆ ವನವಾಸ, ದೇವಾನುದೇವತೆಗಳಿಗೆ ಕಷ್ಟಗಳುತಪ್ಪಿಲ್ಲ ಮನುಷ್ಯ ತನ್ನ ಕರ್ಮಾನುಸಾರ ಫಲಾ-ಫಲ ಅನುಭವಿಸಬೇಕು ಸತ್ಯದಕಡೆ ನಡೆಯಲು ಸತ್ಸಾಂಗದಿಂದ ಮಾತ್ರ ಸಾಧ್ಯ ಎಂದರು.
 ಶ್ರೀ ಶಿವಚಿಂದಬರೇಶ್ವರನು ಪ್ರತಿಯೊಬ್ಬರ ಮನಮಂದಿರದಲ್ಲಿ ನೆಲೆಸಿದ್ದಾರೆ ಭಗವಂತ ನಾಮ ಸ್ಮರಣೆ ,ಚಿದಂಬರ ಜಪ ಭಜನೆ ಸರ್ವ ಕಷ್ಟಗಳನ್ನು ದೂರ ಮಾಡಲಿದೆ. ಅಖಂಡ ವೀಣಾ ಸಪ್ತಾಹದ ನೂಲಕ ಚಿದಂಬರ ಸ್ಮರಣೆ ಹಾಗೂ ಆತನ ಪವಾಡ ಭಕ್ತರ ಮನ ತಲುಪಲಿದೆ ಎಂದರು.

Advertisement

0 comments:

Post a Comment

 
Top