PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-19- ತಾಲೂಕಿನ ಕಾತರಕಿ ಗ್ರಾಮದಲ್ಲಿ ಶ್ರೀ ತಾಯಮ್ಮದೇವಿ ಭಜನಾ ಸಂಘದಿಂದ ನವರಾತ್ರಿ ಉತ್ಸವದ ಅಂಗವಾಗಿ ಶ್ರೀದೇವಿ ಪುರಾಣ ಮಹಾ ಮಂಗಲ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬುಧವಾರ ದಿನಾಂಕ : ೨೧-೧೦-೨೦೧೫ ರಂದು ಅಷ್ಠಮಿ ಪೂಜಾ ಕಾರ್ಯಕ್ರಮ ರಾತ್ರಿ ೮ ಗಂಟೆಗೆ ವಿವಿಧ ಭಜನಾ ತಂಡದವರಿಂದ ತತ್ವ ಪದಗಳು ಗುರುವಾರ ದಿನಾಂಕ ೨೨.೧೦.೨೦೧೫ ರಂದು ಬೆಳಿಗ್ಗೆ ಬ್ರಾಹ್ಮಿ ಮೂಹರ್ತದ
ಲ್ಲಿ ಮಹಿಳೆಯರಿಂದ ಕುಂಬಮೇಳ ನಂತರ ಶ್ರೀ ತಾಯಮ್ಮೇವಿಗೆ ಕುಂಭಾಭಿಷೇಕ ಸಹಸ್ರ ಬಿಲ್ವಾರ್ಚನೆ ನೆರವೆರಿದ ನಂತರ ೧೧:೩೦ ಗಂಟೆಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ. ಶ್ರೀ ದೇವಿ ಪುರಾಣ ಪ್ರವಚನಕಾರರಾಗಿ ಡಾ.ಶಿವಯ್ಯ ಗಂಧದಮಠ, ಸಂಗೀತಗಾರರಾಗಿ ಶಾಮಣ್ಣ ಮಡಿವಾಳರ, ನಿರ್ವಹಿಸಲಿದ್ದಾರೆ. ಕಾರ್ಯಕ್ರಮದ ಸಾನಿಧ್ಯವನ್ನು ಹಿರೆಸಿಂದೋಗಿ ಕಪ್ಪತಮಠದ ಶ್ರೀ ಮ.ನಿ.ಪ್ರ.ಸ್ವ.ಜಗದ್ಗುರು ಚಿದಾನಂದ ಮಹಾಸ್ವಾಮಿಗಳು, ಷಟಸ್ಥಲ ಬ್ರಹ್ಮಿ ೧೦೦೮ಶ್ರೀ ಸಿದ್ದೇಶ್ವರ ಮಹಾಸ್ವಾಮಿಜಿ ಮೈನಳ್ಳಿ-ಬಿಕನಳ್ಳಿ ಸಾನಿಧ್ಯ ವಹಿಸುವರು. ಅಧ್ಯಕ್ಷತೆಯನ್ನು ಜಿ.ಪಂ ಮಾಜಿ ಅಧ್ಯಕ್ಷ ಹೆಚ್.ಎಲ್. ಹಿರೇಗೌಡ್ರ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದರಾದ ಸಂಗಣ್ಣ ಕರಡಿ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಜಿ.ಪಂ ಸದಸ್ಯ ಭಾಗಿರಥಿ ಶಂಕರಗೌಡ. ತಾ.ಪಂ ಸದಸ್ಯ ಮುದೆಗೌಡ ಪಾಟೀಲ, ರಾಯಚೂರು,ಬಳ್ಳಾರಿ, ಕೊಪ್ಪಳ ಕೆ.ಎಮ್.ಎಫ್. ಅಧ್ಯಕ್ಷ ವೆಂಕನಗೌಡ ಹಿರೇಗೌಡ್ರ, ಗ್ರಾ,ಪಂ ಅಧ್ಯಕ್ಷೆ ಮಲ್ಲಮ್ಮ ಮಲ್ಲಪ್ಪ ಮಹಾಂತಪ್ಪನವರ, ಉಪಾಧ್ಯಕ್ಷ ಬಸವರಾಜ ಅಂಗಡಿ, ಮತ್ತಿತ್ತರರು ಆಗಮಿಸಲಿದ್ದಾರೆ.

Advertisement

0 comments:

Post a Comment

 
Top